Wed,Jul15,2026
ಕನ್ನಡ / English

ಮುಸ್ಲಿಮರ ಜಾತಿ ಬಗ್ಗೆ ಮಾತು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ಬಾಯಿಗೆ ಬೀಗ ಹಾಕಿಬಿಡುತ್ತದೆ - ಪ್ರಧಾನಿ ಮೋದಿ | JANATA NEWS

09 Oct 2024

ನವದೆಹಲಿ : ಮುಸ್ಲಿಮರ ಜಾತಿ ಬಗ್ಗೆ ಮಾತು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ಬಾಯಿಗೆ ಬೀಗ ಹಾಕಿಬಿಡುತ್ತದೆ. ಆದರೆ ಯಾವಾಗಲಾದರೂ ಹಿಂದು ಸಮಾಜದ ವಿಷಯ ಬಂದರೆ, ಕಾಂಗ್ರೆಸ್ ಅದರ ಚರ್ಚೆಯನ್ನು ಜಾತಿಯಿಂದಲೇ ಶುರು ಮಾಡುತ್ತದೆ. - ಎಂದು ಮುಸ್ಲಿಂ ಸಮುದಾಯದಲ್ಲಿರುವ ಜಾತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಹಿರಂಗವಾಗಿ ಮಾತನಾಡಿದ್ದಾರೆ. ಅವರು ಇಂದು ಮಹಾರಾಷ್ಟ್ರದಲ್ಲಿ ಯೋಜನೆಗಳಿಗೆ ವರ್ಚುಯಲ್ ಮೀಟಿಂಗ್ ಮೂಲಕ ಚಾಲನೆ ನೀಡಿ ಮಾತನಾಡಿದರು.

"ಕಾಂಗ್ರೆಸ್ ನ ಫಾರ್ಮುಲಾ ಸ್ಪಷ್ಟವಾಗಿದೆ, ಮುಸಲ್ಮಾನರಿಗೆ ಹೆದರಿಸುತ್ತಿರುವ, ಅವರನ್ನು ವೋಟ್ ಬ್ಯಾಂಕ್ ಆಗಿ ಪರಿವರ್ತಿಸುವುದು. ಕಾಂಗ್ರೆಸ್ ನ ಮುಖಂಡರು ಇಲ್ಲಿವರೆಗೂ ಎಂದಿಗೂ ಹೇಳಲಿಲ್ಲ ಮುಸ್ಲಿಮರಲ್ಲಿ ಎಷ್ಟು ಜಾತಿ ಇರುತ್ತದೆ ಎಂದು. ಮುಸ್ಲಿಮರ ಜಾತಿ ಬಗ್ಗೆ ಮಾತು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರ ಬಾಯಿಗೆ ಬೀಗ ಹಾಕಿಬಿಡುತ್ತದೆ. ಆದರೆ ಯಾವಾಗಲಾದರೂ ಹಿಂದು ಸಮಾಜದ ವಿಷಯ ಬಂದರೆ, ಕಾಂಗ್ರೆಸ್ ಅದರ ಚರ್ಚೆಯನ್ನು ಜಾತಿಯಿಂದಲೇ ಶುರು ಮಾಡುತ್ತದೆ." ಎಂದು ಪ್ರಧಾನಿ ಹೇಳಿದ್ದಾರೆ.

"ಕಾಂಗ್ರೆಸ್ ನ ನೀತಿ ಎಂದರೆ, ಹಿಂದುಗಳ ಒಂದು ಜಾತಿಯನ್ನು ಇನ್ನೊಂದು ಜಾತಿಯೊಂದಿಗೆ ಜಗಳ ಹಚ್ಚುವುದು. ಕಾಂಗ್ರೆಸ್ಸಿಗೆ ಗೊತ್ತು, ಎಷ್ಟು ಹಿಂದುಗಳು ಪಾಲಾಗುತ್ತಾರೋ ಅಷ್ಟು ಅದಕ್ಕೆ ಲಾಭವಾಗುತ್ತದೆ. ಕಾಂಗ್ರೆಸ್ ಹೇಗಾದರೂ ಮಾಡಿ ಹಿಂದೂ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಲು ಬಯಸುತ್ತದೆ. ಏಕೆಂದರೆ, ಅದು ಆ ಬೆಂಕಿ ಮೇಲೆ ತಮ್ಮ ರಾಜಕೀಯ ರೊಟ್ಟಿ ಬೇಸಿಕೊಳ್ಳುವ ಯೋಜನೆ ಹೊಂದಿದೆ. ಇಂದು ಸಮಾಜವನ್ನು ಒಡೆದು ಅದನ್ನು ತಮ್ಮ ರಾಜಕೀಯ ಗೆಲುವಿನ ಫಾರ್ಮುಲಾ ಮಾಡಿಕೊಳ್ಳುವುದೇ ಕಾಂಗ್ರೆಸ್ ನ ರಾಜನೀತಿಯ ಆಧಾರವಾಗಿದೆ." ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ನೀತಿಯ ಬಗ್ಗೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಹರಿಯಾಣದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು, "ದೇಶದ ಹುಮ್ಮಸ್ಸು ಏನಿದೆ ಎಂದು ಹರಿಯಾಣ ತಿಳಿಸಿದೆ. ಸತತ ಮೂರನೇ ಬಾರಿ ಆರಿಸಿ ಬರುವುದು ಐತಿಹಾಸಿಕವಾಗಿದೆ", ಎಂದಿದ್ದಾರೆ.

