ಬೆಳಗ್ಗೆ ಮದುವೆ..ಸಂಜೆ ಪೊಲೀಸ್ ಸ್ಟೇಷನ್! | Filmz news
: ಬಿಗ್ಬಾಸ್ ಸೀಸನ್ 7 ರಲ್ಲಿ ಮಿಂಚಿದ್ದ ಚೈತ್ರಾ ಕೋಟೂರ್ ಮಂಡ್ಯ ಮೂಲದ ನಾಗಾರ್ಜುನ ಎಂಬುವವರನ್ನ ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇಗುಲದಲ್ಲಿ ಮದುವೆಯಾಗಿದ್ದರು. ಆದರೆ ಈ ಪ್ರಕರಣ ಇದೀಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ.
ಈ ಮದುವೆ ನನಗೆ ಇಷ್ಟವಿಲ್ಲದೇ ನಡೆದಿದೆ ಎಂದು ನಾಗಾರ್ಜುನ್ ಕುಟುಂಬ ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ಮದುವೆ ನಾಗಾರ್ಜುನ್ ಕುಟುಂಬಸ್ಥರಿಗೆ ಇಷ್ಟವಿಲ್ಲವಾಗಿತ್ತಂತೆ. ಹೀಗಾಗಿ, ಕೋಲಾರದ ಕುರುಬರಪೇಟೆಯ ಚೈತ್ರಾ ಮನೆಗೆ ಬಂದ ಮೇಲೆ ನಾಗಾರ್ಜುನ್ ಈ ಬಗ್ಗೆ ತಗಾದೆ ತಗೆದಿದ್ದಾರೆ.
ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ನಾಗಾರ್ಜುನ್ರನ್ನ ಕೂಡಿ ಹಾಕಿ ದೇಗುಲದಲ್ಲಿ ಮದುವೆಯಾಗಿದ್ದಾರೆ. ಸಂಘಟನೆಗಳ ಬೆದರಿಕೆಯಿಂದಾಗಿ ಚೈತ್ರಾ ಕೂಟೂರ್ಗೆ ನಾಗಾರ್ಜುನ್ ತಾಳಿ ಕಟ್ಟಿರುವುದಾಗಿ ಆರೋಪಿಸಿದ್ದಾರೆ ಎನ್ನಲಾಗಿದೆ.
ದೂರು ದಾಖಲಾದ ಬಳಿಕ ಚೈತ್ರಾ ಕೊಟ್ಟೂರು ಹಾಗೂ ನಾಗಾರ್ಜುನ್ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಚೈತ್ರಾ ಜೊತೆ ಮದುವೆ ಇಷ್ಟವಿಲ್ಲ ಎಂದು ನಾಗಾರ್ಜುನ್ ಪಟ್ಟು ಹಿಡಿದಿದ್ದರು. ಆದರೆ ಚೈತ್ರಾ ಕೊಟ್ಟೂರು ಮಾತ್ರ ನನಗೆ ನಾಗಾರ್ಜುನ್ ಇಷ್ಟ, ಅವನ ಜೊತೆಯೇ ಹೋಗುತ್ತೇನೆ ಎಂದು ಬಿಗಿಪಟ್ಟು ಹಿಡಿದಿದ್ದರು ಎಂದು ತಿಳಿದು ಬಂದಿದೆ.
ಬುಧವಾರದೊಳಗೆ ನಿರ್ಧಾರವನ್ನ ತಿಳಿಸಬೇಕೆಂದು ಪೊಲೀಸರು ನವ ದಂಪತಿಗೆ ಸೂಚಿಸಿದ್ದಾರೆ. ತಡರಾತ್ರಿ ಚೈತ್ರಾ ಅವರನ್ನ ಕೋಲಾರದಲ್ಲಿಯೇ ಬಿಟ್ಟು ನಾಗಾರ್ಜುನ್ ತಮ್ಮ ಪೋಷಕರ ಜೊತೆ ಮಂಡ್ಯಕ್ಕೆ ತೆರಳಿದ್ದಾರೆ. ಸದ್ಯ ಚೈತ್ರಾ ಕೋಲಾರದಲ್ಲಿರುವ ತಮ್ಮ ಮನೆಗೆ ವಾಪಸ್ ಆಗಿದ್ದಾರೆ ಎನ್ನಲಾಗಿದೆ.