ಸಚಿವರಿಂದ ದಲಿತ ವಿರೋಧಿ ಹೇಳಿಕೆ : ದಲಿತ ವಿರೋಧಿ ಧೋರಣೆಯೇ ಕಾಂಗ್ರೆಸ್ನ ಇತಿಹಾಸ - ಬಿಜೆಪಿ | JANATA NEWS
![](2023/August/Jimg/1692200949.jpg)
ಬೆಂಗಳೂರು : ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ವಿಡಿಯೋವೊಂದು ವೈರಲ್ ಆಗಿರುವ ಬೆನ್ನಲ್ಲೇ, ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಉಲ್ಲೇಖಿಸಿರುವ ರಾಜ್ಯ ಬಿಜೆಪಿ, ಇದು ದಲಿತ ಸಮುದಾಯಕ್ಕೇ ಮಾಡುತ್ತಿರುವ ಅಪಮಾನ, ಎಂದು ಹೇಳಿದೆ.
ಈ ಕುರಿತು ರಾಜ್ಯ ಬಿಜೆಪಿ ತನ್ನ ಅಧಿಕೃತ ಖಾತೆಯಿಂದ ಎಕ್ಸ್ ನಲ್ಲಿ, "ದಲಿತ ವಿರೋಧಿ ಧೋರಣೆಯೇ ಕಾಂಗ್ರೆಸ್ನ ಇತಿಹಾಸ. ಇದೀಗ ದಲಿತ ವಿರೋಧಿ ಹೇಳಿಕೆ ನೀಡಿರುವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹೇಳಿಕೆಯನ್ನೂ ಖಂಡಿಸದೆ, ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೆ, ಇನ್ನೂ ಸಂಪುಟದಲ್ಲಿರಿಸಿ, ರಕ್ಷಣೆ ನೀಡಲಾಗುತ್ತಿರುವುದು, ದಲಿತ ಸಮುದಾಯಕ್ಕೇ ಮಾಡುತ್ತಿರುವ ಅಪಮಾನ.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ದಲಿತ ವಿರೋಧಿ ಧೋರಣೆಯನ್ನು ಪ್ರಶ್ನಿಸಿದ ಸಾಮಾನ್ಯನ ವಿರುದ್ಧ ಪೊಲೀಸರನ್ನು ಬಿಟ್ಟಿರುವುದು ಈ ಹಿಟ್ಲರ್ ಸರ್ಕಾರದ ದಮನಕಾರಿ ನೀತಿಗೆ ಸುಸ್ಪಷ್ಟ ಸಾಕ್ಷಿ.
ಕಾಂಗ್ರೆಸ್ ಸರ್ಕಾರದ ಅಂತ್ಯಕಾಲ ಪ್ರಾರಂಭವಾಗಿದೆ.", ಎಂದು ಪೋಸ್ಟ್ ಮಾಡಿದೆ.
ದಲಿತ ವಿರೋಧಿ ಧೋರಣೆಯೇ ಕಾಂಗ್ರೆಸ್ನ ಇತಿಹಾಸ. ಇದೀಗ ದಲಿತ ವಿರೋಧಿ ಹೇಳಿಕೆ ನೀಡಿರುವ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹೇಳಿಕೆಯನ್ನೂ ಖಂಡಿಸದೆ, ಅವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೆ ಇನ್ನೂ ಸಂಪುಟದಲ್ಲಿರಿಸಿ ರಕ್ಷಣೆ ನೀಡಲಾಗುತ್ತಿರುವುದು ದಲಿತ ಸಮುದಾಯಕ್ಕೇ ಮಾಡುತ್ತಿರುವ ಅಪಮಾನ.
— BJP Karnataka (@BJP4Karnataka) August 16, 2023
ಇಂತಹ ಸಂದರ್ಭದಲ್ಲಿ @INCKarnataka ದ… pic.twitter.com/59MeSXgP3V