ರಾಜ್ಯದಲ್ಲಿ ಕಮಲ ಅರಳಿಸಲು ಬೆಂಗಳೂರಲ್ಲಿ ಮನೆ ಮಾಡಲಿರುವ ಅಮಿತ್ ಷಾ! | JANATA NEWS
ಬಾಗಲಕೋಟೆ : ರಾಜ್ಯದಲ್ಲಿ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಅಮಿತ್ ಷಾ ಹಾಗೂ ಧರ್ಮೆಂದ್ರ ಪ್ರಧಾನ ಮನೆ ಮಾಡಲಿರುವ ಬಗ್ಗೆ ಸಚಿವ ಆರ್ ಆಶೋಕ್ ಹೇಳಿಕೆ ನೀಡಿದ್ದಾರೆ.
ಇಂದು ಬಾಗಲಕೋಟೆ ಜಿಲ್ಲೆ ಬೀಳಗಿ ಕ್ಷೇತ್ರದ ಕಲಾದಗಿ ಗ್ರಾಮದಲ್ಲಿ ಮಾತನಾಡುತ್ತ, ರಾಜ್ಯದಲ್ಲಿ ಮತ್ತೆ ಕಮಲ ಪಕ್ಷ ಅರಳಿಸಲು ಕೇಂದ್ರ ನಾಯಕರು ಮೆಗಾ ಪ್ಲಾನ್ ನಡೆಸುತ್ತಿದ್ದು ರಾಜ್ಯದಲ್ಲೇ ಬಿಜೆಪಿ ಚಾಣಕ್ಯ ಠಿಕಾಣಿ ಹೂಡಲಿದ್ದಾರೆ. ಡಬಲ್ ಇಂಜನ್ ಸರ್ಕಾರ ತರಲು ಬೆಂಗಳೂರಲ್ಲಿ ಅಮಿತ್ ಷಾ ಹಾಗೂ ಧರ್ಮೆಂದ್ರ ಪ್ರಧಾನ ಮನೆ ಮಾಡುತ್ತಾರೆ ಎಂದರು.
ಅವರು ಇಲ್ಲೆ ಬಂದು ಇರುತ್ತಾರೆ. ನಮ್ಮದು ನಾಳೆ ಬಾ ಅನ್ನೋ ಪಾರ್ಟಿ ಅಲ್ಲ, ಇಂದಿನ ಪಾರ್ಟಿ. ಅಮಿತ್ ಷಾ, ಧರ್ಮೇಂದ್ರ ಪ್ರಧಾನ ಎಲ್ಲರು ಗೆಲ್ಲಿಸಬೇಕು ಎಂದು ಇಲ್ಲಿಗೆ ಬರುತ್ತಿದ್ದಾರೆ. ಅವರ (ಕಾಂಗ್ರೆಸ್) ರೀತಿ ಬಂದು ಬರೋದು ಭಾಷಣ ಮಾಡಿ ಓಡಿ ಹೋಗೋದಲ್ಲ. ಇಲ್ಲಿ ಬಂದು, ಇಲ್ಲೇ ಇರುತ್ತಾರೆ. ಡಬಲ್ ಇಂಜೆನ್ ಸರ್ಕಾರ ಇಲ್ಲಿ ಬರ್ಬೇಕು ಅಂತಾ ಅವರೆಲ್ಲರ ಬಯಕೆ. ಸೂರ್ಯ ಚಂದ್ರರಿರೋದು ಎಷ್ಟು ಸತ್ಯವೋ, ನಮ್ಮ ಸರ್ಕಾರ ಬರೋದು ಸತ್ಯ ಎಂದಿದ್ದಾರೆ.