ಮೌನಿ ಅಮಾವಾಸ್ಯೆ : ಇಂದಿನಿಂದ ಈ ರಾಶಿಯವರು ಮುಟ್ಟಿದೆಲ್ಲ ಚಿನ್ನ! ಯಾವ ರಾಶಿಯವರಿಗೆನು ಫಲ? | Janata news
ಬೆಂಗಳೂರು : ಇಂದು ಅಮಾವಾಸ್ಯೆಯ ದಿನ ಮಧ್ಯಾಹ್ನ 12.05ಕ್ಕೆ ಧನಸ್ಸು ರಾಶಿಯಿಂದ ಮಕರ ರಾಶಿಗೆ ಚಲಿಸಲಿದ್ದಾನೆ. ಶನಿ ಪಥ ಬದಲಾವಣೆ ಮನುಷ್ಯನ ಹನ್ನೆರಡು ರಾಶಿ ನಕ್ಷತ್ರದ ಮೇಲೆ ಪರಿಣಾಮ ಬೀರಲಿದ್ದಾನೆ.
ಸಮಸ್ತ ಗ್ರಹಮಂಡಲದಲ್ಲಿ ಶನಿಯ ಗತಿ ಅತ್ಯಂತ ಮಂದವಾಗಿರುವುದು ಸರ್ವವಿದಿತ. ಪ್ರತಿ ರಾಶಿಯಲ್ಲಿ ಶನಿಯ ವಾಸ್ತವ್ಯ ಎರಡೂವರೆ ವರ್ಷಗಳಷ್ಟಾಗಿರುತ್ತದೆ. ಪೂರ್ಣ ರಾಶಿಚಕ್ರದ ಒಂದು ಪರಿಕ್ರಮೆಗೆ ತೆಗೆದುಕೊಳ್ಳುವ ಕಾಲಾವಕಾಶ ಮೂವತ್ತು ವರ್ಷಗಳು. ಆದ್ದರಿಂದ ಯಾವುದೇ ವ್ಯಕ್ತಿಯ ಪೂರ್ಣ ಜೀವನಾವಧಿಯಲ್ಲಿ ಈ ಯೋಗ ಬರಲೇ ಬೇಕು.
ಶನಿ ರಾಶಿಪ್ರವೇಶದ ಕ್ಷಣ ದ್ವಾದಶಸ್ಥರಾಶಿಯ ಎಲ್ಲರಿಗೂ ಒಮ್ಮೆಯೆ ಸಾಡೇಸಾತಿ ಶುರುವಾಗುತ್ತದೆ ಎಂದು ಹೇಳಲಾಗದು. ಜನ್ಮಚಂದ್ರನ ಅಂಶಗಳಿಗೆ ದ್ವಾದಶಸ್ಥಸ್ಥಾನದಲ್ಲಿ ಶನಿಯು ಮಂದಾಗ ಈ ಯೋಗ ಎರ್ಪಡುತ್ತದೆ ಎಂದು ಹೇಳಲಾಗುತ್ತದೆ.
ಶನಿಯು ಇಂದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶವಾಗುತ್ತಿದ್ದು, ಈ ರಾಶಿಗಳಿಗೆ ಶನಿ ಮಹಾತ್ಮನ ಪ್ರಭಾವ ಬಹಳ ಅನುಕೂಲಕರ ಆಗಿದೆ ಈ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ....
ವೃಶ್ಚಿಕ ರಾಶಿ -
ಇವರಿಗೆ ಇಷ್ಟು ಕಾಲ ಶನಿ ಸಾಡೆ ಸಾತ್ ನಡೆಯುತ್ತಾ ಇತ್ತು ಈಗ ತಾನೇ ಅವರಿಗೆ ಇದರಿಂದ ಮುಕ್ತಿ ಇದೆ. ಆದರೂ ಕೂಡ ಶನಿ ಮಹಾತ್ಮ ಇವರಿಗೆ ಬಹಳ ಅನುಕೂಲಕರವಾದ ವಿಶಿಷ್ಟವಾದ ಶಕ್ತಿ ಕೊಟ್ಟು ಇವರ ಜೀವನ ಬಂಗಾರ ಆಗಿಸುವ ಶಕ್ತಿ ಕೊಟ್ಟು ಅವರ ರಾಶಿಗೆ ಬಹಳ ಅನುಕೂಲ ಮಾಡಿದ್ದಾರೆ ಇದರಿಂದ ಇವರ ಆರೋಗ್ಯ ಸ್ಥಿತಿ ಬಹಳ ಸುಧಾರಿಸಲಿದೆ.
