ಡೀಸೆಲ್ ಬದಲಿಗೆ ನೀರು ಹಾಕಿದ ರಾಯಚೂರು ಪೆಟ್ರೋಲ್ ಬಂಕ್! | Janata news
ರಾಯಚೂರು : ರಾಯಚೂರಿನ ಮಸ್ಕಿಯ ಕನಕವೃತ್ತದಲ್ಲಿನ ಸೂಪರ್ ಫಿಲ್ಲಿಂಗ್ ಸ್ಟೇಷನ್ ವಿರುದ್ಧ ಈ ಆರೋಪ ಕೇಳಿಬಂದಿದೆ.
ಜಿಲ್ಲೆಯ ಮಸ್ಕಿ ಪಟ್ಟಣದ ಕನಕ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ನಲ್ಲಿ ಇಂತಹದೊಂದು ಅಚಾತುರ್ಯ ಘಟನೆ ನಡೆದಿದೆ ಎನ್ನಲಾಗಿದೆ.
ಚಾಲಕ 10,000 ರೂಪಾಯಿ ಕೊಟ್ಟು ತನ್ನ ಟ್ರಾಕ್ಟರ್ನ ಡೀಸೆಲ್ ಟ್ಯಾಂಕ್ ಫುಲ್ ಮಾಡಿಸಿದ್ದ. ಆದರೆ ಬಂಕ್ ಸಿಬ್ಬಂದಿ ಡೀಸೆಲ್ ಬದಲಿಗೆ ನೀರು ತುಂಬಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಚಾಲಕ ಪೆಟ್ರೋಲ್ ಬಂಕ್ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ಇದೇನು ಹೊಸದಲ್ಲ ಇದಕ್ಕಿಂತ ಮೊದಲು ಎರಡು ಕಾರುಗಳು, ಮೂರು ಟ್ರ್ಯಾಕ್ಟರ್ ಮತ್ತು ಮೂರು ಲಾರಿಗಳು ಕೆಟ್ಟು ನಿಂತು ಹೋಗಿವೆ. ನಂತರ ಪರಿಶೀಲನೆ ಮಾಡಿದಾಗ ಪೆಟ್ರೋಲ್ ಬಂಕ್ನಲ್ಲಿ ಹಾಕಿರುವುದು ಡೀಸೆಲ್ ಅಲ್ಲ, ಬದಲಿಗೆ ನೀರು ಎಂದು ತಿಳಿದುಬಂದಿದೆ ಎನ್ನಲಾಗಿದೆ. .
ಸದ್ಯ ಪೆಟ್ರೋಲ್ ಬಂಕ್ ಮುಂದೆ ಚಾಲಕರು ಜಮಾಯಿಸಿದ್ದಾರೆ. ಬಂಕ್ ಬಂದ್ ಮಾಡುವಂತೆ ಆಗ್ರಹಿಸಿ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