ರಾತ್ರಿ ರಿಸೆಪ್ಷನ್ ಮಾಡಿಕೊಂಡು ಮದುವೆ ದಿನ ಕೈಕೊಟ್ಟ ವರ: ವಧುವಿಗೆ ಬಾಳು ಕೊಟ್ಟ ಕಂಡಕ್ಟರ್ | Janata news
ಚಿಕ್ಕಮಗಳೂರು : ರಾತ್ರಿ ಆರತಕ್ಷತೆಗೆ ಇದ್ದ ವರ ಬೆಳಗ್ಗೆ ಪ್ರೀತಿಸಿದ ಯುವತಿ ಬೆದರಿಕೆಗೆ ಹೆದರಿ ಮುಹೂರ್ತಕ್ಕೆ ನಾಪತ್ತೆಯಾಗಿ, ಮಧುಮಗಳಾಗಿ ನಿಂತಿದ್ದ ಯುವತಿಯನ್ನ ಬೆಂಗಳೂರಿನ ಬಿಎಂಟಿಸಿ ಬಸ್ ಕಂಡಕ್ಟರ್ ಕೈ ಹಿಡಿದ ಅಪರೂಪದ ಮದುವೆಗೆ ತರೀಕೆರೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಅಶೋಕ್ ಹಾಗೂ ನವೀನ್ ಎಂಬ ಅಣ್ಣತಮ್ಮಂದಿರಿಗೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೆಣ್ಣಿನೊಂದಿಗೆ ಮದುವೆ ನಿಶ್ಚಯವಾಗಿತ್ತು. ಎರಡು ಕಡೆಯವರು ಒಪ್ಪಿ ಕೂಡ ಮದುವೆ ನಿಶ್ಚಯ ಮಾಡಿದ್ದರು.
ಅದರಂತೆ ಶನಿವಾರ ರಾತ್ರಿ ತರೀಕೆರೆ ಪಟ್ಟಣದ ಶೃಂಗೇರಿ ಶಾರದ ಭವನದಲ್ಲಿ ಎರಡು ಜೋಡಿಗೂ ರಿಸೆಪ್ಷನ್ ಕೂಡ ನಡೆದಿತ್ತು. ಬೆಳ್ಳಿಗೆ ಮೂಹರ್ತಕ್ಕೆ ರೆಡಿಯಾಗುವಷ್ಟರಲ್ಲಿ ನವೀನ್ ಎಂಬ ವರ ನಾಪತ್ತೆಯಾಗಿದ್ದ.
ಆದರೆ ಈ ಮದುವೆಯ ವಿಷಯ ನವೀನ್ ಪ್ರೀತಿಸುತ್ತಿದ್ದ ಯುವತಿಗೆ ತಿಳಿದಿದೆ. ಆಕೆ ಛತ್ರಕ್ಕೇ ಬಂದು ನಾನು ಛತ್ರದಲ್ಲೇ ವಿಷ ಕುಡಿಯುತ್ತೇನೆ, ಮದುವೆ ನಿಲ್ಲಿಸುತ್ತೇನೆ ಎಂದು ಹೆದರಿಸಿದ್ದಾಳೆ. ಇದಕ್ಕೆ ಹೆದರಿದ ನವೀನ್ ಛತ್ರ ಬಿಟ್ಟು ಆಕೆಯ ಜತೆ ತೆರಳಿದ್ದಾನೆ. ಇಲ್ಲಿ ಮದುವೆ ನಿಂತಿದೆ. ವಧು ಮತ್ತು ಆಕೆಯ ಕುಟುಂಬದವರ ಕಂಗಾಲಾಗಿ ಹೋಗಿದ್ದಾರೆ.
ನವೀನ್ ಮದುವೆಯಾಗಬೇಕಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸರಪನಹಳ್ಳಿಯ ಯುವತಿ ಸಿಂಧುವನ್ನು ತಾವು ಮದುವೆಯಾಗುವುದಾಗಿ ಹೇಳಿದ ಬಿ.ಎಂ.ಟಿ.ಸಿ. ಕಂಡಕ್ಟರ್ ಚಂದ್ರು ಮದುಮಗಳ ಕೈಹಿಡಿದ್ದಾರೆ. ಇವರು ಬೆಂಗಳೂರಿನ ಬಿಎಂಟಿಸಿ ಬಸ್ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾನೆ.
ನಾಪತ್ತೆಯಾದ ಯುವಕನಿಗಾಗಿ ಪೋಷಕರು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ ಎನ್ನಲಾಗಿದೆ.