ಕಾರು ಕಳುವಾಗಿದೆ ಎಂದು ದೂರು ನೀಡಿದ್ದ ಮಾಲೀಕನೇ ಅರೆಸ್ಟ್! | Janata news
ತುಮಕೂರು : ಕಾರು ಕಳ್ಳತನವಾಗಿದೆ ಎಂದು ಸುಳ್ಳು ದೂರು ಕೊಟ್ಟ ಕಾರು ಮಾಲೀಕನೇ ಈಗ ಬಂಧನವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಆರೋಪಿಯನ್ನು ದೊಡ್ಡೇಗೌಡ ಎಂದು ಗುರುತಿಸಲಾಗಿದೆ. ಆಂಧ್ರದ ಮಡಕಶಿರಾ ಮೂಲದ ದೊಡ್ಡೇಗೌಡರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿಯಲ್ಲಿಯಲ್ಲಿ ವಾಸಿಸುತ್ತಿದ್ದಾರೆ.
ಮಧುಗಿರಿ ಪಾವಗಡ ರಸ್ತೆಯ ನೀಲಿಹಳ್ಳಿ ರಸ್ತೆ ಬಳಿ ಮೂರು ಜನ ದುಷ್ಕರ್ಮಿಗಳು ಬಂದು ನನ್ನ ಇನ್ನೊವಾ ಕಾರು ಪಂಚರ್ ಆಗಿದೆ ಎಂದು ಕಾರು ಅಡ್ಡಗಟ್ಟಿ ನಿಲ್ಲಿಸಿದ್ದರು. ನಾನು ಕಾರು ನಿಲ್ಲಿಸಿದಾಗ ನನ್ನ ಮೇಲೆ ತೀವ್ರ ಸ್ವರೂಪದಲ್ಲಿ ಹಲ್ಲೆ ನಡೆಸಿ ಕಾರು ಅಪಹರಿಸಿದ್ದಾರೆ ಎಂದು ದೂರು ದಾಖಲಿಸಿದ್ದರು.
ದೂರುದಾರನ ಮೇಲೆ ಸಂಶಯಗೊಂಡ ಪೊಲೀಸರು ಈತನ ಚಲನವಲನ ಗಮನಿಸಿದ್ದಾರೆ. ಚಲನವಲನ ಗಮನಿಸಿದಾಗ ಪೊಲೀಸರಿಗೆ ಇವರ ಮೇಲೇ ದೌಟು ಶುರುವಾಗಿದೆ.
ನಂತರ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಅವರು ಸತ್ಯ ಒಪ್ಪಿಕೊಂಡಿದ್ದಾರೆ. ಕಾರನ್ನು ಸಾಲ ಮಾಡಿ ತೆಗೆದುಕೊಂಡಿದ್ದೇನೆ. ಗೋಲ್ಡ್ ಲೋನ್ ನೀಡುವ ಸಂಸ್ಥೆಯಿಂದ 12 ಲಕ್ಷಸಾಲ ಮಾಡಿಕೊಂಡಿದ್ದೇನೆ. ಕಂತು ಕಟ್ಟಲಾಗಲಿಲ್ಲ. ಆದ್ದರಿಂದ ಕಾರು ಕಳುವಾಗಿದೆ ಎಂದು ದೂರು ಕೊಟ್ಟರೆ ಇನ್ಶುರೆನ್ಸ್ ಸಿಗುತ್ತದೆ ಎಂದು ಈ ರೀತಿ ದೂರು ಕೊಟ್ಟೆ. ಸಂಬಂಧಿ ಮನೆಯಲ್ಲಿ ಇಟ್ಟುಬಂದಿದ್ದೆ ಕಾರು ಎಂದಿದ್ದಾರೆ.