Mon,Aug24,2026
ಕನ್ನಡ / English

ಕೇಂದ್ರ ಸಚಿವ ಗಡ್ಕರಿಗೆ ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭ ಮುಂದೂಡಲು ಕೋರಿ ಸಿಎಂ ಸಿದ್ದರಾಮಯ್ಯ ಪತ್ರ | JANATA NEWS

14 Jul 2025

ಬೆಂಗಳೂರು : ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭವನ್ನು ಮುಂದೂಡಲು ಕೋರಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿದ್ದಾರೆ.

ಇಂದು, ಜುಲೈ 14 ರಂದು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಸಮಾರಂಭವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು(ಎನ್‌ಎಚ್‌ಎ) ನಿರ್ಮಿಸಿದ ಸಾಗರ-ಸಿಗಂದೂರು ಕೇಬಲ್ ಸೇತುವೆಯು ಅತ್ಯಾಧುನಿಕ ಮತ್ತು ಅತಿ ಉದ್ದದ ಸೇತುವೆಯಾಗಿದ್ದು, ಇದನ್ನು ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ, ಜೊತೆಗೆ ರೂ.2000 ಕೋಟಿ ಮೌಲ್ಯದ ಇತರ ಎನ್‌ಎಚ್‌ಎ ಯೋಜನೆಗಳ ಶಿಲಾನ್ಯಾಸ ಸಮಾರಂಭವೂ ನಡೆಯಲಿದೆ.

ನನ್ನನ್ನು ತಡವಾಗಿ ಆಮಂತ್ರಿಸಿದ್ದು, ಬೇರೆಡೆ ಕಾರ್ಯಕ್ರಮಗಳನ್ನು ನಾನು ಹಮ್ಮಿಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿ, ಬೇರೊಂದು ದಿನ ಆಯೋಜಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.

ಪತ್ರದ ಸಾರಾಂಶ :
"ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿವಮೊಗ್ಗ ಜಿಲ್ಲೆ ಸಾಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಸಹಾ ಮುದ್ರಿಸಲಾಗಿದೆ. ಆದರೆ ನನಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದ ಕಾರಣದಿಂದ ಈಗಾಗಲೇ ನನ್ನ‌ ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ."

"ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯು ಇಂತಹ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಗೆ ಮುನ್ನ ರಾಜ್ಯ ಸರ್ಕಾರವನ್ನು ಮುಂಚಿತವಾಗಿಯೇ ಸಂಪರ್ಕಿಸಿದ್ದರೆ ಮತ್ತಷ್ಟು ಸಮರ್ಪಕವಾಗಿರುತ್ತಿತ್ತು. ಮುಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಸಕಾಲದಲ್ಲಿ ಸಂಪರ್ಕಿಸುವಂತೆ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಗೆ ಸೂಚನೆ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ."

"ಇಂದಿನ ಕಾರ್ಯಕ್ರಮವನ್ನು ಮುಂದೂಡಿ, ನಿಮಗೆ ಅನುಕೂಲವಾಗುವ ಒಂದೆರೆಡು ದಿನಾಂಕಗಳನ್ನು ನನಗೆ ಒದಗಿಸಬೇಕೆಂದು ಕೋರುತ್ತೇನೆ. ಆ ಮೂಲಕ ಇಂಥದ್ದೊಂದು ಮಹತ್ವದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಲು ಸಾಧ್ಯವಾಗಲಿದೆ."

English summary :CM Siddaramaiah requests to postpone the inauguration ceremony of the bridge between Gadkari and Sagar - Sigandur.

