ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಸಚಿವ ಆರಗ ಜ್ಞಾನೇಂದ್ರ | JANATA NEWS
ಬೆಂಗಳೂರು : ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಲಾಧಾರಿಯಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ಸ್ವಾಮಿ ದರ್ಶನ ಪಡೆದಿದ್ದಾರೆ.
6 ವರ್ಷಗಳ ಹಿಂದೆ ಶಬರಿಮಲೆ ಯಾತ್ರೆ ಮಾಡುವ ಸಂಕಲ್ಪ ತೊಟ್ಟಿದ್ದರು. ಸಂಕಲ್ಪದಂತೆ ಇದೀಗ ಆರಗ ಜ್ಞಾನೇಂದ್ರ, ಈ ವರ್ಷ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಇರುಮುಡಿ ಹೊತ್ತು ತೆರಳಿದ್ದಾರೆ.
ನನ್ನ ಕೆಲವು ಮಿತ್ರರೊಂದಿಗೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಿದೆ ಎಂದು ಅರಗ ಜ್ಞಾನೇಂದ್ರ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ.
ಹಲವು ಬಾರಿ ಹೋಗಲು ಪ್ರತ್ನಿಸಿದ್ದರೂ ಕೊನೇ ಕ್ಷಣದಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ. ಈ ವರ್ಷ ಏನೇ ಕಾರ್ಯದೊತ್ತಡ ಇದ್ದರೂ ಸ್ವಾಮಿಯ ಸನ್ನಿದಾನಕ್ಕೆ ಭೇಟಿ ಕೊಡಲೇಬೇಕು ಎಂದು 15 ದಿನ ಹಿಂದೆ ನಿಶ್ಚಯಿಸಿದ್ದೆ.
ಇಂದು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯನ್ನು ಹೊತ್ತು ತೆರಳಿದ್ದೇನೆಂದು ಆರಗ ಜ್ಞಾನೇಂದ್ರ ಅವರು ಹೇಳಿದ್ದಾರೆ.
ಲಕ್ಷಾಂತರ ಹಿಂದೂಗಳ ಶ್ರದ್ಧಾ ಕೇಂದ್ರ, ಪವಿತ್ರ ಕ್ಷೇತ್ರ ಶಬರಿ ಮಲೆಗೆ ಭೇಟಿ ನೀಡುವ ನನ್ನ ಬಹುಕಾಲದ ಸಂಕಲ್ಪ ಈಗ ಸಾಕಾರವಾಗುತ್ತಿದೆ. ನಿನ್ನೆ ನನ್ನ ಕೆಲವು ಮಿತ್ರರೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿಯೊಂದಿಗೆ ಪ್ರಯಾಣ ಬೆಳೆಸಲಾಯಿತು.
— Araga Jnanendra (@JnanendraAraga) January 17, 2023
ಸ್ವಾಮಿಯೇ ಶರಣಂ ಅಯ್ಯಪ್ಪ! 🙏@BJP4Karnataka pic.twitter.com/0HJsbQX8KM