ಫೋಟೋ ಶೂಟ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಓರ್ವ ಯುವಕ, ಇಬ್ಬರು ಯುವತಿಯರು | JANATA NEWS
ಚಿಕ್ಕಬಳ್ಳಾಪುರ : ನೀರಿನಲ್ಲಿ ಫೋಟೋ ಶೂಟ್ ಮಾಡುವಾಗ ಮುಳುಗಿ ಇಬ್ಬರು ಯುವತಿಯರು, ಒಬ್ಬ ಯುವಕ ಸಾವನ್ನಪ್ಪಿರುವಂಹ ದುರಂತ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯದಲ್ಲಿ ನಡೆದಿದೆ.
ರಾಧಿಕಾ(21), ಇಮ್ರಾನ್(21), ಪೂಜಾ(21) ಮೃತರು. ಮೂವರು ಬೆಂಗಳೂರಿನ ಸಾರಾಯಿಪಾಳ್ಯದ ನಿವಾಸಿಗಳಾಗಿದ್ದು ಬಿ ಫಾರ್ಮ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಮೃತಪಟ್ಟಿರುವ ಮೂವರು ವಿದ್ಯಾರ್ಥಿಗಳು ಬೆಂಗಳೂರಿನ ಕರ್ಣಾಟಕ ಕಾಲೇಜಿನಲ್ಲಿ ಡಿ-ಫಾರ್ಮ್ ವ್ಯಾಸಾಂಗ ಮಾಡುತ್ತಿದ್ದರು. ನೀರಿನಲ್ಲಿ ಕ್ಯಾಮೆರಾದಲ್ಲಿ ಶೂಟ್ ಶೂಟ್ ಹೋಗಿ ಪೂಜಾ ನೀರಿನಲ್ಲಿ ಮುಳುಗಿದ್ದಾಳೆ. ಪೂಜಾಳ ರಕ್ಷಣೆಗೆ ರಾಧಿಕಾ ಹೋಗಿದ್ದಾಳೆ, ಇಬ್ಬರ ರಕ್ಷಣೆಗೆ ಇಮ್ರಾನ್ ತೆರಳಿ ಮೂವರು ನೀರು ಪಾಲಾಗಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.