Wed,Feb25,2026
ಕನ್ನಡ / English

ಸಂಸತ್ ಹೊಸ್ತಿಲಲ್ಲಿ ರಾಹುಲ್ ಗಾಂಧಿಯಿಂದ ನೂಕಾಟದಲ್ಲಿ 2 ಬಿಜೆಪಿ ಸಂಸದರಿಗೆ ಗಾಯ : ಪೊಲೀಸ್ ದೂರು | JANATA NEWS

19 Dec 2024

ನವದೆಹಲಿ : ಸಂಸತ್ ಎದುರು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನೂಕಾಟ ನಡೆದಿದ್ದು ಪರಿಣಾಮ ಕೆಲವು ಸಂಸದರು ಗಾಯಗೊಂಡ ಘಟನೆ ನಡೆದಿದೆ.

ಭಾರತೀಯ ಜನತಾ ಪಕ್ಷದ(ಬಿಜೆಪಿ) ಸಂಸದ ಪ್ರತಾಪ್ ಸಾರಂಗಿ ಗಂಭೀರವಾಗಿ ತಲೆಗೆ ಗಾಯವಾಗಿದ್ದು, "ರಾಹುಲ್ ಗಾಂಧಿ ತಳ್ಳಿದ್ದರಿಂದ ನಾನು ಬಿದ್ದು ಗಾಯವಾಗಿದೆ", ಎಂದು ಬಿಜೆಪಿ ಸಂಸದ ಸಾರಂಗಿ ಹೇಳಿದ್ದಾರೆ.

"ನಾನು ಸಂಸತ್‌ ಎದುರು ನಿಂತಿದ್ದೆ. ಈ ವೇಳೆ ರಾಹುಲ್‌ ಗಾಂಧಿ ಸಂಸದರೊಬ್ಬರನ್ನು ತಳ್ಳಿದ್ದಾರೆ. ಆ ಸಂಸದ ನನ್ನ ಮೇಲೆ ಬಿದ್ದಿದ್ದರಿಂದ ನಾನು ಉರುಳಿಬಿದ್ದೆ" ಎಂದು ಸಾರಂಗಿ ತಿಳಿಸಿದ್ದಾರೆ.

ಈ ಘಟನೆಯಲ್ಲಿ ತಲೆಗೆ ಗಂಭೀರವಾಗಿ ಗಾಯವಾಗಿ ರಕ್ತ ಸುರಿಯಲು ಆರಂಭಿಸಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಬೆಂಗಳೂರು ಗ್ರಾಮಾಂತರ ಸಂಸದರು ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿಎನ್‌ ಮಂಜುನಾಥ್‌ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡ ಬಿಜೆಪಿ ಸಂಸದರು, "ರಾಹುಲ್ ಗಾಂಧಿ, ನಿಮಗೆ ನಾಚಿಕೆ ಆಗುವುದಿಲ್ಲವೇ? ಗುಂಡಾ ವರ್ತನೆ ಮಾಡುತ್ತಿರಾ ನೀವು?" ಎಂದು ರಾಹುಲ್ ಗಾಂಧಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಇದೆಲ್ಲವೂ ವಿಡಿಯೋ ಒಂದರಲ್ಲಿ ರೆಕಾರ್ಡ್ ಆಗಿದ್ದು, ಪ್ರತಾಪ್‌ ಸಾರಂಗಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಳಕ್ಕೆ ರಾಹುಲ್‌ ಗಾಂಧಿ ಬಂದಿದ್ದು ಕಂಡು ಬಂದಿದ್ದರೂ, ಸಾರಂಗಿ ಅವರಿಗೆ ಏನ್‌ ಆಯ್ತು ಎಂದು ವಿಚಾರಿಸಲೂ ಕೂಡ ರಾಹುಲ್‌ ಗಾಂಧಿ ಮನಸ್ಸು ಮಾಡಿಲ್ಲ.

ಇನ್ನು ಪ್ರತಾಪ್‌ ಸಾರಂಗಿ ಆರೋಪದ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ, "ಹೌದು, ಹೌದು, ಆಗಿದೆ, ಸರಿ ಇದೆ. ಸರಿ ಇದೆ. ಆದರೆ, ತಳ್ಳುವುದರಿಂದ ಏನೂ ಆಗೋದಿಲ್ಲ. ನಾನು ಸಂಸತ್ತಿನ ಒಳಗೆ ಹೋಗಲು ಬಯಸಿದ್ದೆ. ಸಂಸತ್ತಿಗೆ ಹೋಗುವುದು ನನ್ನ ಹಕ್ಕು, ತಡೆಯುವ ಪ್ರಯತ್ನ ನಡೆದಿದೆ," ಎಂದು ಹೇಳಿದ್ದಾರೆ.

