ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ರೆ ಅದು ತಪ್ಪಲ್ಲ: ನಟ ಡಾಲಿ ಧನಂಜಯ್ | JANATA NEWS
ಮಂಡ್ಯ : ಫ್ರೀ ಆಗಿ ಅಕ್ಕಿ ಕೊಟ್ಟರೆ ಜನರು ಸೋಮಾರಿಗಳಾಗಿ ಬಿಡುತ್ತಾರೆ ಎಂದು ಕೆಲವರು ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ನಟ ಧನಂಜಯ ಪ್ರತಿಕ್ರಿಯಿಸಿದ್ದು, 'ಬಡವರ ಹಸಿವು ನೀಗಿಸಲು ಅಕ್ಕಿ ಕೊಟ್ರೆ ಅದು ತಪ್ಪಲ್ಲ.. ಅಕ್ಕಿ ಕೊಟ್ಟರೆ ಜನರು ಸೋಮಾರಿಗಳಾಗಿ ಬಿಡುತ್ತಾರೆ ಎಂದು ಹೇಳುವುದು ಸರಿ ಅಲ್ಲ' ಎಂದಿದ್ದಾರೆ.
ಅವರು ಇಂದು ಮಂಡ್ಯದ ಜಿಲ್ಲೆಯ ಪಾಂಡವಪುರ ದ ಶಾಲೆಯೊಂದಕ್ಕೆ ಭೇಟಿ ನೀಡಿದರು, ಇದೇ ವೇಳೆ ಅವರು ಮಾತನಾಡುತ್ತ, ನಾನು ಯಾವುದೇ ಪಕ್ಷದ ಪರ ಅಥವಾ ವಿರೋಧವಾಗಿ ನಾನು ಮಾತಡಲ್ಲ.
ಸಾಮಾನ್ಯ ಮನುಷ್ಯನಾಗಿ ನಾನು ಹೇಳ್ತೀನಿ ಬಡ ಮನುಷ್ಯನಿಗೆ ಅಕ್ಕಿ ಕೊಟ್ಟರೆ ಸೋಮಾರಿ ಆಗುತ್ತಾನೆ ಅನ್ನೋದು ತಪ್ಪು, ಇಲ್ಲದವರಿಗೆ ಸಹಾಯ ಮಾಡುವುದು ತಪ್ಪಲ್ಲ ಅಂತ ಹೇಳಿದರು.
ಈ ರೀತಿ ಅಕ್ಕಿ ಕೊಡುವುದರಿಂದ ಜನರು ಸೋಮಾರಿಗಳಾಗುತ್ತಾರೆ ಎನ್ನುವುದು ಸರಿಯಲ್ಲ. ಹೇಗೆ ಸೋಮಾರಿಗಳಾಗಿಬಿಡುತ್ತಾರೆ? ನಿಮಗೆ ಬರೀ 10 ಕೆಜಿ ಅಕ್ಕಿ ಕೊಟ್ಟುಬಿಟ್ಟರೆ, ಅಡುಗೆ ಮಾಡ್ಕೊಂಡು, ಊಟ ಮಾಡ್ಕೊಂಡು ಮನೆಯಲ್ಲಿ ಇರುತ್ತೀರಾ? ಇಲ್ಲ ತಾನೇ.. ಸರ್ಕಾರ ಕೊಡುವ ಅಕ್ಕಿ ಹಸಿವನ್ನು ನೀಗಿಸುತ್ತದೆ' ಎಂದು ನಟ ಧನಂಜಯ ಹೇಳಿದ್ದಾರೆ.