ಖೋಟಾನೋಟು ಮುದ್ರಿಸಿ ಮಾರಾಟಕ್ಕೆ ಯತ್ನ, ನಾಲ್ವರು ಅಂತರರಾಜ್ಯ ಆರೋಪಿಗಳ ಸೆರೆ | JANATA NEWS
ಬೆಂಗಳೂರು : ಖೋಟಾನೋಟು ಪ್ರಿಂಟ್ ಮಾಡಿ ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರು ಅಂತಾರಾಜ್ಯದ ಖತರ್ನಾಕ್ ಆರೋಪಿಗಳನ್ನ ಸುಬ್ರಮಣ್ಯಪುರ ಪೊಲೀಸರು ಬಂಧಿಸಿ 11 ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚರಣ್ ಸಿಂಗ್, ರಜನಿ ಮತ್ತು ಅನಂತಪುರ ಜಿಲ್ಲೆಯ ಗೋಪಿನಾಥ್ ಹಾಗೂ ರಾಜು ಬಂತ ಆರೋಪಿಗಳು.
ಇವರಿಂದ 500 ಮುಖಬೆಲೆಯ 11 ಲಕ್ಷ ರೂಪಾಯಿ ನಕಲಿ ಕರೆನ್ಸಿ, ಖೋಟಾನೋಟು ಪ್ರಿಂಟ್ ಮಾಡುವ ಉಪಕರಣಗಳನ್ನ ಹಾಗು ಕಾರು, ನಾಲ್ಕು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
English summary :Attempt to print and sell counterfeit notes, arrest of four interstate accused