ಬೆಂಗಳೂರಿನಲ್ಲಿ ಹಣದ ಮಳೆ ಸುರಿಸಿದ ವ್ಯಕ್ತಿ, ಮುಗಿಬಿದ್ದ ಜನರು | JANATA NEWS
ಬೆಂಗಳೂರು : ನಗರದ ಮಾರ್ಕೆಟ್ ಫ್ಲೈ ಓವರ್ನಿಂದ ಅನಾಮಿಕ ವ್ಯಕ್ತಿಯೋರ್ವ ಹಣ ಮಳೆಯನ್ನೇ ಸುರಿಸಿದ್ದಾನೆ. ಇಂದು ಮಧ್ಯಾಹ್ನದ ವೇಳೆ ಫ್ಲೈ ಓವರ್ ಮೇಲೆ ಬಂದಿದ್ದ ವ್ಯಕ್ತಿ ಚೀಲದಿಂದ ಹಣವನ್ನು ತೆಗೆದು ಜನರ ಮೇಲೆ ಎಸೆದಿದ್ದಾನೆ.
ಮಾರುಕಟ್ಟೆಯಲ್ಲಿ ಇಂದು ನೋಟಿನ ಮಳೆಯಾಗಿದೆ. ವ್ಯಕ್ತಿಯೊಬ್ಬ ಮಾರುಕಟ್ಟೆ ಫೈಓವರ್ ಮೇಲೆ ನಿಂತು 10 ರೂಪಾಯಿ ನೋಟುಗಳನ್ನು ಕಳೆಗೆ ಎಸೆದಿದ್ದಾನೆ. ಬೀಳುತ್ತಿದ್ದ ನೋಟುಗಳನ್ನು ಪಡೆದುಕೊಳ್ಳಲು ಜನರು ಪೈಪೋಟಿಗೆ ಬಿದ್ದು ಎತ್ತುಕೊಂಡಿದ್ದಾರೆ. ನೋಟು ಸುರಿಸಿ ಎಸ್ಕೇಪ್ ಆಗಿದ್ದ ವ್ಯಕ್ತಿ ಪತ್ತೆಯಾಗಿದ್ದಾನೆ.
ಆರೋಪಿಯನ್ನು ಅರುಣ್ ಎಂದು ಗುರುತಿಸಲಾಗಿದೆ. ಆರೋಪಿ ವಿಚಾರಣೆ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಲೈಕ್ಸ್ , ಪ್ರಚಾರ ಸಿಗಲಿ ಎಂದು ಹೀಗೆ ಮಾಡಿದೆ. ಬೇರೆ ಯಾವ ದುರುದ್ದೇಶ ಇಲ್ಲ ಎಂದು ಹೇಳಿದ್ದಾನೆ. ಹಣ ಎಸೆದ ಅರುಣ್ ವಿರುದ್ಧ ಪ್ರಕರಣ ದಾಖಲಾಗಿದೆ.