ಪ್ರೀತಿಯಿಂದ ತಬ್ಬಿಕೊಳ್ಳಲು ಕೈಚಾಚಿದ ದಿವ್ಯಾಂಗ ಮಗಳ ಕತ್ತನ್ನೇ ಕೊಯ್ದುಬಿಟ್ಟಪಾಪಿ ಚಿಕ್ಕಪ್ಪ! | Janata news
ಚಿಕ್ಕಬಳ್ಳಾಪುರ : ಪ್ರೀತಿಯಿಂದ ತಬ್ಬಿಕೊಳ್ಳಲು ಬಂದ ಪುಟ್ಟಕಂದಮ್ಮನನ್ನೇ ನಿರ್ದಯಿಯಾಗಿ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಹೂವಿನ ವ್ಯಾಪಾರಿಯಾದ ಆರೋಪಿ ವ್ಯಾಪಾರಿ ಶಂಕರ್ (32) ತನ್ನ ಅಣ್ಣನ ಮಗಳು ಚಾರ್ವಿತಾ(5)ಳನ್ನು ಕೊಲೆ ಮಾಡಿದ್ದಾನೆ.
ಚಾರ್ವಿತಾ ಹುಟ್ಟಿದಾಗಿನಿಂದಲೂ ದರಿದ್ರ ವಕ್ಕರಿಸಿಕೊಂಡಿದೆ ಎಂದು ಆಕೆಯ ಮುಖ ಕಂಡಾಗಲೆಲ್ಲ ಆರೋಪಿ ಶಂಕರ್ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಈ ವಿಚಾರಕ್ಕೆ ಕೋಪಗೊಂಡು ಈ ಹಿಂದೆ ಮನೆಯನ್ನೂ ಬಿಟ್ಟು ಹೋಗಿದ್ದ. ಇತ್ತೀಚಿಗೆ ವಾಪಸ್ ಬಂದಿದ್ದ ಶಂಕರ್, ಮಂಗಳವಾರ ಸಂಜೆ ಮನೆಗೆ ಬಂದ ಚಿಕ್ಕಪ್ಪನನ್ನು ತಬ್ಬಿಸಿಕೊಳ್ಳಲು ಚಾರ್ವಿತಾ ಮುಂದಾಗ ಜೇಬಿನಲ್ಲಿದ್ದ ಚಾಕು ತೆಗೆದು ಮಗಳ ಕತ್ತು ಕೊಯ್ದು ಕೊಂದಿದ್ದಾನೆ
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.