Mon,Apr13,2026
ಕನ್ನಡ / English

ಬಾಂಗ್ಲಾದೇಶ ಮಾದರಿಯ(ಹಿಂಸಾಚಾರ) ಹೋರಾಟ ಅವತ್ತೇ ಮಾಡಿ ಮುಗಿಸುತ್ತಿದ್ದೆವು..ಆಗಿಲ್ಲ, ಈಗ ಮಾಡುತ್ತೇವೆ - ರೈತ ಮುಖಂಡ | JANATA NEWS

21 Aug 2024

ಮೀರತ್ : 2021 ರ ರೈತರ ಗಣರಾಜ್ಯೋತ್ಸವದ ಪ್ರತಿಭಟನೆ ಪಾರ್ಲಿಮೆಂಟ್ ಕಡೆಗೆ ಹೋಗಿದ್ದರೆ ಬಾಂಗ್ಲಾದೇಶ ಹಿಂಸಾಚಾರ ಮಾದರಿಯ ಸ್ಥಿತಿ ನಿರ್ಮಾಣ ಮಾಡುವ ಕೆಲಸ ಅವತ್ತೇ ಮಾಡಿ ಮುಗಿಸಿ ಬಿಡುತ್ತಿದ್ದೆವು. ಈಗ ಮಾಡಿಯೇ ಮಾಡುವ ಗಂಭೀರ ಬೆದರಿಕೆಯನ್ನು ರೈತರ ಮುಖಂಡ ಎನ್ನಲಾದ ರಾಕೇಶ್ ತಿಕಾಯತ ಕೇಂದ್ರ ಸರ್ಕಾರಕ್ಕೆ ಹಾಕಿದ್ದಾರೆ.

ದೆಹಲಿಯಲ್ಲಿ ರೈತರ ಗಣರಾಜ್ಯೋತ್ಸವದ ಪ್ರತಿಭಟನೆ ಹೆಸರಿನಲ್ಲಿ, 26 ಜನವರಿ 2021 ರಂದು ಪಂಜಾಬನ ನಿರ್ದಿಷ್ಟ ರೈತರು ಪ್ರತಿಭಟನೆ ನಡೆಸಲು ಟ್ಟ್ರ್ಯಾಕ್ಟರ್ ನಲ್ಲಿ ದೆಹಲಿಗೆ ಬಂದಿದ್ದರು. ಪ್ರತಿಭಟನಾಕಾರರ ಗುಂಪು ಮೆರವಣಿಗೆಯಿಂದ ವಿಮುಖವಾಗಿ ಕೆಂಪು ಕೋಟೆಗೆ ನುಗ್ಗಿ ಅಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆಸಿತ್ತು.

ಸುದ್ದಿ ಮಾಧ್ಯಮ ಎಬಿಪಿ ನ್ಯೂಸ್ ನೊಂದಿಗೆ ಕೋಲ್ಕತಾ ಹಿಂಸಾಚಾರ ಕುರಿತು ಮಾತನಾಡಿದ ರಾಕೇಶ್ ತಿಕಾಯತ ಅವರು, "ಕೊಲೆ, ಅತ್ಯಾಚಾರ ಆಗಿದ್ದರೆ ಅದಕ್ಕೆ ದೇಶದಲ್ಲಿ ಕಾನೂನು ಇದೆ. ಅದನ್ನು ದೇಶಾದ್ಯಂತ ಪ್ರಚಾರ ಮಾಡುವ ಅಗತ್ಯ ಏನಿದೆ? ಹೀಗೆ ಮಾಡುವುದರಿಂದ ಸರ್ಕಾರದ(ಮಮತಾ ಬ್ಯಾನರ್ಜಿ) ಹೆಸರು ಹಾಳು ಮಾಡಲಾಗಿದೆ... ಕೆಲವು ಹತ್ತು ದಿನಗಳಿಂದ ಅದೇ 10 ಅದೇ ವಿಷಯವನ್ನು ಎತ್ತುವುದು ಏಕೆ? ರಾಜ್ಯ ಸರ್ಕಾರದ ವೈಫಲ್ಯ ಎತ್ತಿ? ಹಿಡಿಯುವುದಕ್ಕೆ? ರಾಷ್ಟ್ರಪತಿ ಶಾಸನ ಹಾಕುವುದಕ್ಕೆ?" ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ಬಾಂಗ್ಲಾದೇಶದ ಸ್ಥಿತಿಯ ಬಗ್ಗೆ ಮಾತನಾಡಿದ ತಿಕಾಯತ ಅವರು "ಅದೇ ರೀತಿ ಇಲ್ಲೂ ಕೂಡ ಆಗಲಿದೆ.. ಜನರು ತುಂಬಾ ಸಿಟ್ಟಿನಲ್ಲಿ ಇದ್ದಾರೆ." ಎಂದು ಬೆದರಿಕೆ ಹಾಕಿದ್ದಾರೆ.