ಉದ್ಯಾನವನದ ಭೂಮಿ ಬೇರೆ ಉದ್ದೇಶಕ್ಕೆ ಬಳಸುವ ಪ್ರಸ್ತಾವನೆ ಮರುಪರಿಶೀಲಿಸುವಂತೆ ಸಿಎಂ ಡಿಕೆಶಿಗೆ ಸಂಸದ ಸೂರ್ಯ ಆಗ್ರಹ
ಉದ್ಯಾನವನದ ಭೂಮಿ ಬೇರೆ ಉದ್ದೇಶಕ್ಕೆ ಬಳಸುವ ಪ್ರಸ್ತಾವನೆ ಮರುಪರಿಶೀಲಿಸುವಂತೆ ಸಿಎಂ ಡಿಕೆಶಿಗೆ ಸಂಸದ ಸೂರ್ಯ ಆಗ್ರಹ
 ಮಹಾರಾಷ್ಟ್ರದಲ್ಲಿ ಐಫೋನ್ ದುರಂತ: ಪ್ರಪಾತಕ್ಕೆ ಬಿದ್ದು ಪೋಷಕರು ಮತ್ತು ಮಗ ಸಾವು
ಮಹಾರಾಷ್ಟ್ರದಲ್ಲಿ ಐಫೋನ್ ದುರಂತ: ಪ್ರಪಾತಕ್ಕೆ ಬಿದ್ದು ಪೋಷಕರು ಮತ್ತು ಮಗ ಸಾವು
ವಾಲ್ಮೀಕಿ ನಿಗಮ ಹಗರಣ: ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಪ್ರತಿಭಟನೆ, ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹ
ವಾಲ್ಮೀಕಿ ನಿಗಮ ಹಗರಣ: ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಪ್ರತಿಭಟನೆ, ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹ
 ಇಸ್ಲಾಮಾಬಾದ್ ಕ್ರಮದ ನಂತರ ಭಾರತ ಪಾಕಿಸ್ತಾನ ಹೈಕಮಿಷನ್ ಹೊರಗಿನ ಅತಿಕ್ರಮಣಗಳನ್ನು ತೆರವುಗೊಳಿಸಿದೆ
ಇಸ್ಲಾಮಾಬಾದ್ ಕ್ರಮದ ನಂತರ ಭಾರತ ಪಾಕಿಸ್ತಾನ ಹೈಕಮಿಷನ್ ಹೊರಗಿನ ಅತಿಕ್ರಮಣಗಳನ್ನು ತೆರವುಗೊಳಿಸಿದೆ
 ಬೆಂಗಳೂರಿನಲ್ಲಿ ಮಾರಾಟ ₹35 ಲಕ್ಷ ದಾಟಿದೆ; ಎಚ್ಎಂಟಿ ವಾಚ್‌ಗಳಿಗೆ ಭರ್ಜರಿ ಮರುಬಾಳಿಕೆ - ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರಿನಲ್ಲಿ ಮಾರಾಟ ₹35 ಲಕ್ಷ ದಾಟಿದೆ; ಎಚ್ಎಂಟಿ ವಾಚ್‌ಗಳಿಗೆ ಭರ್ಜರಿ ಮರುಬಾಳಿಕೆ - ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಜಮ್ಮು-ಕಾಶ್ಮೀರದ ವಿಷಯಗಳನ್ನು ವಿದೇಶಿ ರಾಯಭಾರಿಗಳ ಮುಂದೆ ಪ್ರಸ್ತಾಪಿಸುವುದು ನನ್ನ ಅಭ್ಯಾಸವಲ್ಲ - ಸಿಎಂ ಒಮರ್ ಅಬ್ದುಲ್ಲಾ
ಜಮ್ಮು-ಕಾಶ್ಮೀರದ ವಿಷಯಗಳನ್ನು ವಿದೇಶಿ ರಾಯಭಾರಿಗಳ ಮುಂದೆ ಪ್ರಸ್ತಾಪಿಸುವುದು ನನ್ನ ಅಭ್ಯಾಸವಲ್ಲ - ಸಿಎಂ ಒಮರ್ ಅಬ್ದುಲ್ಲಾ
ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡ ಫುಟ್‌ಪಾತ್ ಒತ್ತುವರಿ : ತೆರವು ಕಾರ್ಯಾಚರಣೆ ಪ್ರಚಾರಕ್ಕಾಗಷ್ಟೇ - ಆರ್. ಅಶೋಕ
ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡ ಫುಟ್‌ಪಾತ್ ಒತ್ತುವರಿ : ತೆರವು ಕಾರ್ಯಾಚರಣೆ ಪ್ರಚಾರಕ್ಕಾಗಷ್ಟೇ - ಆರ್. ಅಶೋಕ
 ತಪ್ಪು ಮಾಹಿತಿ ನೀಡುವ ವೀಡಿಯೊ :: ಕಾಂಗ್ರೆಸ್ ನ ಸುಪ್ರಿಯಾ ಶ್ರೀನಾಟೆ ಮತ್ತು ನೇಹಾ ಸಿಂಗ್ ರಾಥೋರ್ ವಿರುದ್ಧ ಎಫ್‌ಐಆರ್
ತಪ್ಪು ಮಾಹಿತಿ ನೀಡುವ ವೀಡಿಯೊ :: ಕಾಂಗ್ರೆಸ್ ನ ಸುಪ್ರಿಯಾ ಶ್ರೀನಾಟೆ ಮತ್ತು ನೇಹಾ ಸಿಂಗ್ ರಾಥೋರ್ ವಿರುದ್ಧ ಎಫ್‌ಐಆರ್
ಭಾರತೀಯ ಮತದಾರರ ಗುರುತಿನ ಚೀಟಿ ವ್ಯವಸ್ಥೆಯನ್ನು ಉಲ್ಲೇಖಿಸಿ, ಸೇವ್ ಅಮೇರಿಕಾ ಕಾಯ್ದೆ ಜಾರಿಗೆ ತಂದ ಟ್ರಂಪ್
ಭಾರತೀಯ ಮತದಾರರ ಗುರುತಿನ ಚೀಟಿ ವ್ಯವಸ್ಥೆಯನ್ನು ಉಲ್ಲೇಖಿಸಿ, ಸೇವ್ ಅಮೇರಿಕಾ ಕಾಯ್ದೆ ಜಾರಿಗೆ ತಂದ ಟ್ರಂಪ್
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಐಎಸ್‌ಐ ಬೆಂಬಲಿತ ಜಾಲವನ್ನು ಭಾರತ ಪತ್ತೆಹಚ್ಚಿ, ನಾಶಪಡಿಸಿದೆ - ಅಮಿತ್ ಶಾ ಹೇಳಿದ್ದಾರೆ
ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಐಎಸ್‌ಐ ಬೆಂಬಲಿತ ಜಾಲವನ್ನು ಭಾರತ ಪತ್ತೆಹಚ್ಚಿ, ನಾಶಪಡಿಸಿದೆ - ಅಮಿತ್ ಶಾ ಹೇಳಿದ್ದಾರೆ
ಬಿಜೆಪಿ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ಪ್ರಕಟ: ಇದನ್ನು ಭಾರತದ ಭವಿಷ್ಯದ ತಂಡ ಎಂದು ಬಣ್ಣಿಸಿದ ನಿತಿನ್ ನಬಿನ್
ಬಿಜೆಪಿ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡ ಪ್ರಕಟ: ಇದನ್ನು ಭಾರತದ ಭವಿಷ್ಯದ ತಂಡ ಎಂದು ಬಣ್ಣಿಸಿದ ನಿತಿನ್ ನಬಿನ್
ವಂದೇ ಮಾತರಂ ಗೆ ಅವಮಾನವೆಸಗಿದ ಆರೋಪ: ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ
ವಂದೇ ಮಾತರಂ ಗೆ ಅವಮಾನವೆಸಗಿದ ಆರೋಪ: ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ

ನ್ಯೂಸ್ MORE NEWS...