ನಾನು ಕೋಮಾದಲ್ಲಿದ್ರೆ ಹೀಗೆ ಮಾತಾಡ್ತಿದ್ನಾ? ದರ್ಶನ್ ಸರ್ ಹೊಡೆದಿಲ್ಲ, ಬೈದಿದ್ದಷ್ಟೇ: ಸಂದೇಶ್ | Filmz news
: ನಟ ದರ್ಶನ್ ಮತ್ತು ಅವರ 20 ಮಂದಿ ಸ್ನೇಹಿತರು ಲಾಕ್ಡೌನ್ಗೂ ಮೊದಲು ತಮ್ಮ ಹೋಟೆಲ್ಗೆ ಬಂದಿದ್ದಾಗ, ಸಪ್ಲೈ ವೇಳೆ ಸಮಸ್ಯೆಯಾಗಿ ಸಣ್ಣ ಗಲಾಟೆಯಾಗಿದ್ದು ನಿಜ. ದರ್ಶನ್ ಅವರು ನಮ್ಮ ಸಿಬ್ಬಂದಿಗೆ ಬೈದಿದ್ದು, ಬಿಟ್ಟರೆ ಹಲ್ಲೆ ಮಾಡಿಲ್ಲ ಎಂದು ಸಂದೇಶ್ ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ಸ್ಪಷ್ಟನೆ ನೀಡಿದ್ದಾರೆ.
ದರ್ಶನ್ ಅವರಿಗೂ ನಮಗೂ 30 ವರ್ಷಗಳ ಸ್ನೇಹವಿದೆ, ಅವರು ನನ್ನ ಮೇಲೆ ಹಲ್ಲೆ ಮಾಡಿಲ್ಲ.. ನನ್ನ ಹೆಸರು ಪಾಪು ಅಂತ ಗೋಪಾಲ್ ರಾಜ್ ಅಂತ ಮನೆಯವರೆಲ್ಲ ಕರೀತಾರೆ. ನನ್ನ ಮೇಲೆ ಹಲ್ಲೆಯಾಗಿರೋದು ಕೋಮಾ ಸೇರಿದ್ದಾನೆ ಎಂದು ಇಂದ್ರಜಿತ್ ಹೇಳಿರುವುದೆಲ್ಲ ಸುಳ್ಳು. ಅವರು ಬಂದಾಗ ಫೋನ್ ಮಾಡಿ ನನ್ನನ್ನ ಫಾರ್ಮ್ಹೌಸ್ಗೆ ಕರೆಸಿಕೊಳ್ತಾರೆ ಎಂದಿದ್ದಾರೆ.
ದರ್ಶನ್ ಅವರು ಫಾರ್ಮ್ ಹೌಸ್ಗೆ ಬಂದಾಗಲೆಲ್ಲ ನಾನು ಹೋಗ್ತಿರ್ತೇನೆ.. ನಮ್ಮ ಸ್ನೇಹದಲ್ಲಿ ಯಾವುದೇ ಒಡಕಿಲ್ಲ. ದರ್ಶನ್ ಅವರ ಸ್ನೇಹಿತರೂ ಸಹ ನನ್ನೊಂದಿಗೆ ಚೆನ್ನಾಗೇ ಇದ್ದಾರೆ. ಇಂದ್ರಜಿತ್ ಲಂಕೇಶ್ ಅವರು ನನಗೆ ಪರಿಚಯವೇ ಇಲ್ಲ. ಏಳೆಂಟು ದಿನಗಳ ಹಿಂದೆ ದರ್ಶನ್ ಅವರನ್ನ ಭೇಟಿಯಾಗಿದ್ದೆ ಎಂದಿದ್ದಾರೆ.
ಹೋಟೆಲ್ ನಲ್ಲಿ ರಾತ್ರಿ ವೇಳೆ ಗ್ರಾಹಕರು ಈ ರೀತಿ ಸ್ವಲ್ಪ ಜಾಸ್ತಿ ಕುಡಿದುಬಿಟ್ಟು ಗಲಾಟೆ ಮಾಡುವುದು ಸಾಮಾನ್ಯ, ದರ್ಶನ್ ಕುಡಿದಾಗ ಈ ರೀತಿ ಕೆಲವೊಂದು ಸಲ ಆಡುತ್ತಾರೆ. ಹಾಗೆಯೇ ಇದು ಆಗಿತ್ತು. ನಾವು ಶೂಟಿಂಗ್ನಲ್ಲೂ ಜಗಳ ಆಡುತ್ತೇವೆ. ನಾನು ತಪ್ಪು ಮಾಡಿದಾಗ ಅವನು ಹೇಳುತ್ತಾನೆ. ಫ್ರೆಂಡ್ಶಿಪ್ನಲ್ಲಿ ಇದೆಲ್ಲ ಸಹಜ. ಆದರೆ, ತೋಟದಲ್ಲಿ ನಡೆದಿರುವುದು ಗೊತ್ತಿಲ್ಲ ಎಂದರು.