Sun,May17,2026
ಕನ್ನಡ / English

ಸಿದ್ದರಾಮಯ್ಯ ಅವರು ಸುನ್ನತ್‌ ಮಾಡಿಸಿಕೊಳ್ಳುವುದೊಂದು ಬಾಕಿ, ಇನ್ನು ಎಲ್ಲಾ ದೃಷ್ಟಿಯಿಂದ ಮುಸಲ್ಮಾನ್ ಆಗಿಬಿಟ್ಟಿದ್ದಾರೆ - ಪ್ರತಾಪ್ ಸಿಂಹ | JANATA NEWS

04 Nov 2024

ಬೆಂಗಳೂರು : ವಕ್ಫ್‌ ಬೋರ್ಡ್‌ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡುವಿನ ತೀವ್ರ ಜಿದ್ದಾಜಿದ್ದಿನ ವಾಕ್ಸಮರ ತರಾಕಕ್ಕೆ ಏರುತ್ತಿದ್ದು, ಸಿದ್ದರಾಮಯ್ಯ ಸುನ್ನತ್‌ ಮಾಡಿಸಿಕೊಳ್ಳುವುದು ಮಾತ್ರ ಬಾಕಿ, ಪ್ರತಾಪ್ ಸಿಂಹ ಕೋಮುವಾದಿ ಇನ್ನಿತರ ಹೇಳಿಕಗಳ ಚರ್ಚೆಗಳು ಉಪಚುನಾವಣೆ ಸಂದರ್ಭದಲ್ಲಿ ಹೆಚ್ಚಾಗಿದೆ.

ವಕ್ಫ್‌ ಬೋರ್ಡ್‌ ವಿವಾದಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು, "ಸಾಬ್ರಿಗೇ ಮಾತ್ರ ಈ ವಕ್ಫ್‌ ಆಕ್ಟ್ ಯಾಕೆ ಬೇಕು? ಹಿಂದೂಗಳಿಗೆ ಅಥವಾ ಕ್ರಿಸ್ತಿಯನ್ ರಿಗೆ ಆ ರೀತಿ ಆಕ್ಟ್ ಇದೆಯಾ? ಬರಿ ಸಾಬ್ರಿಗೇ ಮಾತ್ರ ಯಾಕೆ ಬೇಕು? ಅವರನ್ನು ಓಲೈಸುವುದಗೋಸ್ಕರ ನೆಹರು ಕಾಲದಿಂದಲೂ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದ್ದಾರೆ. ಅದನ್ನ ಮುಂದುವರೆಸಿಕೊಂಡು ಹೋಗುವ ಪ್ರಯತ್ನವನ್ನು, ನಮ್ಮ ರೈತರಿಗೆ ಹೆದರಿಸುವ ಕೆಲಸವನ್ನು ನಮ್ಮ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಇವತ್ತು ರೈತರಿಗೆ ನೋಟಿಸ್ ಕೊಡಲು ಸಿದ್ದರಾಮಯ್ಯನವರಿಗೆ ನಾವು ಹೇಳಿದ್ದೇವಾ? ಸಾಬ್ರನ್ನು ಓಲೈಸಲು ಇನ್ನೂ ಏನು ಎಷ್ಟು ಸಿದ್ದರಾಮಯ್ಯನವರು ಹೋಗುತ್ತಾರೆ? ಅವರು ಸುನ್ನತ್‌ ಮಾಡಿಸಿಕೊಳ್ಳುವುದೊಂದು ಬಾಕಿ ಇದೆ, ಹೊರತು ಇನ್ನು ಎಲ್ಲಾ ದೃಷ್ಟಿಯಿಂದ ಕೂಡ ಅವರು ಒಂದು ರೀತಿಯಲ್ಲಿ ಮುಸಲ್ಮಾನ್ ಆಗಿಬಿಟ್ಟಿದ್ದಾರೆ," ಎಂದು ಮಾಜಿ ಸಂಸದ ಆರೋಪಿಸಿದ್ದರು.

