ರಾತ್ರಿ ಮಟನ್ ತಿಂದು, ಹಗಲಿನಲ್ಲಿ ನಾನ್ ವೆಜಿಟೇರಿಯನ್ಗೆ ಬೈತಾರೆ: ಖರ್ಗೆ ಲೇವಡಿ | JANATA NEWS
ಕಲಬುರಗಿ : ರಾತ್ರಿ ಚೆನ್ನಾಗಿ ಮಟನ್ ತಿಂದು, ಬೆಳಗ್ಗೆ ಆದ ಕೂಡಲೇ ನಾನ್ ವೆಜ್ ತಿನ್ನೋರ ಬಗ್ಗೆ ಕೆಟ್ಟದಾಗಿ ಮಾತನಾಡೋದು ಹಾಗೂ ಅವರ ಮೇಲೆ ಎಗರಾಡೋರು ನೀವು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೇವಡಿ ಮಾಡಿದ್ದಾರೆ.
ಬಜರಂಗದಳ ರದ್ದು ವಿಚಾರ ಕುರಿತು ಮಾತನಾಡಿ, ಅದರ ಬಗ್ಗೆ ಪ್ರಣಾಳಿಕೆ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ಆ ಕುರಿತು ಚರ್ಚೆ ಮಾಡಲು ಹೋಗಲ್ಲ ಎಂದು ತಿಳಿಸಿದರು.
ಬಿಜೆಪಿಯವರು ರಾತ್ರಿ ಹೊತ್ತಿನಲ್ಲಿ ಮಟನ್ ತಿಂದು ಬೆಳಗ್ಗೆ ಎದ್ದ ನಂತರ ನಾನ್ ವೆಬ್ ತಿನ್ನೋವರನ್ನು ಬೈಯ್ಯುತ್ತಾರೆ. ದಿನವಿಡೀ ಮಾಂಸಾಹಾರಿಗಳನ್ನು ಬೈಯ್ಯುವುದೇ ಇವರ ಕೆಲಸವಾಗಿರುತ್ತದೆ. ಆದರೆ, ರಾತ್ರಿ ಹೊತ್ತು ಅವರೇ ನಾನ್ ವೆಜ್ ಚೆನ್ನಾಗಿ ತಿನ್ನುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪ್ರತಿ ವಿರೋಧ ಪಕ್ಷದವರು ಸಹಜವಾಗಿ ಒಬ್ಬರ ಮೇಲೆ ಒಬ್ಬರು ಹೇಳ್ತಾರೆ. ಅದೇ ರೀತಿ ಕಾಂಗ್ರೆಸ್ ಪ್ರಣಾಳಿಕೆ ಜಾರಿ ಮಾಡಲು ಆಗಲ್ಲಾ ಅಂತ ಹೇಳ್ತಿದ್ದಾರೆ. ಕಳೆದ ಬಾರಿ ಕೂಡಾ ಇದೇ ರೀತಿ ಹೇಳಿದ್ದರು. ಆದರೆ ಕಳೆದ ಬಾರಿ ನಾವು ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿದ್ದೆವು. ಬಜೆಟ್ ಅನುದಾನ, ಆದಾಯ ನೋಡಿಯೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಅವರು ಹೇಳ್ತಾ ಹೋಗ್ತಾರೆ. ಆದರೆ ನಾವು ಮಾಡಿ ತೋರಿಸುತ್ತಿದ್ದೇವೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ಇದೇ ವೇಳೆ, ಸಂಘಪರಿವಾರದ ನಾಯಕರ ವರ್ತನೆಯ ಬಗ್ಗೆ ಅಸಮಾಧಾನ ಹೊರಹಾಕಿದ ಖರ್ಗೆ, ಕಾಂಗ್ರೆಸ್ ಏನೇ ಹೇಳಿದರೂ ಅದನ್ನು ತಿರುಚಿಕೊಂಡು ಅದಕ್ಕೆ ಬೇರೊಂದು ಬಣ್ಣ ಹಚ್ಚುವುದೇ ಬಿಜೆಪಿ ಹಾಗೂ ಸಂಘ ಪರಿವಾರದ ನಾಯಕರ ಕೆಲಸವಾಗಿದೆ. ಈಗ ಭಜರಂಗದಳದ ವಿಚಾರದಲ್ಲೂ ಹಾಗೇ ಆಗುತ್ತಿದೆ ಎಂದರು
ಕೆಲವರಿಗೆ ಪ್ರಚಾರ ಬೇಕು, ಪ್ರಚಾರದಿಂದಲೇ ಎಲ್ಲಾ ಸಿಗುತ್ತೆ ಅಂತ ಅಂದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆ ಅನ್ನೋದು ವಾರ್ ಇದ್ದಂತೆ. ನನಗೆ ಹಿಂಗ ಅಂದ್ರು ಹಂಗ ಅಂದ್ರು ಅಂತ ಅಳುತ್ತಾ ಕೂತುಕೋದಿಲ್ಲಾ. ಇದೇ ಬಿಜೆಪಿಯವರು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ?. ಮುಂಜಾನೆ ಯಿಂದ ಸಂಜೆವರಗೆ ಅಳ್ತಾನೇ ಇರೋದು ಪ್ರಧಾನಿ ಕೆಲಸನಾ?. ನಾನು ಮೋದಿಗಿಂತ ಜಾತಿ ವ್ಯವಸ್ಥೆ ಯಲ್ಲಿ ಕೆಳಗೆ ಇದ್ದೀನಿ. ನಾನು ದಲಿತ ಜಾತಿಗೆ ಸೇರಿದವನು. ಮೋದಿ ಮತ್ತು ಶಾ ಅವರು ಯಾವ ರಾಜ್ಯಕ್ಕೆ ಎಷ್ಟು ಸಲ ಹೋಗಿದ್ದಾರೆ. ಅವರು ಹಣಬಲ, ಮಜಲ್ ಪವರ್ ಹೊಂದಿದ್ದಾರೆ ಎಂದು ಕಿಡಿಕಾರಿದ್ದಾರೆ.