Wed,Feb25,2026
ಕನ್ನಡ / English

ಕನ್ನಡ ಬಿಗ್ ಬಾಸ್ ಮನೆಗೆ ಬೀಗ : ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುತ್ತಿದೆ ಎಂದು ಪ್ರತಿಪಕ್ಷದ ವಾಗ್ದಾಳಿ | JANATA NEWS

08 Oct 2025

ಬೆಂಗಳೂರು : ಕನ್ನಡದ ಸುಪ್ರಸಿದ್ಧ ಚಲನಚಿತ್ರ ನಟ ಕಿಚ್ಚ ಸುದೀಪ್ ನೇತ್ರತ್ವದ ಕನ್ನಡ ಬಿಗ್ ಬಾಸ್ ಸೀಸನ್ 12 ಕ್ಕೆ ತೊಂದರೆ ಕೊಡಲು ಪ್ರಯತ್ನಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ರಾಜ್ಯದಲ್ಲಿ ಪ್ರತಿಪಕ್ಷಗಳೂ ಸೇರಿದಂತೆ ಸಾಕಷ್ಟು ಛೀಮಾರಿಯನ್ನು ಎದುರಿಸುವಂತಾಗಿದೆ.

ಸ್ಯಾಂಡಲ್ ವುಡ್ ನಟ್ಟು-ಬೋಲ್ಟ್ ಟೈಟ್ ಮಾಡುವ ಬಗ್ಗೆ ಈ ಹಿಂದೆ ಎಚ್ಚರಿಕೆ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಯನ್ನು ಉಲ್ಲೇಖಿಸಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, "ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ರಾಜಧಾನಿಯ ರಸ್ತೆ ಗುಂಡಿ ಮುಚ್ಚಲು ಆಗಿಲ್ಲ. ಯಮರೂಪದ ಗುಂಡಿಗಳಿಗೆ ಟಾರ್‌, ಸಿಮೆಂಟ್‌ ಹಾಕುವ ಬದಲು ಡಿಕೆ ಶಿವಕುಮಾರ್ ಸ್ಪ್ಯಾನರ್‌ ಹಿಡಿದು ನಟ್‌-ಬೋಲ್ಟ್‌ ಬಿಗಿ ಮಾಡಲು ಹೊರಟಿದ್ದಾರೆ! ಜನರಿಗೆ ರಸ್ತೆ ಗುಂಡಿ ಚಿಂತೆಯಾದರೆ, ಸರ್ಕಾರಕ್ಕೆ ಪ್ರಚಾರದ ಚಿಂತೆ.", ಎಂದಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ ಜೆಡಿಎಸ್ ಪಕ್ಷ ಸರಣಿ ಸವಾಲನ್ನು ಎಸೆಗಿದೆ, "ನಿಯಮಗಳ ಉಲ್ಲಂಘನೆ ನೆಪದಲ್ಲಿ ಬಿಡದಿಯ ಬಿಗ್ ಬಾಸ್ ಮನೆಗೆ ಬೀಗ ಹಾಕಿಸಿದ್ದೀರಿ. ಒಪ್ಪಿಕೊಳ್ಳೋಣ. ‌ಅದೇ ರೀತಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೇ.. ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ?

ರಾಜ್ಯದ ಜನರ ಮೇಲೆ ನಿರಂತರವಾಗಿ ತೆರಿಗೆ ಬರೆ ಎಳೆದು ಲೂಟಿ ಹೊಡೆಯುತ್ತಿರುವುದಕ್ಕೆ ಯಾವಾಗ ಬೀಗ ಹಾಕುತ್ತೀರಾ? ಬೆಲೆ ಏರಿಕೆಗಳ ಮೂಲಕ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ?

ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯನ್ನು ತಡೆಯಲು ಯಾವ ರೀತಿ ಬೀಗ ಹಾಕಿಸುತ್ತೀರಾ?

ರಾಜ್ಯದ ಜನರ ತೆರಿಗೆ ಹಣವನ್ನು ಅಕ್ರಮವಾಗಿ ವಾಮಮಾರ್ಗಗಳ ಮೂಲಕ ಕಾಂಗ್ರೆಸ್ ಹೈಕಮಾಂಡ್'ಗೆ ಕಪ್ಪ ಒಪ್ಪಿಸುತ್ತಿರುವುದಕ್ಕೆ ಯಾವಾಗ ಬೀಗ ಹಾಕಿಸುತ್ತೀರಾ?

ಕಾಂಗ್ರೆಸ್ ಸರ್ಕಾರದ 60% ಕಮಿಷನ್ ದಂಧೆಗೆ ಯಾವಾಗ ಬೀಗ ಹಾಕುತ್ತೀರಾ?

ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಪುಢಾರಿಗಳು ನಡೆಸುತ್ತಿರುವ ಕ್ಯಾಸಿನೋ ದಂಧೆ, ಅಕ್ರಮಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ?

ಭ್ರಷ್ಟಾಚಾರದ ಕೂಪಗಳಾಗಿರುವ ಸರ್ಕಾರಿ ಇಲಾಖೆ, ಕಚೇರಿಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ?

ಕೈಲಾಗದವರು ಮೈಪರಚಿ ಕೊಂಡಂತೆ ಇದೆ ಕಾಂಗ್ರೆಸ್ ಸರ್ಕಾರದ ದುರಾಡಳಿತ."