"ಸಿದ್ದರಾಮಯ್ಯ ಅವರಿಗೆ ಒಳ್ಳೆಯ ಉದ್ದೇಶವಿದ್ದಿದ್ದರೆ, ನೋಟಿಸ್ ವಾಪಸ್‌ ಪಡೆಯುವುದಕ್ಕೆ ಬದಲಿಗೆ ಗೆಝೆಟ್‌ ನೋಟಿಫಿಕೇಶನ್ ವಾಪಸ್‌ ಪಡೆದುಕೊಳ್ಳಬೇಕಾಗಿತ್ತು. ಅಲ್ಲದೇ ಕರ್ನಾಟಕ ಭೂಸುಧಾರಣಾ ಕಾಯ್ದೆಯನ್ನು ಸಹ ವಕ್ಫ್‌ಗೆ ಅನ್ವಯ ಮಾಡಬಹುದಿತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನಿಜಕ್ಕೂ ಈ ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದೆ ಎನ್ನುವುದು ನಿಜವೇ ಆದರೆ, ಗೆಝೆಟ್ ನೋಟಿಫಿಕೇಶನ್ ವಾಪಸ್ ಪಡೆಯಲಿ," ಎಂದು ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ ಅವರು, "ಪ್ರತಾಪ್ ಸಿಂಹ ಮಹಾನ್ ಕೋಮುವಾದಿ. ಕೋಮುವಾದಿಗಳಿಂದ ಇದನ್ನು ಬಿಟ್ಟು ಬೇರೆನು ನಿರೀಕ್ಷೆ ಮಾಡಲಿಕ್ಕೆ ಆಗ್ತದೆ. ಇವರಿಗೆ ಸಂವಿಧಾನದ ಬಗ್ಗೆ ಗೌರವ ಎನ್ನುವುದು ಇಲ್ಲ. ಕೋಮುವಾದ ಮಾಡುವುದೇ ಅವರ ಕಸುಬು," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ ಅವರು, "ಹೌದು ನಾನು ಕೋಮುವಾದಿ, ಭಾರತಖಂಡದಲ್ಲಿ ಹುಟ್ಟಿದ ನಾನು, ಈ ನೆಲಜಲದ ಸಂಸೃತಿ ಅಂದರೆ ಹಿಂದೂ ಸಂಸ್ಕೃತಿಯನ್ನು ರಕ್ಷಿಸಲು ನಾನು ಏನು ಬೇಕಾದರೂ ಮಾಡುತ್ತೇನೆ. ನನ್ನ ಕೋಮುವಾದಿ ಎನ್ನುವುದಾದರೆ ಕೋಮುವಾದಿ ಎನ್ನಿ. ನಮ್ಮ ಧರ್ಮ ಈ ಇಸ್ಲಾಂ ಮತ್ತು ಕ್ರಿಶ್ಚಿಯನ್ ತರಹ ಯಾವ ನಾಗರಿಕತೆಯನ್ನೂ ನುಂಗಿ ಹಾಕಿಲ್ಲ. ಅವರು, ಕೋಮುವಾದಿ ಧರ್ಮಗಳು ಅವು," ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

English summary :Siddaramaiah has become a Muslim in all respects pending circumcision - Pratap Simha

ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ನ ಗುರುತಿಸಿದ ಸಿಬಿಐ
ನೀಟ್-ಯುಜಿ 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯ ಮತ್ತೊಬ್ಬ ಮಾಸ್ಟರ್‌ಮೈಂಡ್‌ನ ಗುರುತಿಸಿದ ಸಿಬಿಐ
ಹಾರ್ಮುಜ್ ಮೂಲಕ ಎಲ್‌ಪಿಜಿ ವಾಹಕಗಳ ಸುರಕ್ಷಿತ ಸಾಗಣೆಯನ್ನು ಭಾರತ ದೃಢಪಡಿಸಿದೆ; ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಹಾರ್ಮುಜ್ ಮೂಲಕ ಎಲ್‌ಪಿಜಿ ವಾಹಕಗಳ ಸುರಕ್ಷಿತ ಸಾಗಣೆಯನ್ನು ಭಾರತ ದೃಢಪಡಿಸಿದೆ; ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಸಿಬ್ಬಂದಿಯನ್ನು ರಕ್ಷಿಸಲಾಗಿದೆ.
ಐಯುಎಂಎಲ್ ಬೆಂಬಲ : ಕೆ.ಸಿ. ವೇಣುಗೋಪಾಲ್ ಬದಲು ವಿ.ಡಿ. ಸತೀಶನ್ ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ
ಐಯುಎಂಎಲ್ ಬೆಂಬಲ : ಕೆ.ಸಿ. ವೇಣುಗೋಪಾಲ್ ಬದಲು ವಿ.ಡಿ. ಸತೀಶನ್ ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ
 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ(ಎಸ್.ಐ.ಆರ್) ಚುನಾವಣಾ ಆಯೋಗ ಆದೇಶ
16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ(ಎಸ್.ಐ.ಆರ್) ಚುನಾವಣಾ ಆಯೋಗ ಆದೇಶ
ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ : ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಳ್ಳದಂತೆ ಇರಾನ್ ವಿದೇಶಾಂಗ ಸಚಿವ ಎಚ್ಚರಿಕೆ
ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ : ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಳ್ಳದಂತೆ ಇರಾನ್ ವಿದೇಶಾಂಗ ಸಚಿವ ಎಚ್ಚರಿಕೆ
ಪ್ರಧಾನಿ ಮೋದಿ ಭದ್ರತೆಗಾಗಿ ಕೇವಲ ಒಂದು ಹೆಚ್ಚುವರಿ ಬೆಂಗಾವಲು ವಾಹನದಲ್ಲಿ ಪ್ರಯಾಣ
ಪ್ರಧಾನಿ ಮೋದಿ ಭದ್ರತೆಗಾಗಿ ಕೇವಲ ಒಂದು ಹೆಚ್ಚುವರಿ ಬೆಂಗಾವಲು ವಾಹನದಲ್ಲಿ ಪ್ರಯಾಣ
ಪ್ರಧಾನಿ ಮೋದಿ ಇಂಧನ ಉಳಿತಾಯ ಮನವಿ : ಸೈಕಲ್‌ನಲ್ಲಿ ನ್ಯಾಯಾಲಯಕ್ಕೆ ಬಂದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು
ಪ್ರಧಾನಿ ಮೋದಿ ಇಂಧನ ಉಳಿತಾಯ ಮನವಿ : ಸೈಕಲ್‌ನಲ್ಲಿ ನ್ಯಾಯಾಲಯಕ್ಕೆ ಬಂದ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರು
ಇರಾನ್ ಮಿಲಿಟರಿ ವಿಮಾನಗಳು ತನ್ನ ವಾಯುನೆಲೆ ಬಳಸಲು ಅವಕಾಶ ಮಾಡಿಕೊಟ್ಟ ಪಾಕಿಸ್ತಾನ : ಅಮೆರಿಕ ಬೆನ್ನಿಗೆ ಚೂರಿ
ಇರಾನ್ ಮಿಲಿಟರಿ ವಿಮಾನಗಳು ತನ್ನ ವಾಯುನೆಲೆ ಬಳಸಲು ಅವಕಾಶ ಮಾಡಿಕೊಟ್ಟ ಪಾಕಿಸ್ತಾನ : ಅಮೆರಿಕ ಬೆನ್ನಿಗೆ ಚೂರಿ
ಭಾರತ-ಬಾಂಗ್ಲಾದೇಶ ಗಡಿ ಫೆನ್ಸಿಂಗ್‌ಗಾಗಿ ಬಿಎಸ್‌ಎಫ್‌ಗೆ ಭೂ ವರ್ಗಾವಣೆ ಘೋಷಿಸಿದ ಸಿಎಂ ಸುವೇಂದು
ಭಾರತ-ಬಾಂಗ್ಲಾದೇಶ ಗಡಿ ಫೆನ್ಸಿಂಗ್‌ಗಾಗಿ ಬಿಎಸ್‌ಎಫ್‌ಗೆ ಭೂ ವರ್ಗಾವಣೆ ಘೋಷಿಸಿದ ಸಿಎಂ ಸುವೇಂದು
ಹಿಮಂತ ಬಿಸ್ವಾ ಶರ್ಮಾ ರನ್ನು ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ನೇಮಿಸಿದ ಅಸ್ಸಾಂ ರಾಜ್ಯಪಾಲರು
ಹಿಮಂತ ಬಿಸ್ವಾ ಶರ್ಮಾ ರನ್ನು ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ನೇಮಿಸಿದ ಅಸ್ಸಾಂ ರಾಜ್ಯಪಾಲರು
ತಮಿಳುನಾಡು ಮುಖ್ಯಮಂತ್ರಿಯಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಪ್ರಮಾಣ ವಚನ ಸ್ವೀಕಾರ
ತಮಿಳುನಾಡು ಮುಖ್ಯಮಂತ್ರಿಯಾಗಿ ಟಿವಿಕೆ ಮುಖ್ಯಸ್ಥ ವಿಜಯ್ ಪ್ರಮಾಣ ವಚನ ಸ್ವೀಕಾರ
 ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ

ನ್ಯೂಸ್ MORE NEWS...