ಬ್ಯಾಟರಿ ಕಾರ್ಖಾನೆಯಲ್ಲಿ ಭಾರೀ ಬೆಂಕಿ ಅವಘಡ! | Janata news
ರಾಮನಗರ : ಜಿಲ್ಲೆಯ ಕನಕಪುರ ತಾಲೂಕು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಕ್ತಿ ಬ್ಯಾಟರೀಸ್ ಕಂಪನಿಯಲ್ಲಿ ಇಂದು ಸಂಜೆ ಭಾರಿ ಅಗ್ನಿ ದುರಂತ ಸಂಭವಿಸಿದೆ.
ರಾಮನಗರ ಜಿಲ್ಲೆಯ ಹಾರೋಹಳ್ಳಿ ಕೈಗಾರಿಕಾ ವಲಯದಲ್ಲಿರುವ ಶಕ್ತಿ ಬ್ಯಾಟರೀಸ್ ಕಾರ್ಖಾನೆ ಬೆಂಕಿಗಾಹುತಿಯಾಗಿದೆ. ತಯಾರಿಕಾ ಘಟಕದ ಥರ್ಮಕೋಲಿನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಕಾರ್ಖಾನೆಗೆ ಹಬ್ಬಿದೆ.
ಕಾರ್ಖಾನೆಯ ಥರ್ಮಕೋಲ್ ಇಟ್ಟಿದ್ದ ಸ್ಥಳದಲ್ಲಿ ಅಗ್ನಿ ಕಾಣಿಸಿಕೊಂಡು, ಇಡೀ ಕಾರ್ಖಾನೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ. ಬೆಂಕಿ ನಂದಿಸಲು ಸಾಧ್ಯವಾಗದೆ ಕಾರ್ಮಿಕರು ಹೊರಗೋಡಿದ್ದಾರೆ. ಹೀಗಾಗಿ, ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನವನ್ನು ಪಡುತ್ತಿದ್ದಾರೆ. ಕತ್ತಲೆ ಮತ್ತು ದಟ್ಟವಾದ ಹೊಗೆ ಕಾರ್ಯಚರಣೆಗೆ ಅಡ್ಡಿ ಮಾಡಿದೆ.