ಪ್ರೇಮಕವಿ ಕೆ.ಕಲ್ಯಾಣ್ ಪತ್ನಿಯ ತಲೆಕೆಡಿಸಿ, ಆಸ್ತಿ ಲಪಟಾಯಿಸಿದ್ದ ಆರೋಪಿ ಗಂಗಾ ಕುಲಕರ್ಣಿ ವಿಷ ಸೇವಿಸಿ ಆತ್ಮಹತ್ಯೆ | Janata news
ಕೊಪ್ಪಳ: : ಖ್ಯಾತ ಚಿತ್ರ ಸಾಹಿತಿ ಕೆ ಕಲ್ಯಾಣ ಅವರ ದಾಂಪತ್ಯದ ಬಿರುಕಿಗೆ ಕಾರಣವಾಗಿದ್ದ ಹಾಗೂ ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಗಂಗಾ ಕುಲಕರ್ಣಿ ಇಂದು ಕುಷ್ಟಗಿ ಕೋರ್ಟ್ ಗೆ ಆಗಮಿಸುವ ವೇಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಷ್ಟಗಿ ಪಟ್ಟಣದ ನ್ಯಾಯಾಲಯಕ್ಕೆ ಗಂಗಾ ಕುಲಕರ್ಣಿ ಇಂದು ಹಾಜರ್ ಆಗಿದ್ದಳು. ವಿಷ ಸೇವಿಸಿ ನ್ಯಾಯಾಲಯಕ್ಕೆ ಬಂದಿದ್ದ ಗಂಗಾ ಕುಲಕರ್ಣಿ, ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಕೆ.ಕಲ್ಯಾಣ್ ಕುಟುಂಬಕ್ಕೆ ವಂಚನೆ ಮಾಡಿರುವ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ ಕೋರ್ಟ್ನಲ್ಲಿ ಕುಸಿದು ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಗಾ ಕುಲಕರ್ಣಿ ಅವರು ವಿಷ ಸೇವಿಸಿ ನ್ಯಾಯಾಲಯಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಗಂಗಾ ಕುಲಕರ್ಣಿ ಸಾವನ್ನಪ್ಪಿದ್ದಾರೆ ಎಂದು ತಿಳುದಬಂದಿದೆ.
ಕೆ.ಕಲ್ಯಾಣ್ ಅವರ ಪತ್ನಿಯನ್ನು ತಲೆ ಕೆಡಿಸಿದ್ದಂತ ಗಂಗಾ ಕುಲಕರ್ಣಿ, ಅವರ ಪತ್ನಿಯಿಂದ ಆಸ್ತಿ ಲಪಟಾಯಿಸಿದ್ದರು. ಅಲ್ಲದೇ ಯುವಕನೊಬ್ಬನಿಗೂ 3 ಲಕ್ಷ ರೂಪಾಯಿ ವಂಚಿಸಿದ್ದರು. ಕುಷ್ಟಗಿಯಲ್ಲಿ ತೋಟಗಾರಿಕೆ ಇಲಾಖೆಯಲ್ಲಿ ಸರ್ಕಾರಿ ನೌಕರಿ ಕೊಡಿಸುವ ಸಂಬಂಧ ವ್ಯಕ್ತಿಯೊಬ್ಬರಿಂದ ಹಣ ಪಡೆದು ವಂಚನೆ ಮಾಡಿದ್ದರು. ವಂಚನೆಗೆ ಒಳಗಾದವರು ಗಂಗಾ ಕುಲಕರ್ಣಿ ಅವರ ವಿರುದ್ದ ಕೇಸ್ ದಾಖಲು ಮಾಡಿದ್ದರು.