ಸಿಬಿಐ ವಶದಲ್ಲಿ ವಿನಯ ಕುಲಕರ್ಣಿ: ರಾಜಕೀಯ ಸೇಡು ತೀರಿಸಿಕೊಳ್ಳಲು ಷಡ್ಯಂತ್ರ! | Janata news
ಬಾಗಲಕೋಟೆ: : ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಬಿಜೆಪಿಯ ರಾಜಕೀಯ ಷಡ್ಯಂತ್ರದ ಕ್ರಮ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದರು.
ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನ ಸಿಬಿಐ ಬಂಧಿಸಿದ್ದು ಬಿಜೆಪಿಯ ರಾಜಕೀಯ ಪ್ರೇರಿತವಾಗಿದೆ. ತನಿಖೆ ಮುಗಿದು, ಚಾರ್ಜ್ಶೀಟ್ ಹಾಕಿದ ಮೇಲೆ ಮತ್ತೆ ರಿ ಓಪನ್ ಮಾಡಿ, ಸಿಬಿಐಗೆ ಕೊಟ್ಟಿದ್ದು ರಾಜಕೀಯ ಪ್ರೇರಿತವಲ್ಲವಾ?, ರಾಜಕೀಯ ಸೇಡು ತೀರಿಸಿಕೊಳ್ಳಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಯತ್ನ ಮಾಡುತ್ತಿದ್ದಾರೆ.
ವಿರೋಧ ಪಕ್ಷದವರನ್ನು ಬಾಯಿಮುಚ್ಚಿಸಿದ್ರೆ, ತಮಗೆ ಇಷ್ಟ ಬಂದ ಹಾಗೆ ಆಟ ಆಗಬಹುದು ಎಂಬುದು ಅವರ ಲೆಕ್ಕಾಚಾರವಾಗಿದೆ ಎಂದು ಆರೋಪಿಸಿದ್ದಾರೆ.
ರಾಜರಾಜೇಶ್ವರಿ, ಶಿರಾ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಇಂಟೆಲಿಜೆನ್ಸ್ ಮಾಹಿತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾವ ಇಂಟೆಲಿಜೆನ್ಸ್ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದು ಯಾವ ಆಧಾರದ ಮೇಲೆ ಹೇಳ್ತಿದ್ದಾರೆ ನನಗೆ ಗೊತ್ತಿಲ್ಲ. ನಾನು ಕಣ್ಣಾರೆ ನೋಡಿರೋದು ಕಾಂಗ್ರೆಸ್ ಪರ ಜನರ ಒಲವು ಹೆಚ್ಚಿತ್ತು. ಪ್ರಧಾನಿ ಮೋದಿ ಅಲೆ ಎಲ್ಲಿದೆ, ಅಲೆನೂ ಇಲ್ಲ ಪಲೆನೂ ಇಲ್ಲ ಎಂದಿದ್ದಾರೆ.