Wed,Feb25,2026
ಕನ್ನಡ / English

ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ವಿರುದ್ಧ ಕ್ರಮಕ್ಕೆ ಆದೇಶಿಸಿದ ಸಚಿವ ಮಧು ಬಂಗಾರಪ್ಪ | JANATA NEWS

20 Nov 2024

ಬೆಂಗಳೂರು : ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ ಎಂದ ಶಾಲಾ ವಿದ್ಯಾರ್ಥಿಯ ಮೇಲೆ ಗಂಭೀರ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆದೇಶಿಸಿದ್ದಾರೆ. ಶಿಕ್ಷಣ ಇಲಾಖೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಭಾಗವಹಿಸಿದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ, ಎನ್ನಲಾಗಿದೆ.

ಸಭೆಯ ಸಂದರ್ಭದಲ್ಲಿ ವಿದ್ಯಾರ್ಥಿ ಓರ್ವ ಮಾತನಾಡಿ, "ವಿದ್ಯಾ ಮಂತ್ರಿಗೆ ಕನ್ನಡ ಬರಲ್ಲ", ಎಂದಿರುವುದನ್ನು ಕೇಳಿಸಿಕೊಂಡ ಸಚಿವರು ಅಧಿಕಾರಿಗಳಿಗೆ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ, ಆ ವಿದ್ಯಾರ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದು, ಈ ವಿಡಿಯೋ ವೈರಲ್ ಆಗುತ್ತಿದೆ.

ಈ ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, "ಗುಬ್ಬಿ ಮೇಲೆ ಬ್ರಹ್ಮಾಸ್ತ್ರ! ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ. ", ಎಂದು ತರಾಟೆ ತೆಗೆದುಕೊಂಡಿದ್ದಾರೆ.

ಈ ಪೋಸ್ಟ್ ನಲ್ಲಿ, "ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು. ಪ್ರಜಾಪ್ರಭುತ್ವ ದಲ್ಲಿ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ., ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ. ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು," ಎಂದು ಒತ್ತಾಯಿಸಿದ್ದಾರೆ.

English summary :Minister Madhu Bangarappa ordered action against the student saying that the education minister does not know Kannada

ಶಿವಮೊಗ್ಗದಲ್ಲಿ 15 ವರ್ಷದ ಬಾಲಕನ ಹತ್ಯೆ; ನಗರದ ಕೆಲವು ಭಾಗಗಳಲ್ಲಿ ಉದ್ವಿಗ್ನತೆ
ಶಿವಮೊಗ್ಗದಲ್ಲಿ 15 ವರ್ಷದ ಬಾಲಕನ ಹತ್ಯೆ; ನಗರದ ಕೆಲವು ಭಾಗಗಳಲ್ಲಿ ಉದ್ವಿಗ್ನತೆ
ಬಿಎಸ್ಎಫ್ ಕಮಾಂಡೆಂಟ್ ಜಿಬು ಮ್ಯಾಥ್ಯೂ ಸಿಬಿಐನಿಂದ ಬಂಧನ: 96 ಕೋಟಿ ವಶ?
ಬಿಎಸ್ಎಫ್ ಕಮಾಂಡೆಂಟ್ ಜಿಬು ಮ್ಯಾಥ್ಯೂ ಸಿಬಿಐನಿಂದ ಬಂಧನ: 96 ಕೋಟಿ ವಶ?
ಅಂಗನವಾಡಿ ಶಿಕ್ಷಕರ ನೇಮಕಾತಿಗೆ ಉರ್ದು ಪ್ರಾವೀಣ್ಯತೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ
ಅಂಗನವಾಡಿ ಶಿಕ್ಷಕರ ನೇಮಕಾತಿಗೆ ಉರ್ದು ಪ್ರಾವೀಣ್ಯತೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ
ಇರಾನ್‌ನಿಂದ ತಕ್ಷಣ ಹೊರಹೋಗುವಂತೆ ಭಾರತೀಯರಿಗೆ ಸಲಹೆ ನೀಡಿದ ಭಾರತ ಸರ್ಕಾರ
ಇರಾನ್‌ನಿಂದ ತಕ್ಷಣ ಹೊರಹೋಗುವಂತೆ ಭಾರತೀಯರಿಗೆ ಸಲಹೆ ನೀಡಿದ ಭಾರತ ಸರ್ಕಾರ
ಪ್ರಧಾನಿ ಮೋದಿ ಭಾರತವನ್ನು ಎಲೆಕ್ಟ್ರಾನಿಕ್ಸ್ ಶಕ್ತಿ ಕೇಂದ್ರವಾಗಿ ಸ್ಥಾಪಿಸಿದ್ದಾರೆ : ಅಶ್ವಿನಿ ವೈಷ್ಣವ್
ಪ್ರಧಾನಿ ಮೋದಿ ಭಾರತವನ್ನು ಎಲೆಕ್ಟ್ರಾನಿಕ್ಸ್ ಶಕ್ತಿ ಕೇಂದ್ರವಾಗಿ ಸ್ಥಾಪಿಸಿದ್ದಾರೆ : ಅಶ್ವಿನಿ ವೈಷ್ಣವ್
ಭಾರತದ ಮೇಲಿನ ಅಮೆರಿಕದ ಸುಂಕವನ್ನು ಶೇ.10ಕ್ಕೆ ಇಳಿಸುವುದಾಗಿ ಸ್ಪಷ್ಟಪಡಿಸಿದ ಶ್ವೇತಭವನ
ಭಾರತದ ಮೇಲಿನ ಅಮೆರಿಕದ ಸುಂಕವನ್ನು ಶೇ.10ಕ್ಕೆ ಇಳಿಸುವುದಾಗಿ ಸ್ಪಷ್ಟಪಡಿಸಿದ ಶ್ವೇತಭವನ
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಜಾಗತಿಕ ಎಐ ಅಭಿವೃದ್ಧಿಯನ್ನು ರೂಪಿಸಲು ದೆಹಲಿ ಘೋಷಣೆಯನ್ನು ಅಳವಡಿಸಿಕೊಂಡ 75 ರಾಷ್ಟ್ರಗಳು
ಜಾಗತಿಕ ಎಐ ಅಭಿವೃದ್ಧಿಯನ್ನು ರೂಪಿಸಲು ದೆಹಲಿ ಘೋಷಣೆಯನ್ನು ಅಳವಡಿಸಿಕೊಂಡ 75 ರಾಷ್ಟ್ರಗಳು
ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಯಲ್ಲಿ ಭಾರತದ ಡಿಜಿಟಲ್ ವೃದ್ಧಿಯನ್ನು ಶ್ಲಾಘಿಸಿದ ಮ್ಯಾಕ್ರನ್
ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಯಲ್ಲಿ ಭಾರತದ ಡಿಜಿಟಲ್ ವೃದ್ಧಿಯನ್ನು ಶ್ಲಾಘಿಸಿದ ಮ್ಯಾಕ್ರನ್
ನಿಯೋಗ ಮಟ್ಟದ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ನಿಯೋಗ ಮಟ್ಟದ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿವೈಡರ್ ಹಾರಿ ಐವರು ಸಾವು
ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿವೈಡರ್ ಹಾರಿ ಐವರು ಸಾವು

ನ್ಯೂಸ್ MORE NEWS...