"ಕಾಂಗ್ರೆಸ್ ನ ಪೂರ್ತಿ ಇಕೋ ಸಿಸ್ಟಮ್ ಹಾಗೂ ಅರ್ಬನ್ ನಕ್ಸಲ್ ಪೂರ್ತಿ ತಂಡ ಜನರನ್ನು ಹಾದಿ ತಪ್ಪಿಸಲು ತೊಡಗಿತ್ತು, ಆದರೆ ಕಾಂಗ್ರೆಸ್ ನ ಎಲ್ಲಾ ಷಡ್ಯಂತ್ರಗಳು ಧ್ವಂಸಗೊಂಡಿವೆ."

"ಇವರು ದಲಿತ ಸಮಾಜದಲ್ಲಿ ಸುಳ್ಳು ಹಬ್ಬಿಸಲು ಪ್ರಯತ್ನಿಸಿದರು, ಆದರೆ ದಲಿತ ಸಮಾಜದವರು ಇವರ ದುರುದ್ದೇಶವನ್ನು ಅಳತೆ ಮಾಡಿ ಬಿಟ್ಟರು ತಮ್ಮ ಮೀಸಲಾತಿಯನ್ನು ಕಸಿದುಕೊಂಡು ಕಾಂಗ್ರೆಸ್ ತಮ್ಮ ವೋಟ್ ಬ್ಯಾಂಕ್ ಗೆ ಹಂಚು ತ್ತಾರೆ ಎಂದು ದಲಿತ ಸಮಾಜದವರಿಗೆ ಮನವರಿಕೆಯಾಯಿತು."

"ಇಂದು ಹರಿಯಾಣದ ದಲಿತ ಸಮಾಜ ಬಿಜೆಪಿಗೆ ಅಭೂತಪೂರ್ವ ಬೆಂಬಲ ನೀಡಿದೆ. ಹರಿಯಾಣದ ಓಬಿಸಿ ಬಿಜೆಪಿಯ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಅದರೊಂದಿಗೆ ಇದೆ. ಕಾಂಗ್ರೆಸ್ ರೈತರನ್ನು ಪ್ರಚೋದಿಸಿತು, ಆದರೆ ರೈತರಿಗೆ ಗೊತ್ತು ಅವರಿಗೆ ಎಂ.ಎಸ್.ಪಿ ಕೊಟ್ಟವರು ಯಾರು ಎಂದು.
ಹರಿಯಾಣದ ಜನ ತೋರಿಸಿದ್ದಾರೆ, ಈಗ ಅವರು ಕಾಂಗ್ರೆಸ್ ನ ಹಾಗೂ ಅರ್ಬನ್ ನಕ್ಸಲರ ದ್ವೇಷದ ಷಡ್ಯಂತರಕ್ಕೆ ಬಲಿಯಾಗುವುದಿಲ್ಲ ಎಂದು."

"ಕಾಂಗ್ರೆಸ್ ಯಾವಾಗಲೂ ಒಡೆದು ಅಧಿಕಾರ ಪಡೆಯುವ ಫಾರ್ಮುಲಾದ ಮೇಲೆ ನಡೆದಿದೆ. ಕಾಂಗ್ರೆಸ್ ಪದೇಪದೇ ತಾನೊಂದು ಬೇಜವಾಬ್ದಾರಿ ಯುತ ದಳ ಎಂದು ಸಾಬೀತುಪಡಿಸಿದೆ. ಅದು ಈಗಲೂ ದೇಶವನ್ನು ಒಡೆಯಲು ಹೊಸ ಹೊಸ ನಿರೂಪಣೆಯನ್ನು ಸಿದ್ಧಪಡಿಸುತ್ತಿದೆ. ಕಾಂಗ್ರೆಸ್ ಜನರನ್ನು ದಿಕ್ಕು ತಪ್ಪಿಸಲು ಹೊಸ ಹೊಸ ಫಾರ್ಮುಲಾ ವನ್ನು ತರುತ್ತಿರುತ್ತದೆ." ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದಾರೆ.

