ಮೋದಿ ಅವರಿಗೆ ಅವಮಾನ ಮಾಡುವುದನ್ನ ಯಾರೂ ಕ್ಷಮಿಸಲ್ಲ: ಶೋಭಾ ಕರಂದ್ಲಾಜೆ | JANATA NEWS
ಚಿಕ್ಕಮಗಳೂರು : ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ವಿರುದ್ಧವಾಗಿ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಮೋದಿಗೆ ಸೋನಿಯಾ ಸಾವಿನ ವ್ಯಾಪಾರಿ ಅಂದಿದ್ರು, ಪ್ರಿಯಾಂಕ ಗಾಂಧಿ, ನಾಲಾಯಕ್, ಹಿಟ್ಲರ್ ಅಂದಿದ್ರು, ಮಹಾರಾಷ್ಟ್ರ ಚುನಾವಣೆ ವೇಳೆ ಖರ್ಗೆ 100 ತಲೆ ರಾವಣ ಅಂದಿದ್ದರು. ಈಗ ವಿಷ ಸರ್ಪ, ನೆಕ್ಕಿ ನೋಡಿದರೆ ಸಾಯ್ತೀರಾ ಅಂದಿದ್ದಾರೆ. ಖರ್ಗೆ ಕೇವಲ ಕರ್ನಾಟಕದ ನಾಯಕರಲ್ಲ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಅವರ ಮಾತನ್ನು ಚೀನಾ, ಪಾಕಿಸ್ತಾನ,ಅಮೆರಿಕಾ ಎಲ್ಲಾ ಕೇಳಿಸಿಕೊಳ್ತಾರೆ ಎಂದು ಕಾಂಗ್ರೆಸ್ ನಡೆ ವಿರುದ್ಧವಾಗಿ ಕಿಡಿಕಾರಿದ್ದಾರೆ.
ಮೋದಿ ಅವರಿಗೆ ಅವಮಾನ ಮಾಡುವುದನ್ನ ಯಾರೂ ಕ್ಷಮಿಸಲ್ಲ. ಖರ್ಗೆ ಅವರು ಬೇಷರತ್ ಕ್ಷಮೆ ಕೇಳಬೇಕು. ಕಾಂಗ್ರೆಸ್ ಖರ್ಗೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರ ವಿಷಕನ್ಯೆ ಹೇಳಿಕೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಖಂಡಿಸಿದ್ದು, ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯನ್ನ ನಾವು ಒಪ್ಪುವುದಿಲ್ಲ. ಇಂತಹ ಹೇಳಿಕೆ ಬಿಜೆಪಿ ಸಂಸ್ಕೃತಿ ಅಲ್ಲ ಎಂದು ಹೇಳಿದ್ದಾರೆ. ಅಲ್ಲದೇ, ಯತ್ನಾಳ್ ಬೇರೆ ಪಕ್ಷಗಳ ನಾಯಕರ ಬಗ್ಗೆ ಇಂತಹ ಹೇಳಿಕೆ ನೀಡಬಾರದು ಎಂದೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಚಿಕ್ಕಮಗಳೂರಿನ ಕಳಸದಲ್ಲಿ ಹೇಳಿದ್ದಾರೆ.