Sun,Mar22,2026
ಕನ್ನಡ / English

ಒಂದೇ ಕುಟುಂಬದ ನಾಲ್ವರ ಹತ್ಯೆ, ವಿಶೇಷ ಪೊಲೀಸ್ ತಂಡಗಳ ರಚನೆ, ತೀವ್ರಗೊಂಡ ತನಿಖೆ! | JANATA NEWS

25 Feb 2023

ಉತ್ತರಕನ್ನಡ : ಭಟ್ಕಳ ತಾಲೂಕಿನ ಹಾಡುವಳ್ಳಿಯ ಒಣಿಬಾಗಿಲು ಎನ್ನುವಲ್ಲಿ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣವನ್ನು ಭೇದಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಭಟ್ಕಳ ಸಮೀಪದ ಓಣಿಬಾಗಿಲು ಗ್ರಾಮದಲ್ಲಿ ಎಶಂಭು ಭಟ್ (65), ಅವರ ಪತ್ನಿ ಮಾದೇವಿ (60), ಮಗ ರಾಜೀವ್ (40) ಮತ್ತು ಸೊಸೆ ಕುಸುಮಾ (35) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ.

ಮನೆಯ ಹೊರಗಡೆ ನಾಲ್ವರ ಶವ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶಂಭು ಭಟ್ ಅವರ ಹಿರಿಯ ಸೊಸೆ ವಿದ್ಯಾ ಭಟ್ ಸಹೋದರ ವಿನಯ್ ಈ ಕೊಲೆ ಮಾಡಿದ್ದ ಎನ್ನಲಾಗಿದೆ.

ಶಂಭು ಭಟ್ಟರ ಹಿರಿಯ ಪುತ್ರ ಶ್ರೀಧರ ಶಂಭು ಭಟ್ಟ ಇವರು ಕಳೆದ ಕೆಲವು ಸಮಯದಿಂದ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು ಸುಮಾರು ಆರು ತಿಂಗಳ ಹಿಂದೆ ಡಯಾಲಿಸಿಸ್ ಮಾಡುತ್ತಿರುವಾಗಲೇ ಕೊನೆಯುಸಿರೆಳೆದಿದ್ದರು. ಅವರ ಮರಣದ ದಿನದಿಂದಲೇ ಆಸ್ತಿ ಜಗಳ ಶುರುವಾಗಿದೆ.

ಹಿರಿಯ ಮಗ ಹಾಗೂ ಸೊಸೆ ಮೂಲ ಮನೆಯಲ್ಲಿಲ್ಲದೇ ತಮ್ಮ ಪೌರೋಹಿತ್ಯ ವೃತ್ತಿಗಾಗಿ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ಮಗ ತೀರಿ ಹೋದ ನಂತರ ಸೊಸೆ ಇಲ್ಲಿಯೇ ಇದ್ದು ಆಕೆಯ ಸಹೋದರ ವಿನಯ ಈತನು ಆಗಾಗ ಹಾಡುವಳ್ಳಿಗೆ ಹೋಗಿ ಪಾಲು ಕೊಡುವಂತೆ ಜಗಳ ಮಾಡಿದ್ದರಿಂದ ಶಂಭು ಭಟ್ಟರು ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹಾಗೂ ತಾವು ಪತಿ-ಪತ್ನಿ ಹೀಗೆ ಆಸ್ತಿಯನ್ನು ಪಾಲು ಮಾಡಿ ಕೊಟ್ಟಿದ್ದರು.

ಶುಕ್ರವಾರ ಬೆಳಿಗ್ಗೆ ಕೊಟ್ಟಿಗೆ ಕಟ್ಟುತ್ತಿರುವ ಕುರಿತು ತಕರಾರು ಮಾಡಿದ್ದರೆನ್ನಲಾಗಿದೆ. ಬೆಳಿಗ್ಗೆಯಷ್ಟೇ ಕೊಟ್ಟಿಗೆ ವಿಚಾರವಾಗಿ ಜಗಳ ಆಗಿದ್ದು ಮಧ್ಯಾಹ್ನ ಈ ಬರ್ಬರ ಕೃತ್ಯ ನಡೆದು ಹೋಗಿದೆ. ಈಗಾಗಲೇ ದೂರು ನೀಡಿದಂತೆ ಹಿರಿಯ ಸೊಸೆ ವಿದ್ಯಾ ಹಾಗೂ ಆಕೆಯ ತಂದೆ ಶ್ರೀಧರ ಇವರ ಕುಮ್ಮಕ್ಕಿನಿಂದ ವಿನಯ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಕೊಲೆಯ ಹಿಂದೆ ಹಿರಿಯ ಸೊಸೆಯ ಪಾತ್ರವಿದೆ ಎಂದು ಪೊಲೀಸರು ಶಂಕಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಭಟ್ಕಳ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

RELATED TOPICS:
English summary :Murder of four members of the same family, formation of special police teams, intensified investigation!

ಹಾರ್ಮುಜ್ ಜಲಸಂಧಿ : ಎಲ್ಲಾ ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಮತ್ತು 611 ಹಡಗುಗಳು ಸುರಕ್ಷಿತವಾಗಿವೆ - ಸಚಿವಾಲಯ
ಹಾರ್ಮುಜ್ ಜಲಸಂಧಿ : ಎಲ್ಲಾ ಭಾರತೀಯ ಹಡಗುಗಳು ಸುರಕ್ಷಿತವಾಗಿವೆ ಮತ್ತು 611 ಹಡಗುಗಳು ಸುರಕ್ಷಿತವಾಗಿವೆ - ಸಚಿವಾಲಯ
ಕತಾರ್ ಎಲ್‌ಎನ್‌ಜಿ ದಾಳಿ: ಇರಾನ್‌ಗೆ ಟ್ರಂಪ್ ಎಚ್ಚರಿಕೆ, ಭಾರಿ ಪ್ರತೀಕಾರದ ಬೆದರಿಕೆ
ಕತಾರ್ ಎಲ್‌ಎನ್‌ಜಿ ದಾಳಿ: ಇರಾನ್‌ಗೆ ಟ್ರಂಪ್ ಎಚ್ಚರಿಕೆ, ಭಾರಿ ಪ್ರತೀಕಾರದ ಬೆದರಿಕೆ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
 ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ  ಇರಾನ್
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ ಇರಾನ್
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ

ನ್ಯೂಸ್ MORE NEWS...