ಕೆರೆ ದಾಟುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ತಾಯಿ ಮಗಳು ಸಾವು, ಅದೃಷ್ಟವಶಾತ್ ಮಗ ಪಾರು | JANATA NEWS
ಚಿಕ್ಕಮಗಳೂರು : ಕೆರೆ ದಾಟುತ್ತಿದ್ದಾಗ ಆಯತಪ್ಪಿ ನೀರಿಗೆ ಬಿದ್ದು ತಾಯಿ, ಮಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕು ವಡ್ಡರಹಳ್ಳಿ ಕೆರೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಜತೆಗಿದ್ದ ಮಗ ಪಾರಾಗಿದ್ದಾನೆ.
ಶೋಭಾ (40) ಮತ್ತು ಆಕೆಯ ಪುತ್ರಿ ವರ್ಷ (8) ಸಾವಿಗೀಡಾದವರು. ಜತೆಗಿದ್ದ ಮಗ ಚೇತನ್ ಪಾರಾಗಿದ್ದಾನೆ.
ತಾಯಿ, ಮಗಳು ಮತ್ತು ಮಗ ದನ ಮೇಯಿಸಲು ಹೋಗಿದ್ದರು. ಈ ವೇಳೆ ಕೆರೆ ದಾಟುವಾಗ ಪುತ್ರಿ ವರ್ಷಾ ಆಯತಪ್ಪಿ ನೀರಿಗೆ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸಲು ಮುಂದಾದ ತಾಯಿ ಸಹ ನೀರುಪಾಲಾಗಿದ್ದಾರೆ. ಅದೃಷ್ಟವಶಾತ್ ತಾಯಿ ಜೊತೆಯಲ್ಲಿದ್ದ ಮಗ ಚೇತನ್ ಪಾರಾಗಿದ್ದಾನೆ.
ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :While crossing the lake, Ayatappi fell into the water and the mother and daughter died, luckily the son escaped