ಪ್ರಿಯತಮೆ ಪುತ್ರನಿಗೆ ಬರೆಯಿಟ್ಟ ಪ್ರಿಯತಮ, ಬಂಧನ ಭೀತಿಯಿಂದ ಆತ್ಮಹತ್ಯೆಗೆ ಯತ್ನ! | Janata news
ಚಿತ್ರದುರ್ಗ : ವ್ಯಕ್ತಿ ತನ್ನ ಪ್ರಿಯತಮೆ ಹಾಗೂ ಆಕೆಯ ಮಗನನ್ನು ಬರೆಯಿಟ್ಟು ಹಿಂಸೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗಟ್ಟಿ ಹೊಸಹಳ್ಳಿ ಗ್ರಾಮದ ಶಿವಮೂರ್ತಿ ಆತ್ಮಹತ್ಯೆ ಯತ್ನಿಸಿದವನು ಎಂದು ತಿಳಿದು ಬಂದಿದೆ. ಆರೋಪಿ ಶಿವಮೂರ್ತಿ (30) ಎಂಬಾತ ತನ್ನ ಪ್ರಿಯತಮೆಯ ಮಗನಿಗೆ ಬರೆ ಹಾಕಿದ್ದ, ಬಂಧನ ಭೀತಿಯಿಂದ ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ತಾಳ್ಯ ಗ್ರಾಮದ ಶೃತಿ(24), ಪುತ್ರ ದಿನೇಶ (6)ನನ್ನು ಆಂಧ್ರಕ್ಕೆ ಕರೆದುಕೊಂಡು ಹೋಗಿ ಬರೆಯಿಟ್ಟು ಹಿಂಸೆ ಮಾಡಿದ್ದಾನೆ. ಶೃತಿ ಮನೆ ಮತ್ತು ಗಂಡನನ್ನೇ ಬಿಟ್ಟು ಬಂದು ಆರು ವರ್ಷದ ಮಗುವಿನೊಂದಿಗೆ ಬಂದು ಶೃತಿ ಕೆಲ ದಿನಗಳಿಂದ ಗಟ್ಟಿ ಹೊಸಹಳ್ಳಿಯಲ್ಲಿ ಪ್ರಿಯಕರ ಶಿವಮೂರ್ತಿ ಜೊತೆ ವಾಸವಾಗಿದ್ದಳು ಎನ್ನಲಾಗಿದೆ.
ಏನೂ ಅರಿಯದ ಮುಗ್ಧ ಮಗುವಿಗೆ ನೀನು ನನ್ನನ್ನು ಅಪ್ಪ ಎಂದು ಕರೆಯಬೇಕು ಎಂದು ಹೇಳಿ ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿ ಶಿವಮೂರ್ತಿ ಚಿತ್ರಹಿಂಸೆ ನೀಡಿದ್ದ. ಮಗುವಿನ ಕಾಲು ಹಾಗೂ ಕೈ ಮೇಲೆ ಬೆಂಕಿಯಿಂದ ಬರೆ ಹಾಕಿದ್ದನು. ಇದನ್ನು ಬಿಡಿಸಿಕೊಳ್ಳಲು ಅಡ್ಡ ಬಂದ ಪ್ರಿಯತಮೆ ಶೃತಿಗೂ ಸುಟ್ಟ ಗಾಯಗಳಾಗಿವೆ.
ಬಂಧನ ಭೀತಿಯಿಂದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.