ಗರ್ಭ ನಿರೋಧಕ ಮಾತ್ರೆ ಸೇವಿಸಿದ ಗರ್ಭಿಣಿ ಸಾವು! | Janata news
ಚಿಕ್ಕಬಳ್ಳಾಪುರ : ಗರ್ಭಿಣಿಯೊಬ್ಬರು ಗರ್ಭ ನಿರೋಧಕ ಮಾತ್ರೆ ಸೇವಿಸಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪು ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪೂಲವಾರಪಲ್ಲಿ ಎಂಬಲ್ಲಿ ನಡೆದಿದೆ.
ಶ್ರೀಕನ್ಯಾ(27) ಮೃತ ದುರ್ದೈವಿ. ಶ್ರೀಕನ್ಯಾಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದರು. ಹಾಗಾಗಿ, ಮತ್ತೊಂದು ಹೆಣ್ಣು ಮಗು ಬೇಡವೆಂದು ಗರ್ಭ ನಿರೋಧಕ ಮಾತ್ರೆ ಸೇವನೆ ಮಾಡಿದ್ದಾರೆ ಎನ್ನಲಾಗಿದೆ.
ತಾಲ್ಲೂಕಿನ ಪರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ತಪಲ್ಲಿ ಗ್ರಾಮದಲ್ಲಿ ಶ್ರೀಕನ್ಯಾ ಹಾಗೂ ಪತಿ ಸೋಮಶೇಖರ್ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮೂರನೇ ಮಗು ಗಂಡು ಬೇಕು ಎಂದು ಪತಿ ಸೋಮಶೇಖರ್ ಹಾಗೂ ಕುಟುಂಬದವರು ಶ್ರೀಕನ್ಯಾಗೆ ನ.16ರಂದು ಮನೆಯಲ್ಲಿಯೇ ಗರ್ಭಪಾತ ಮಾಡಿಸಿದ್ದಾರೆ.
ಮಾತ್ರೆ ಸೇವನೆ ಬಳಿಕ ಗರ್ಭಣಿಗೆ ತೀವ್ರ ರಕ್ತಸ್ರಾವವಾಗಿತ್ತು. ಹಾಗಾಗಿ, ಶ್ರೀಕನ್ಯಾರನ್ನು ಕೂಡಲೇ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಶ್ರೀಕನ್ಯಾ ಕೊನೆಯುಸಿರೆಳೆದಿದ್ದಾಳೆ.
ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಶ್ರೀಕನ್ಯಾಗೆ ತನ್ನ ಹೊಟ್ಟೆಯಲ್ಲಿ ಹೆಣ್ಣು ಮಗುನೇ ಇದೆ ಎಂದು ಹೇಗೆ ಗೊತ್ತಾಯಿತು ಎಂಬುದು ನಿಗೂಢವಾಗಿದೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.