ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು! | Janata news
ಕೊಡಗು : ಹೊಳೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹೈಸೊಡ್ಲೂರಿನಲ್ಲಿ ನಡೆದಿದೆ. ನೀರುಪಾಲಾದ ಯುವಕರನ್ನು ಬೋಪಣ್ಣ(18) ಹಾಗೂ ಮನೇಶ್(18) ಎಂದು ಗುರುತಿಸಲಾಗಿದೆ.
ಅಬ್ದುಲ್ಲ, ರಿಯಾಜ್, ಹೆಮಂತ್, ಬೋಪಣ್ಣ, ಮನೇಷ್, ಚಂಗಪ್ಪ ಹಾಗೂ ಅಂಸದ್ ಸೇರಿದಂತೆ ಎಂಟು ಯುವಕರು ಪೊನ್ನಂಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಫುಟ್ಬಾಲ್ ಆಡುತ್ತಿದ್ದರು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮೈದಾನದಿಂದ ಹೊರಟ ಯುವಕರ ತಂಡ ಜೋಡುಬೀಟಿ ಸಮೀಪದ ಬಾಳಜಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಹರಿಯುತ್ತಿರುವ ಕೀರೆ ಹೂಳೆಗೆ ಈಜಲು ತೆರಳಿದರು.
ಹೇಮಂತ್, ಬೋಪಣ್ಣ, ಮನೇಷ್ ಈ ಮೂವರು ನದಿಯಲ್ಲಿ ಈಜುತ್ತಿದ್ದರು. ಆಳ ಪರೀಕ್ಷಿಸಲೆಂದು ನೀರಿನಲ್ಲಿ ನಡೆಯುವಾಗ ಕಲ್ಲುಬಂಡೆಯೊಂದರ ಮೇಲೆ ಕಾಲಿಟ್ಟು ಕಾಲುಜಾರಿ ಬೋಪಣ್ಣ ನೀರಿನ ಆಳಕ್ಕೆ ಬಿದ್ದಿದ್ದಾನೆ.
ಇವನನ್ನು ರಕ್ಷಿಸಲು ತೆರಳಿದ ಮನೇಷ್ ಕೂಡ ಮುಳುಗಿದ್ದಾನೆ. ಮತ್ತೊಬ್ಬ ಸ್ನೇಹಿತ ಹೇಮಂತ್ ಇಬ್ಬರನ್ನು ರಕ್ಷಿಸಲು ತೆರಳಿದಾಗ ನೀರಿನಲ್ಲಿ ಮೂವರೂ ಮುಳುಗಿದ್ದಾರೆ. ಇದನ್ನು ನೋಡಿ ಉಳಿದ ಸ್ನೇಹಿತರು ಸಹಾಯಕ್ಕಾಗಿ ಕೂಗಿದ್ದಾರೆ, ಸ್ಥಳೀಯರು ರಕ್ಷಿಸಲು ಮುಂದಾದಾಗ ಹೇಮಂತ್ನನ್ನು ಮಾತ್ರ ಉಳಿಸಲು ಸಾಧ್ಯವಾಗಿದೆ ಎನ್ನಲಾಗಿದೆ