ತಮ್ಮ ಮಾತು ಮುಂದಿವರಿಸಿದ ತಿಕಾಯತ ಅವರು, "ಆ ದಿನ ಟ್ರಾಕ್ಟರ್ ಗಳನ್ನು ತೆಗೆದುಕೊಂಡು ಡೆಲ್ಲಿಗೆ ಹೋಗಿದ್ದವರು, ತಪ್ಪಾಗಿ ಕೆಂಪು ಕೋಟೆಯ ಕಡೆಗೆ ತಿರುಗಿದರು, ಅದೇನಾದರೂ ಪಾರ್ಲಿಮೆಂಟ್ ಕಡೆಗೆ ಹೋಗಿದ್ದರೆ.. ಜನವರಿ 26 ಆಗಿತ್ತು.. 25,000 ಲಕ್ಷ ಜನರಿದ್ದರು, ಇದೆಲ್ಲ ಅಷ್ಟೂ ಕೆಲಸ(ಬಾಂಗ್ಲಾದೇಶ ಹಿಂಸಾಚಾರ ಮಾದರಿ) ಅವತ್ತೇ ಮಾಡಿ ಮುಗಿಸಿ ಬಿಡುತ್ತಿದ್ದೆವು.. ಗುರಿ ತಪ್ಪಿದೆ.. ಆದರೆ ಈಗ ತಯಾರಿ ಸರಿ ಇದೆ... ಜನರ ಚಿಂತೆ ಮಾಡಬೇಡಿ ದೊಡ್ಡ ಆಂದೋಲನ ನಡೆಸಿ ನಡೆಸುತ್ತೇವೆ", ಎಂದು ಗಂಭೀರ ಬೆದರಿಕೆಯನ್ನು ರಾಕೇಶ್ ತಿಕಾಯತ ನೀಡಿದ್ದಾರೆ.


English summary :We would have ended the Bangladesh-style(violence) struggle..couldnot, we will do it now - Farmer leader

ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
ಹಿರಿಯ ಗಾಯಕಿ ಆಶಾ ಬೋಸ್ಲೆ ನಿಧನ : ಪ್ರಧಾನಿ ಮೋದಿ ಸಂತಾಪ
 ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅನುಮೋದನೆ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ನಾಸಿಕ್ ಟಿಸಿಎಸ್ ಪ್ರಕರಣ: ಮತಾಂತರ, ಮೂಲಭೂತೀಕರಣ ಆರೋಪಗಳ ಮೇಲೆ ತನಿಖೆ ಆರಂಭ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
ದೋಷಾರೋಪಣೆ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಕರ್ನಲ್ ಪುರೋಹಿತ್‌ಗೆ ಬ್ರಿಗೇಡಿಯರ್ ಬಡ್ತಿಗೆ ಅನುಮತಿ
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಪ್ರತಿಯೊಬ್ಬ ಸೈನಿಕ ಡ್ರೋನ್ ಹಾರಿಸಲು ಸಿದ್ದವಾಗಬೇಕು - ಪ್ರತಿ ಸೈನಿಕನಿಗೆ ಡ್ರೋನ್ ಒದಗಿಸಲು ಸೇನಾ ಮುಖ್ಯಸ್ಥರು
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಿದ ಬೆಂಗಳೂರು ನ್ಯಾಯಾಲಯ
ಇರಾನ್‌ನ 10 ಅಂಶಗಳ ಯೋಜನೆಯನ್ನು ಟ್ರಂಪ್ ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿದ್ದಾರೆ - ಶ್ವೇತಭವನ
ಇರಾನ್‌ನ 10 ಅಂಶಗಳ ಯೋಜನೆಯನ್ನು ಟ್ರಂಪ್ ಸ್ವೀಕಾರಾರ್ಹವಲ್ಲ ಎಂದು ತಿರಸ್ಕರಿಸಿದ್ದಾರೆ - ಶ್ವೇತಭವನ
ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶದ ಮೇಲೆ ತಕ್ಷಣವೇ 50% ಸುಂಕ
ಇರಾನ್‌ಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸುವ ದೇಶದ ಮೇಲೆ ತಕ್ಷಣವೇ 50% ಸುಂಕ
ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಬೇಗನೆ ನಿರ್ಗಮಿಸಲು ಬಲವಾಗಿ ಸೂಚಿಸಿದ - ರಾಯಭಾರ ಕಚೇರಿ
ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಬೇಗನೆ ನಿರ್ಗಮಿಸಲು ಬಲವಾಗಿ ಸೂಚಿಸಿದ - ರಾಯಭಾರ ಕಚೇರಿ
ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ದ್ವೇಷ ಭಾಷಣ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲು
ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ದ್ವೇಷ ಭಾಷಣ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ ವಿರುದ್ಧ ಹಲವು ರಾಜ್ಯಗಳಲ್ಲಿ ಎಫ್‌ಐಆರ್ ದಾಖಲು
ಕಾಂಗ್ರೆಸ್ ನಾಯಕ ಪವನ್ ಖೇರಾ ಬಂಧಿಸಲು ದೆಹಲಿ ನಿವಾಸಕ್ಕೆ ತಲುಪಿದ ಪೊಲೀಸರು
ಕಾಂಗ್ರೆಸ್ ನಾಯಕ ಪವನ್ ಖೇರಾ ಬಂಧಿಸಲು ದೆಹಲಿ ನಿವಾಸಕ್ಕೆ ತಲುಪಿದ ಪೊಲೀಸರು

ನ್ಯೂಸ್ MORE NEWS...