ಪ್ರಧಾನಿ ಮೋದಿ ಬೆಂಗಳೂರು ಇಸ್ರೋ ಭೇಟಿ : ವಿಮಾನ ನಿಲ್ದಾಣಕ್ಕೆ ಹೋಗದ ಸಿಎಂ, ಡಿಸಿಎಂ.. ಕಾರಣವೇನು? | JANATA NEWS
![](2023/August/Jimg/1693034256.jpg)
ಬೆಂಗಳೂರು : ಯಶಸ್ವಿಯಾದ ಚಂದ್ರಯಾನ-3 ಗಾಗಿ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಿ, ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆ ತಮ್ಮ ವಿದೇಶಿ ಪ್ರವಾಸದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದರು.
ಆದರೆ, ಅವರನ್ನು ಬರಮಾಡಿಕೊಳ್ಳಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ ಅಥವಾ ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಆಗಲಿ ವಿಮಾನ ನಿಲ್ದಾಣದಲ್ಲಿ ಬಾರದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆದರೆ, ಪ್ರಧಾನಿಯವರು ನಂತರ, ಮಂತ್ರಿಗಳಿಗೆ ಇಷ್ಟು ನಸುಕಿನಲ್ಲಿ ತೊಂದರೆ ಕೊಡಲು ಬಯಸುವುದಿಲ್ಲ, ಏಕೆಂದರೆ ನಾನು ಯಾವಾಗ ಬೆಂಗಳೂರಿಗೆ ತಲುಪುತ್ತೇನೆಂದು, ಎಂದು ನನಗೆ ತಿಳಿದಿಲ್ಲ, ಎಂದು ಹೇಳಿದರು.
"ನಾನು ಬೆಂಗಳೂರಿಗೆ ಯಾವಾಗ ತಲುಪುತ್ತೇನೆ ಎಂದು ನನಗೆ ತಿಳಿದಿಲ್ಲದ ಕಾರಣ, ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಇಷ್ಟು ಬೇಗ ತೊಂದರೆ ತೆಗೆದುಕೊಳ್ಳಬೇಡಿ(ನನ್ನನ್ನು ಸ್ವೀಕರಿಸಲು) ಎಂದು ವಿನಂತಿಸಿದೆ" ಎಂದು ಶನಿವಾರ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದ ಹೊರಗೆ ಜನರನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದರು.
ಇಂದು ಬೆಳಗ್ಗೆ ಬೆಂಗಳೂರು ತಲುಪಿದ ನಂತರ ವಿಮಾನ ನಿಲ್ದಾಣದ ಹೊರಗೆ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಾನೇ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಅವರು ಬರಬಾರದು ಎಂದು ಹೇಳಿದ್ದೆ. ಏಕೆಂದರೆ ನಾನು ವಿಜ್ಞಾನಿಗಳನ್ನು ಭೇಟಿಯಾದ ನಂತರ ಹೊರಡುತ್ತೇನೆ. ನಾನು ಬೆಂಗಳೂರಿಗೆ ಯಾವಾಗ ತಲುಪುತ್ತೇನೆ ಎಂದು ನನಗೆ ತಿಳಿದಿಲ್ಲದ ಕಾರಣ ಪ್ರೋಟೋಕಾಲ್ ಅನ್ನು ಪೂರೈಸದಂತೆ ನಾನು ಅವರನ್ನು ಕೇಳಿದೆ." ಎಂದಿದ್ದಾರೆ.