ಭದ್ರಾವತಿ VISL ಕಾರ್ಖಾನೆಯನ್ನು ಉಳಿಸುವ ಪ್ರಯತ್ನ ಮಾಡಿದ್ದೇವೆ! | JANATA NEWS
ಶಿವಮೊಗ್ಗ : ಭದ್ರಾವತಿಯ VISL MPM ಕಾರ್ಖಾನೆಗಳು ಮುಚ್ಚುವ ಸ್ಥಿತಿಯನ್ನು ತಲುಪಿದ್ದು ಉಳಿಸುವ ಸಲುವಾಗಿ ಪ್ರಯತ್ನ ಮಾಡಿದ್ದೇವೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಹೇಳಿಕೆ ನೀಡಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಉಕ್ಕಿನ ನಗರ ಭದ್ರಾವತಿ. ಮೈಸೂರು ಮಹಾರಾಜರಿಂದ ಪ್ರಾರಂಭವಾದ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳು ಮುಚ್ಚುವ ಸ್ಥಿತಿಗೆ ಹೋಗ್ತಾ ಇದೆ. ಇದನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಕಷ್ಟು ಪ್ರಯತ್ನ ಮಾಡಿವೆ ಎಂದರು.
ವಿಐಎಸ್ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರ ಸೈಲ್ ಗೆ ಬರೆದು ಕೊಡ್ಡಿದ್ದು, ಕೇಂದ್ರ ಸರ್ಕಾರದ ಸೈಲ್ ನಡೆಸಿ ನಷ್ಟ ಅನುಭವಿಸಿತು. 2013 ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಖಾಸಗೀಕರಣದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತವಾಯಿತು. ನಮ್ಮ ದುರ್ದೈವ ಮತ್ತು ವಿಷಾಧನೀಯ ಸಂಗತಿ ಮುಚ್ಚುವ ಹಂತಕ್ಕೆ ತಲುಪಿತು. ಖಾಸಗೀಕರಣದ ಪ್ರಕ್ರಿಯೆ ಹಂತವಾಗಿ ಬಿಡ್ ಕರೆದರೂ ಇದುವರೆಗೆ ಯಾರು ಬಂದಿಲ್ಲ. ವಿಐಎಸ್ಎಲ್ ಕಾರ್ಖಾನೆಯ ಕಾರ್ಮಿಕ ರನ್ನು ಜೊತೆಗೂಡಿ ಉಳಿಸುವ ದೃಷ್ಟಿಯಿಂದ ಪ್ರಯತ್ನ ನಡೆಯಿತು.
ಕಾರ್ಖಾನೆ ಉಳಿಸಲು ನಾವು ಪ್ರತಿ ಕಚೇರಿ ಮೆಟ್ಟಿಲು ಹತ್ತಿದ್ದೇವೆ. ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆ, ಸರ್ಕಾರದಿಂದ ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಕಾರ್ಖಾನೆ ಮುಚ್ಚುವ ಪರಿಸ್ಥಿತಿಯು ಕೇವಲ ನಮ್ಮ ಕಾರ್ಖಾನೆಗೆ ಮಾತ್ರ ಅಲ್ಲ.
2018-19 ರಲ್ಲಿ 28 ಕಂಪನಿಯ 84.972 ಕೋಟಿ ರೂವನ್ನು ವಾಪಸ್ ಪಡೆದಿದೆ. 2019-20ರಲ್ಲಿ 15 ಕಂಪನಿಗಳಿಂದ 50 ಸಾವಿರ ಕೋಟಿ ರೂ, 2020-21 ರಲ್ಲಿ 18 ಕಂಪನಿಗಳಿಂದ 32,500 ಸಾವಿರ ಕೋಟಿ, 2021-22 ರಲ್ಲಿ 10 ಕಂಪನಿಗಳಿಂದ 13,500 ಕೋಟಿ ರೂ ಹಿಂಪಡೆಯಲಾಗಿದೆ. ಪ್ರಸ್ತುತ ವರ್ಷದಲ್ಲಿ 8 ಕಂಪನಿಯಿಂದ 32 ಸಾವಿರ ಕೋಟಿ ವಾಪಸ್ ಪಡೆಯಲಾಗಿದೆ.ಇನ್ನು ನಷ್ಟದಲ್ಲಿದ್ದ ಉದ್ಯಮಗಳ ಬಂಡವಾಳ ಹಿಂತೆಗೆತ ಮಾಡಲಾಗಿದೆ ಎಂದು ಹೇಳಿದರು.