ಗ್ರಾಮ ಪಂಚಾಯತಿ ನಿರ್ಲಕ್ಷ, ಗುಂಡಿಗೆ ಬಿದ್ದು ಬಾಲಕರಿಬ್ಬರು ಸಾವು | JANATA NEWS
ರಾಯಚೂರು : ಗ್ರಾಮ ಪಂಚಾಯತಿ ದಿವ್ಯ ನಿರ್ಲಕ್ಷ್ಯಕ್ಕೆ ಮಕ್ಕಳು ಬಲಿಯಾಗಿದ್ದು, ಗುಂಡಿಗೆ ಬಿದ್ದು ಇಬ್ಬರು ಬಾಲಕರು ಸಾವಿಗೀಡಾದ ಪ್ರಕರಣ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬ್ಯಾಗವಾಟದ ಗ್ರಾಮದಲ್ಲಿ ನಡೆದಿದೆ.
ಅಜಯ್ (8) ಹಾಗೂ ಯಲ್ಲಾಲಿಂಗ (6) ಆಟವಾಡಲು ಹೋದಾಗ ಕಾಲು ಜಾರಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಹಿನ್ನೆಲೆ ತೋಡಿದ್ದ ಗುಂಡಿಯನ್ನು ಎರಡ್ಮೂರು ತಿಂಗಳಾಗಿದ್ರೂ ಮುಚ್ಚಿರಲಿಲ್ಲ. ಗುಂಡಿ ಪಕ್ಕದಲ್ಲಿ ಪೈಪ್ ಲೈನ್ ಕಟ್ ಆಗಿರುವುದರಿಂದ ಗುಂಡಿಯಲ್ಲಿ ಪೈಪ್ ಲೈನ್ ನೀರು ತುಂಬಿತ್ತು.
ಈ ಮಧ್ಯೆ, ನಿನ್ನೆ ಸಂಜೆ ಯಲ್ಲಾಲಿಂಗಪ್ಪ ಹಾಗೂ ಅಜಯ್ ಎಂಬಿಬ್ಬರು ಬಾಲಕರು ಆಡವಾಡಲು ಹೋಗಿದ್ದರು. ಆಡವಾಡೋ ವೇಳೆ ನೀರುತುಂಬಿಕೊಂಡಿದ್ದ ಗುಂಡಿಯಲ್ಲಿ ಅಜಯ್ ಮೊದಲು ಬಿದ್ದಿದ್ದಾನೆ. ಆಗ ಅಜಯ್ ನನ್ನ ರಕ್ಷಿಸಲು ಹೋಗಿ, ಮತ್ತೊಬ್ಬ ಬಾಲಕ ಯಲ್ಲಾಲಿಂಗ ಕೂಡ ಗುಂಡಿ ಪಾಲಾಗಿದ್ದಾನೆ.
ಆಟವಾಡಲು ಹೋದ ಮಕ್ಕಳು ರಾತ್ರಿಯಾದ್ರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹುಟುಕಾಟ ನಡೆಸಿದ್ದಾರೆ. ಕೊನೆಗೆ ಗುಂಡಿಯಲ್ಲಿ ಕಟ್ಟಿಗೆ ಇಟ್ಟು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.