ಸ್ನೇಹಿತನನ್ನೇ ಇರಿದು ಭೀಕರವಾಗಿ ಕೊಲೆ! | JANATA NEWS

ಬೆಂಗಳೂರು : ಸ್ನೇಹಿತನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ನಗರದ ಕೋಣನಕುಂಟೆಯಲ್ಲಿ ನಡೆದಿದೆ. ಶರತ್ ಕುಮಾರ್ (25) ಕೊಲೆಯಾದ ಯುವಕ. ಲೋಕೇಶ್ ಎನ್ನುವ ಯುವಕನು ಚಾಕು ಇರಿದು ಹತ್ಯೆ ಮಾಡಿರುವ ಆರೋಪಿ.
ಶರತ್ ಹಾಗೂ ಲೋಕೇಶ್ ಒಂದು ಕಾಲದ ಆತ್ಮೀಯ ಸ್ನೇಹಿತರಾಗಿದ್ದವರು. ಆದರೆ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ. ಇದರಿಂದಾಗಿ ಇಬ್ಬರು ಬೇರೆ ಬೇರೆಯಾಗಿದ್ದರು.
ಗಲಾಟೆ ವೇಳೆ ಮೊದಲು ಮೃತ ಶರತ್ ಕುಮಾರ್ನೇ, ಲೋಕೇಶ್ಗೆ ಚಾಕು ಇರಿಯಲು ಮುಂದಾಗಿದ್ದ ಎನ್ನಲಾಗಿದೆ. ತಕ್ಷಣ ಚಾಕು ಕಸಿದುಕೊಂಡ ಲೋಕೇಶ್, ಶರತ್ಗೆ ಇರಿದು ಹತ್ಯೆ ಮಾಡಿದ್ದಾನೆ.
ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
English summary :A friend was brutally stabbed to death