ಕಾಂಗ್ರೆಸ್ 60 ಕ್ಷೇತ್ರಗಳಲ್ಲಿ ಸರಿಯಾದ ಕ್ಯಾಂಡಿಡೇಟ್ಸ್ ಇಲ್ಲ, ಅಲ್ಲಿಂದ ಇಲ್ಲಿಂದ ತೆಗೆದುಕೊಂಡು ನಿಲ್ಲಿಸ್ತಿದ್ದಾರೆ | JANATA NEWS
ಶಿವಮೊಗ್ಗ : ಕಾಂಗ್ರೆಸ್ನಲ್ಲಿ 60 ಕ್ಷೇತ್ರಗಳಲ್ಲಿ ಸರಿಯಾದ ಅಭ್ಯರ್ಥಿಗಳೇ ಇಲ್ಲ. ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಕಾದು ಕುಳಿತು ಪಕ್ಷಕ್ಕೆ ಬರುವಂತೆ ಕರೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.
ನನಗೆ ತಿಳಿದ ಹಾಗೇ 60 ಸೀಟ್ ಅಲ್ಲಿ ಸರಿಯಾದ ಕ್ಯಾಂಡಿಡೇಟ್ಸ್ ಇಲ್ಲ. ಹೀಗಾಗಿ ಬಹಳಷ್ಟು ಜನರನ್ನು ಅಲ್ಲಿಂದ ಇಲ್ಲಿಂದ ತೆಗೆದುಕೊಂಡು ಕೊಡೋ ಪ್ರಯತ್ನ ಮಾಡುತ್ತಿದ್ದಾರೆ. ನಾನು ಹಿಂದೆನೇ ಹೇಳಿದ್ದೆ. ಡಿ.ಕೆ ಶಿವಕುಮಾರ್ ಬಹುತೇಕ ನಮ್ಮೆಲ್ಲಾ ಶಾಸಕರಿಗೂ 2ನೇ ಪಟ್ಟಿ ಮಾಡುವಾಗ ಕೇಳಿದ್ದರು. ನಿಮ್ಮ ಸಲುವಾಗಿ ಕಾಯ್ದಿರಿಸಿದ್ದೇವೆ ಬರ್ತೀರಾ ಎಂದಿದ್ದರು. ಆ ಮಟ್ಟಕ್ಕೆ ಕಾಂಗ್ರೆಸ್ ಇದೆ ಎಂದು ಆರೋಪಿಸಿದರು.
ಕಳೆದ ಬಾರಿಗಿಂತ ಈ ಬಾರಿ ಬಹಳ ಹೀನಾಯವಾಗಿ ಸೋಲು ಅನುಭವಿಸುತ್ತದೆ. ಕಾಂಗ್ರೆಸ್ಗೆ ಸರಿಯಾದ ಅಭ್ಯರ್ಥಿ ಇಲ್ಲ, ಸ್ಪಷ್ಟವಾದ ನೀತಿ ಇಲ್ಲ, ಮೀಸಲಾತಿ, ಅಭಿವೃದ್ಧಿ ಯಾವುದು ಇಲ್ಲ. ಕೇವಲ ಉಡಾಫೆ ಮಾತನಾಡಿ ಚುನಾವಣೆ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ ಎಂದರು
ಸುದೀಪ್ ಬೆಂಬಲಕ್ಕೆ ವ್ಯಕ್ತವಾಗಿರುವ ಟೀಕೆ ಬಗ್ಗೆ, ನಾನೇನು ಮಾಡ್ಲಪ್ಪ.? ಯಾರು ಬೇಕಾದರೂ ಪ್ರಚಾರಕ್ಕೆ ಕರೆಯಲಿ. ಪ್ರಶ್ನೆಯಿಲ್ಲ. ಹೋಗೋದು, ಬಿಡೋದು ಅವರ ಇಷ್ಟ. ಮೊನ್ನೆ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಯಾರು ತನ್ನ ಕಷ್ಟದಲ್ಲಿ ಇದ್ದಾರೆ. ಅದರ ಸಲುವಾಗಿ ಬಂದಿದ್ದೇನೆ ಎಂದಿದ್ದಾರೆ. ಉಳಿದವರೆಲ್ಲಾ ಬಂದಿಲ್ಲ ಅನ್ನೋ ರೀತಿಯಲ್ಲೇ ಹೇಳಿದ್ದಾರೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.