ಕುಡಿಯೋಕೆ ಹಣ ನೀಡದ್ದಕ್ಕೆ ಒನಕೆಯಿಂದ ಹೊಡೆದು ಪತ್ನಿಯನ್ನೇ ಕೊಂದ ಪಾಪಿ ಪತಿ! | Janata news
ಚಿಕ್ಕಬಳ್ಳಾಪುರ : ಮದ್ಯ ಸೇವನೆಗೆ ಪತ್ನಿ ಹಣ ಕೊಡಲ್ಲ ಅಂದಿದ್ದಕ್ಕೆ ಆಕೆಯ ಪತಿ ಒನಕೆಯಿಂದ ಬರ್ಬರವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಭದ್ರಂಪಲ್ಲಿಯಲ್ಲಿ ನಡೆದಿದೆ.
ಬಾಗೇಪಲ್ಲಿಯ ಭದ್ರೇಪಲ್ಲಿ ಗ್ರಾಮದ ನಿವಾಸಿ ರತ್ನಮ್ಮ (36) ಗಂಡನಿಂದ ಸಾವಿಗೀಡಾದ ದುರ್ದೈವಿ.
ರತ್ನಮ್ಮನ ಪತಿ ಆದಿನಾರಾಯಣ ಈ ಕೃತ್ಯ ಎಸಗಿದ್ದಾನೆ. ಮದ್ಯ ಸೇವನೆಗೆ ರತ್ನಮ್ಮ ಹಣ ನೀಡಿಲ್ಲ ಎನ್ನುವ ಕೋಪಕ್ಕೆ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಕೃತ್ಯ ಎಸಗಿದ ಬಳಿಕ ಪಾಪಿ ಪತಿ ಆದಿನಾರಾಯಣ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.
English summary :Chikkaballapura