ಬಾಲಕಿಯನ್ನು ತುಳಿದು ಸಾಯಿಸಿದ ಆನೆಗಳ ಹಿಂಡು! | JANATA NEWS
ದಾವಣಗೆರೆ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮಲಾಪುರ ಕಾಶಿಪುರ ಹಾಗೂ ಜಕಲಿ ಗ್ರಾಮಗಳಿಗೆ ನುಗ್ಗಿದ 2 ಕಾಡಾನೆಗಳು ಗ್ರಾಮದ ನಾಲ್ವರ ಮೇಲೆ ದಾಳಿ ಮಾಡಿದ್ದು, ಚನ್ನಗಿರಿ ತಾಲೂಕಿನ ಜಕಲಿ ಗ್ರಾಮದಲ್ಲಿ ಆನೆಗಳ ಹಿಂಡು ಬಾಲಕಿಯೋರ್ವಳನ್ನು ತುಳಿದು ಸಾಯಿಸಿವೆ.
16 ವರ್ಷದ ಕವನಾ ಎಂಬ ಬಾಲಕಿ ಆನೆ ದಾಳಿಗೆ ಸಾವನ್ನಪ್ಪಿದ್ದಾಳೆ. ಕವಿತಾ ತಾಯಿ ಮಂಜಮ್ಮರನ್ನ ಆನೆಯೊಂದು ಸೊಂಡಿಲಿನಲ್ಲಿ ಎತ್ತಿ ಬಿಸಾಡಿದೆ. ಆನೆ ಎತ್ತಿ ಬಿಸಾಕಿದ್ದ ಹೊಡೆತಕ್ಕೆ ಮಂಜಮ್ಮನ ಕೊರಳಲ್ಲಿರೋ ತಾಳಿ ಕಳೆದುಹೋಗಿದೆ ಎನ್ನಲಾಗಿದೆ.
ಉಳಿದ ಮೂರು ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಮಂಜಮ್ಮ (43), ಬಾಬ ನಾಯ್ಕ (55 ವರ್ಷ) ಹಾಗೂ ಲಕ್ಷ್ಮೀಬಾಯಿ (40) ಗಾಯಾಳುಗಳು. ಗಾಯಾಳುಗಳು ಕಾಶೀಪುರ ತಾಂಡಾ ಗ್ರಾಮದವರು. ಅವರನ್ನು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.