English summary :When talking about caste of Muslims, Congress leaders shut their mouths - PM Modi

ಅಪರೂಪದ ಭೂಮಿ-ಮುಕ್ತ ವಿದ್ಯುತ್ ಮೋಟಾರ್ ತಂತ್ರಜ್ಞಾನ ಬೆಂಗಳೂರು ಸ್ಟಾರ್ಟ್ಅಪ್ ದಿಂದ ಅನಾವರಣ
ಅಪರೂಪದ ಭೂಮಿ-ಮುಕ್ತ ವಿದ್ಯುತ್ ಮೋಟಾರ್ ತಂತ್ರಜ್ಞಾನ ಬೆಂಗಳೂರು ಸ್ಟಾರ್ಟ್ಅಪ್ ದಿಂದ ಅನಾವರಣ
2028–29 ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಅಭಿಯಾನ ಪ್ರಾರಂಭಿಸಿದ ಭಾರತ
2028–29 ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸ್ಥಾನಕ್ಕಾಗಿ ಅಭಿಯಾನ ಪ್ರಾರಂಭಿಸಿದ ಭಾರತ
ಬಿಡದಿಯಲ್ಲಿ ಭೂ ಸಮೀಕ್ಷೆಗೆ ಅಡ್ಡಿಪಡಿಸಿದ ಮಹಿಳಾ ರೈತರು, ಅಧಿಕಾರಿಗಳ ಮೇಲೆ ಪೊರಕೆಗಳಿಂದ ಹಲ್ಲೆ
ಬಿಡದಿಯಲ್ಲಿ ಭೂ ಸಮೀಕ್ಷೆಗೆ ಅಡ್ಡಿಪಡಿಸಿದ ಮಹಿಳಾ ರೈತರು, ಅಧಿಕಾರಿಗಳ ಮೇಲೆ ಪೊರಕೆಗಳಿಂದ ಹಲ್ಲೆ
ಭಾರತವು ತ್ವರಿತ ಅಮೆರಿಕದ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ವರದಿಗಳನ್ನು  ತಳ್ಳಿಹಾಕಿದ ಪಿಯೂಷ್ ಗೋಯಲ್
ಭಾರತವು ತ್ವರಿತ ಅಮೆರಿಕದ ವ್ಯಾಪಾರ ಒಪ್ಪಂದವನ್ನು ತಿರಸ್ಕರಿಸಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಪಿಯೂಷ್ ಗೋಯಲ್
 ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 27 ಸಾವು, 22 ಗಾಯ
ಬ್ಯಾಂಕಾಕ್ ಪಬ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ 27 ಸಾವು, 22 ಗಾಯ
ಶ್ರೀ ರಾಮ ಮಂದಿರದಲ್ಲಿ ದೇಣಿಗೆ ಅಕ್ರಮ :  ಪ್ರಸ್ತುತ ಎಸ್ಐಟಿ ಮತ್ತು ಪೊಲೀಸ್ ಕ್ರಮದ ಬಗ್ಗೆ ವಿಶ್ವಾಸ - ಆರಎಸ್ಎಸ್
ಶ್ರೀ ರಾಮ ಮಂದಿರದಲ್ಲಿ ದೇಣಿಗೆ ಅಕ್ರಮ : ಪ್ರಸ್ತುತ ಎಸ್ಐಟಿ ಮತ್ತು ಪೊಲೀಸ್ ಕ್ರಮದ ಬಗ್ಗೆ ವಿಶ್ವಾಸ - ಆರಎಸ್ಎಸ್
 ಜಾಗತಿಕ ಇಂಧನ ವ್ಯಾಪಾರದ ಬದಲಾವಣೆ : ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ಭಾರತ
ಜಾಗತಿಕ ಇಂಧನ ವ್ಯಾಪಾರದ ಬದಲಾವಣೆ : ರಷ್ಯಾಕ್ಕೆ ಪೆಟ್ರೋಲ್ ರಫ್ತು ಮಾಡುತ್ತಿರುವ ಭಾರತ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಉಗ್ರ ನಿಜ್ಜರ್ ಹತ್ಯೆಗೂ ಭಾರತ ಸರ್ಕಾರಕ್ಕೂಸಂಬಂಧವಿಲ್ಲ; ಬ್ರಾರ್ ಮಾಹಿತಿಗೆ 50 ಸಾವಿರ ಡಾಲರ್ ಬಹುಮಾನ - ಕೆನಡ, ಎಫ್‌ಬಿಐ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಇರಾನಿನ ಮಿಲಿಟರಿ ಗುರಿಗಳ ಮೇಲೆ ಅಮೆರಿಕ ಪ್ರಮುಖ ದಾಳಿ : ಹೆಚ್ಚಿದ ಉದ್ವಿಗ್ನತೆ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
ಬರುಯಿಪುರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿ ಪೊಲೀಸ್ ಎನ್ಕೌಂಟರ್ನಲ್ಲಿ ಬಲಿ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
2 ಭಯೋತ್ಪಾದನಾ ಘಟಕಗಳನ್ನು ಭೇದಿಸಿದ ದೆಹಲಿ ಪೊಲೀಸರು : 6 ಶಂಕಿತರ ಬಂಧನ
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು
ಎಸ್‌ಐಆರ್‌ ಬೃಹತ್ ಅಕ್ರಮ - ಎನ್‌ಡಿಎ ನಾಯಕರ ನಿಯೋಗದಿಂದ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ದೂರು

ನ್ಯೂಸ್ MORE NEWS...