ಅಸಮರ್ಥ ಗೃಹ ಸಚಿವರ ಆಳ್ವಿಕೆಯಲ್ಲಿ ಕರ್ನಾಟಕವು ಬ್ಯಾಂಕ್ ದರೋಡೆಕೋರರಿಗೆ ನೆಚ್ಚಿನ ತಾಣವಾಗಿದೆ- ಶಾಸಕ ಯತ್ನಾಳ್ | JANATA NEWS
ಬೆಂಗಳೂರು : ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಹಾಡುಹಗಲೇ ನಡೆದ ಭಾರಿ ಪ್ರಮಾಣದ ಹಗಲು ದರೋಡೆಗೆ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಅಸಮರ್ಥ ಗೃಹ ಸಚಿವರ ಆಳ್ವಿಕೆಯಲ್ಲಿ ಕರ್ನಾಟಕವು, ಬ್ಯಾಂಕ್ ದರೋಡೆಕಾರರಿಗೆ ನೆಚ್ಚಿನ ತಾಣವಾಗಿದೆ, ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಶಾಸಕ ಯತ್ನಾಳ್ ಅವರು ಈ ಕುರಿತು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದು,
"📍ಅಕ್ಟೋಬರ್ 2024 : ದಾವಣಗೆರೆಯಲ್ಲಿ SBI ಬ್ಯಾಂಕ್ ದರೋಡೆ
📍ಜನವರಿ 2025 : ಮಂಗಳೂರಿನ ಕೋಟೆಕಾರ್ ಸಹಕಾರಿ ಸಂಘದಲ್ಲಿ ದರೋಡೆ
📍ಮೇ 2025 : ವಿಜಯಪುರದಲ್ಲಿಕೆನರಾ ಬ್ಯಾಂಕ್ ದರೋಡೆ
📍ಸೆಪ್ಟೆಂಬರ್ 2025 : ವಿಜಯಪುರದಲ್ಲಿ SBI ಬ್ಯಾಂಕ್ ದರೋಡೆ
📍ನಿನ್ನೆ, ಬೆಂಗಳೂರಿನ ಅಶೋಕ ಪಿಲ್ಲರ್ ಹತ್ತಿರ ಬ್ಯಾಂಕ್ ದರೋಡೆ "
"ಬ್ಯಾಂಕಿನಲ್ಲಿ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂದು ಸಾರ್ವಜನಿಕರು ಅಲ್ಲಿ ಹಣ ಇಡುತ್ತಾರೆ. ಅದನ್ನು ಸುರಕ್ಷಿತವಾಗಿ ಇಡಬೇಕಾದದ್ದು (safe custody) ಬ್ಯಾಂಕ್ ಹಾಗೂ ಸರ್ಕಾರದ ಕರ್ತವ್ಯ. "
"ಅಸಮರ್ಥ ಗೃಹ ಸಚಿವರ ಆಳ್ವಿಕೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆಕಾರರಿಗೆ ನೆಚ್ಚಿನ ತಾಣವಾಗಿದೆ. ಸಾರ್ವಜನಿಕ ಹಣವನ್ನು ದೋಚುವ ದರೋಡೆಕೋರರಿಗೆ ಯಾವುದೇ ಮುಲಾಜಿಲ್ಲದೆ shoot at sight ಆದೇಶವನ್ನು ನೀಡಿ. "
"ಮಕ್ಕಳ ವಿದ್ಯಾಭ್ಯಾಸ, ಮದುವೆ, ಇತರೆ ಖರ್ಚು ವೆಚ್ಚಗಳಿಗೆ ಬ್ಯಾಂಕ್ ಗಳಲ್ಲಿ ಹಣವಿಟ್ಟರೆ ಸುರಕ್ಷಿತವಾಗಿರುತ್ತದೆ ಎಂದು ನಂಬಿ ಇಟ್ಟಿರುತ್ತಾರೆ. ಆದರೆ, ಹಾಡ ಹಗಲೇ ಜಯನಗರದಂತ ಜನನಿಭಿಡ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಾರೆ ಎಂದರೆ ನಮ್ಮ ಗೃಹ ಇಲಾಖೆ ಎಷ್ಟರ ಮಟ್ಟಿಗೆ ನಿಷ್ಕ್ರಿಯವಾಗಿದೆ ಎಂಬುದು ಗೊತ್ತಾಗುತ್ತದೆ. ದರೋಡೆಕಾರರಿಗೆ, ಅತ್ಯಾಚಾರಿಗಳಿಗೆ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಸಮಾಜಘಾತುಕರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ವ್ಯವಹರಿಸಿ.", ಎಂದು ಯತ್ನಾಳ್ ಅವರು ಈ ದರೋಡೆ ಕುರಿತಾದ ಪತ್ರಿಕೆಯ ತುಣುಕನ್ನು ಹಂಚಿಕೊಂಡಿದ್ದಾರೆ.
📍ಅಕ್ಟೋಬರ್ 2024 : ದಾವಣಗೆರೆಯಲ್ಲಿ SBI ಬ್ಯಾಂಕ್ ದರೋಡೆ
— Basanagouda R Patil (Yatnal) (@BasanagoudaBJP) November 20, 2025
📍ಜನವರಿ 2025 : ಮಂಗಳೂರಿನ ಕೋಟೆಕಾರ್ ಸಹಕಾರಿ ಸಂಘದಲ್ಲಿ ದರೋಡೆ
📍ಮೇ 2025 : ವಿಜಯಪುರದಲ್ಲಿಕೆನರಾ ಬ್ಯಾಂಕ್ ದರೋಡೆ
📍ಸೆಪ್ಟೆಂಬರ್ 2025 : ವಿಜಯಪುರದಲ್ಲಿ SBI ಬ್ಯಾಂಕ್ ದರೋಡೆ
📍ನಿನ್ನೆ, ಬೆಂಗಳೂರಿನ ಅಶೋಕ ಪಿಲ್ಲರ್ ಹತ್ತಿರ ಬ್ಯಾಂಕ್ ದರೋಡೆ
ಬ್ಯಾಂಕಿನಲ್ಲಿ ನಮ್ಮ ಹಣ… pic.twitter.com/GwAINXKZ16