ಮೇಷ ರಾಶಿ -
ಈ ರಾಶಿಯವರಿಗೆ ಇಷ್ಟು ದಿನ ಅವರು ಬಹಳ ಕಷ್ಟಗಳನ್ನು ಅನುಭವಿಸಿದ್ದಾರೆ ಇನ್ನೂ ಮುಂದೆ ಶನಿ ಮಹಾತ್ಮನ ಪ್ರಭಾವ ಬಹಳ ಅನುಕೂಲಕರ ಆಗಿರುವುದರ ಕಾರಣ ಇವರಿಗೆ ವಿದೇಶ ಪ್ರಯಾಣದ ಯೋಗ ಇದೆ ಹಾಗೂ ಸಂತಾನ ಬಯಸುವವರಿಗೆ ಸಂತಾನ ಯೋಗ ಇದೆ. ಯಾರಾದರೂ ಕೆಲಸದಲ್ಲಿ ಬಡ್ತಿ ಅಥವಾ ಪ್ರಮೋಷನ್ ಬಯಸುವವರು ಅವರಿಗೆ 2020 ರ ಮೇಲ್ಪಟ್ಟು ಬಹಳ ಒಳ್ಳೆಯ ಫಲಿತಾಂಶ ಕಾಣುವರು ಹಾಗೂ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆದು ಅವರಿಗೆ ವೃತ್ತಿಯಲ್ಲಿ ಬಡ್ತಿ ಕೂಡ ಹೊಂದುತ್ತಾರೆ. ಹಣಕಾಸಿನ ಪರಿಸ್ಥಿತಿ ಬಹಳ ಮಟ್ಟಿಗೆ ಸುಧಾರಿಸುತ್ತದೆ. ಮದುವೆಯ ಮಾತುಕತೆಯನ್ನು ಮಾಡಲು ಇದು ಬಹಳ ಒಳ್ಳೆಯ ಸಮಯ ಮತ್ತು ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಕೂಡ ಇದು ಬಹಳ ಒಳ್ಳೆಯ ಸಮಯವಾಗಿದೆ ಮತ್ತು ಹಿಂದಿನ ಚಿಂತೆಗಳಿಗೆ ಪರಿಹಾರ ಸಿಕ್ಕಿ ನೆಮ್ಮದಿ ಸಿಗಲಿದೆ.
ಸಿಂಹ ರಾಶಿ-
ಈ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ವ್ಯಾಪಾರ, ಕೈ ಹಾಕಿರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರೋಗ್ಯ ಸಮಸ್ಯೆಗಳು ನಿವಾರಣೆ ಆಗಲಿದ್ದು, ವಿದೇಶ ಪ್ರಯಾಣದ ಯೋಗ ಒದಗಿ ಬರುವುದು
ವೃಷಭ ರಾಶಿ -
ಇವರು ಮುಟ್ಟಿದ್ದೆಲ್ಲಾ ಚಿನ್ನವಾಗಿ ಪರಿಣಮಿಸುತ್ತದೆ. ಇವರು ವ್ಯಾಪಾರ ಕ್ಷೇತ್ರದಲ್ಲಿ ಆಗಲಿ ಉದ್ಯೋಗದಲ್ಲಿ ಆಗಲಿ ಮತ್ತು ಯಾವುದಾದರೂ ಹೊಸ ರೀತಿ ಕಲಾತ್ಮಕವಾಗಿ ಯೋಚಿಸಿ ಈ ನಿಟ್ಟಿನಲ್ಲಿ ಯಾವುದಾದರೂ ಕೆಲಸ ಬಯಸುವವರಿಗೆ ಬಹಳ ಶ್ರೇಯಸ್ಸು ಬಂದು ಒದಗಲಿದೆ. ಸ್ತ್ರೀಯರಿಗೆ ಬಹಳ ಅನುಕೂಲಕರ ವರ್ಷ ಆಗಿದೆ.
ಧನಸ್ಸು ರಾಶಿ -
ವ್ಯಾಪಾರ ಮತ್ತು ವ್ಯವಹಾರವನ್ನು ಮಾಡುವವರಿಗೆ ಮಾಡುವ ಕೆಲಸದಲ್ಲಿ ಉತ್ತಮ ಲಾಭ ಸಿಗಲಿದೆ. ನಿರುದ್ಯೋಗಿಗಳಿಗೆ ಮುಂದಿನ 24 ಗಂಟೆಯ ಒಳಗಾಗಿ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದ್ದು,ಸ್ವಲ್ಪ ಶ್ರಮಪಟ್ಟು ಪ್ರಯತ್ನ ಮಾಡಬೇಕು.
ಮಕರ ರಾಶಿ -
ಈ ರಾಶಿಯವರಿಗೆ ಹಲವು ಮೂಲಗಳಿಂದ ಹಣದ ಹರಿವು ಆಗಲಿದ್ದು ಈ ಹಣವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯವೂ ಸುಧಾರಿಸಲಿದ್ದು ಅದು ಅವರಿಗೆ ಖುಷಿ ತಂದುಕೊಡಲಿದೆ. ಸಂಜೆ ಸಮಯದಲ್ಲಿ ಶಿವನಿಗೆ ದೀಪವನ್ನು ಹಚ್ಚಿ ಭಕ್ತಿಯಿಂದ ಬೇಡಿಕೊಂಡರೆ ನೀವು ಅಂದುಕೊಂಡಿದ್ದು ಸರಾಗವಾಗಿ ನಡೆಯುತ್ತದೆ. ಗ್ರಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಿರುವುದರಿಂದ ನಿಮ್ಮ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿಗಳು ದೂರವಾಗಲಿದೆ. ದೇವರ ಕೃಪೆ ನಿಮ್ಮ ಮೇಲೆ ಇರುವುದರಿಂದ ಮೂಕ ಪ್ರಾಣಿಗಳಿಗೆ ತಿಂಡಿ ತಿನಿಸುಗಳನ್ನು ಕೊಟ್ಟರೆ ನಿಮಗೆ ಒಳ್ಳೆಯ ಪುಣ್ಯ ಸಿಗಲಿದೆ.