English summary :2 BJP MPs injured in Rahul Gandhi push on Parliament threshold, police complaint lodged

ಶಿವಮೊಗ್ಗದಲ್ಲಿ 15 ವರ್ಷದ ಬಾಲಕನ ಹತ್ಯೆ; ನಗರದ ಕೆಲವು ಭಾಗಗಳಲ್ಲಿ ಉದ್ವಿಗ್ನತೆ
ಶಿವಮೊಗ್ಗದಲ್ಲಿ 15 ವರ್ಷದ ಬಾಲಕನ ಹತ್ಯೆ; ನಗರದ ಕೆಲವು ಭಾಗಗಳಲ್ಲಿ ಉದ್ವಿಗ್ನತೆ
ಬಿಎಸ್ಎಫ್ ಕಮಾಂಡೆಂಟ್ ಜಿಬು ಮ್ಯಾಥ್ಯೂ ಸಿಬಿಐನಿಂದ ಬಂಧನ: 96 ಕೋಟಿ ವಶ?
ಬಿಎಸ್ಎಫ್ ಕಮಾಂಡೆಂಟ್ ಜಿಬು ಮ್ಯಾಥ್ಯೂ ಸಿಬಿಐನಿಂದ ಬಂಧನ: 96 ಕೋಟಿ ವಶ?
ಅಂಗನವಾಡಿ ಶಿಕ್ಷಕರ ನೇಮಕಾತಿಗೆ ಉರ್ದು ಪ್ರಾವೀಣ್ಯತೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ
ಅಂಗನವಾಡಿ ಶಿಕ್ಷಕರ ನೇಮಕಾತಿಗೆ ಉರ್ದು ಪ್ರಾವೀಣ್ಯತೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ
ಇರಾನ್‌ನಿಂದ ತಕ್ಷಣ ಹೊರಹೋಗುವಂತೆ ಭಾರತೀಯರಿಗೆ ಸಲಹೆ ನೀಡಿದ ಭಾರತ ಸರ್ಕಾರ
ಇರಾನ್‌ನಿಂದ ತಕ್ಷಣ ಹೊರಹೋಗುವಂತೆ ಭಾರತೀಯರಿಗೆ ಸಲಹೆ ನೀಡಿದ ಭಾರತ ಸರ್ಕಾರ
ಪ್ರಧಾನಿ ಮೋದಿ ಭಾರತವನ್ನು ಎಲೆಕ್ಟ್ರಾನಿಕ್ಸ್ ಶಕ್ತಿ ಕೇಂದ್ರವಾಗಿ ಸ್ಥಾಪಿಸಿದ್ದಾರೆ : ಅಶ್ವಿನಿ ವೈಷ್ಣವ್
ಪ್ರಧಾನಿ ಮೋದಿ ಭಾರತವನ್ನು ಎಲೆಕ್ಟ್ರಾನಿಕ್ಸ್ ಶಕ್ತಿ ಕೇಂದ್ರವಾಗಿ ಸ್ಥಾಪಿಸಿದ್ದಾರೆ : ಅಶ್ವಿನಿ ವೈಷ್ಣವ್
ಭಾರತದ ಮೇಲಿನ ಅಮೆರಿಕದ ಸುಂಕವನ್ನು ಶೇ.10ಕ್ಕೆ ಇಳಿಸುವುದಾಗಿ ಸ್ಪಷ್ಟಪಡಿಸಿದ ಶ್ವೇತಭವನ
ಭಾರತದ ಮೇಲಿನ ಅಮೆರಿಕದ ಸುಂಕವನ್ನು ಶೇ.10ಕ್ಕೆ ಇಳಿಸುವುದಾಗಿ ಸ್ಪಷ್ಟಪಡಿಸಿದ ಶ್ವೇತಭವನ
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಜಾಗತಿಕ ಎಐ ಅಭಿವೃದ್ಧಿಯನ್ನು ರೂಪಿಸಲು ದೆಹಲಿ ಘೋಷಣೆಯನ್ನು ಅಳವಡಿಸಿಕೊಂಡ 75 ರಾಷ್ಟ್ರಗಳು
ಜಾಗತಿಕ ಎಐ ಅಭಿವೃದ್ಧಿಯನ್ನು ರೂಪಿಸಲು ದೆಹಲಿ ಘೋಷಣೆಯನ್ನು ಅಳವಡಿಸಿಕೊಂಡ 75 ರಾಷ್ಟ್ರಗಳು
ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಯಲ್ಲಿ ಭಾರತದ ಡಿಜಿಟಲ್ ವೃದ್ಧಿಯನ್ನು ಶ್ಲಾಘಿಸಿದ ಮ್ಯಾಕ್ರನ್
ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಯಲ್ಲಿ ಭಾರತದ ಡಿಜಿಟಲ್ ವೃದ್ಧಿಯನ್ನು ಶ್ಲಾಘಿಸಿದ ಮ್ಯಾಕ್ರನ್
ನಿಯೋಗ ಮಟ್ಟದ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ನಿಯೋಗ ಮಟ್ಟದ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿವೈಡರ್ ಹಾರಿ ಐವರು ಸಾವು
ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿವೈಡರ್ ಹಾರಿ ಐವರು ಸಾವು

ನ್ಯೂಸ್ MORE NEWS...