English summary :Lock on Kannada Bigg Boss house: Opposition alleges that the state government is tightening control over Sandalwood actors

ಶಿವಮೊಗ್ಗದಲ್ಲಿ 15 ವರ್ಷದ ಬಾಲಕನ ಹತ್ಯೆ; ನಗರದ ಕೆಲವು ಭಾಗಗಳಲ್ಲಿ ಉದ್ವಿಗ್ನತೆ
ಶಿವಮೊಗ್ಗದಲ್ಲಿ 15 ವರ್ಷದ ಬಾಲಕನ ಹತ್ಯೆ; ನಗರದ ಕೆಲವು ಭಾಗಗಳಲ್ಲಿ ಉದ್ವಿಗ್ನತೆ
ಬಿಎಸ್ಎಫ್ ಕಮಾಂಡೆಂಟ್ ಜಿಬು ಮ್ಯಾಥ್ಯೂ ಸಿಬಿಐನಿಂದ ಬಂಧನ: 96 ಕೋಟಿ ವಶ?
ಬಿಎಸ್ಎಫ್ ಕಮಾಂಡೆಂಟ್ ಜಿಬು ಮ್ಯಾಥ್ಯೂ ಸಿಬಿಐನಿಂದ ಬಂಧನ: 96 ಕೋಟಿ ವಶ?
ಅಂಗನವಾಡಿ ಶಿಕ್ಷಕರ ನೇಮಕಾತಿಗೆ ಉರ್ದು ಪ್ರಾವೀಣ್ಯತೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ
ಅಂಗನವಾಡಿ ಶಿಕ್ಷಕರ ನೇಮಕಾತಿಗೆ ಉರ್ದು ಪ್ರಾವೀಣ್ಯತೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ
ಇರಾನ್‌ನಿಂದ ತಕ್ಷಣ ಹೊರಹೋಗುವಂತೆ ಭಾರತೀಯರಿಗೆ ಸಲಹೆ ನೀಡಿದ ಭಾರತ ಸರ್ಕಾರ
ಇರಾನ್‌ನಿಂದ ತಕ್ಷಣ ಹೊರಹೋಗುವಂತೆ ಭಾರತೀಯರಿಗೆ ಸಲಹೆ ನೀಡಿದ ಭಾರತ ಸರ್ಕಾರ
ಪ್ರಧಾನಿ ಮೋದಿ ಭಾರತವನ್ನು ಎಲೆಕ್ಟ್ರಾನಿಕ್ಸ್ ಶಕ್ತಿ ಕೇಂದ್ರವಾಗಿ ಸ್ಥಾಪಿಸಿದ್ದಾರೆ : ಅಶ್ವಿನಿ ವೈಷ್ಣವ್
ಪ್ರಧಾನಿ ಮೋದಿ ಭಾರತವನ್ನು ಎಲೆಕ್ಟ್ರಾನಿಕ್ಸ್ ಶಕ್ತಿ ಕೇಂದ್ರವಾಗಿ ಸ್ಥಾಪಿಸಿದ್ದಾರೆ : ಅಶ್ವಿನಿ ವೈಷ್ಣವ್
ಭಾರತದ ಮೇಲಿನ ಅಮೆರಿಕದ ಸುಂಕವನ್ನು ಶೇ.10ಕ್ಕೆ ಇಳಿಸುವುದಾಗಿ ಸ್ಪಷ್ಟಪಡಿಸಿದ ಶ್ವೇತಭವನ
ಭಾರತದ ಮೇಲಿನ ಅಮೆರಿಕದ ಸುಂಕವನ್ನು ಶೇ.10ಕ್ಕೆ ಇಳಿಸುವುದಾಗಿ ಸ್ಪಷ್ಟಪಡಿಸಿದ ಶ್ವೇತಭವನ
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಟ್ರಂಪ್ ಅವರು ಸುಂಕಕ್ಕಾಗಿ ತುರ್ತು ಅಧಿಕಾರ ಬಳಸುವುದರ ವಿರುದ್ಧ ಯುಎಸ್ ಸುಪ್ರೀಂ ಕೋರ್ಟ್ ತೀರ್ಪು
ಜಾಗತಿಕ ಎಐ ಅಭಿವೃದ್ಧಿಯನ್ನು ರೂಪಿಸಲು ದೆಹಲಿ ಘೋಷಣೆಯನ್ನು ಅಳವಡಿಸಿಕೊಂಡ 75 ರಾಷ್ಟ್ರಗಳು
ಜಾಗತಿಕ ಎಐ ಅಭಿವೃದ್ಧಿಯನ್ನು ರೂಪಿಸಲು ದೆಹಲಿ ಘೋಷಣೆಯನ್ನು ಅಳವಡಿಸಿಕೊಂಡ 75 ರಾಷ್ಟ್ರಗಳು
ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಯಲ್ಲಿ ಭಾರತದ ಡಿಜಿಟಲ್ ವೃದ್ಧಿಯನ್ನು ಶ್ಲಾಘಿಸಿದ ಮ್ಯಾಕ್ರನ್
ಎಐ ಇಂಪ್ಯಾಕ್ಟ್ ಶೃಂಗಸಭೆ 2026 ಯಲ್ಲಿ ಭಾರತದ ಡಿಜಿಟಲ್ ವೃದ್ಧಿಯನ್ನು ಶ್ಲಾಘಿಸಿದ ಮ್ಯಾಕ್ರನ್
ನಿಯೋಗ ಮಟ್ಟದ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ನಿಯೋಗ ಮಟ್ಟದ ಮಾತುಕತೆ ನಡೆಸಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿವೈಡರ್ ಹಾರಿ ಐವರು ಸಾವು
ಕೆಎಸ್‌ಆರ್‌ಟಿಸಿ ಬಸ್‌ಗೆ ಕಾರು ಡಿವೈಡರ್ ಹಾರಿ ಐವರು ಸಾವು

ನ್ಯೂಸ್ MORE NEWS...