ಅಕ್ಕನ ಗಂಡನನ್ನು ಕೊಂದ ಬಾಮೈದ: ನಾಲ್ವರ ಬಂಧನ! | Janata news
ಹಾಸನ : ಚಾಮುಂಡೇಶ್ವರಿ ವಿದ್ಯುತ್ ಕಂಪನಿ ಕಿರಿಯ ಸಹಾಯಕನನ್ನು ನಗರಕ್ಕೆ ಸಮೀಪದ ಹೂವಿನ ಹಳ್ಳಿ ಕಾವಲಿನ ಹೊಲದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಸ್ವಂತ ಅಕ್ಕನ ಗಂಡನನ್ನೇ ತಮ್ಮ ಕೊಲೆ ಮಾಡಿದ್ದಾನೆ.
ಸಂತೋಷ್ಕುಮಾರ್ (36) ಮೃತ ವ್ಯಕ್ತಿ. ಹಾಸನದ ಸಂತೋಷ್ ಎಂಬಾತ 13 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ. ಮದುವೆ ಬಳಿಕ ಆತನ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಸೆಸ್ಕ್ನ ಕಿರಿಯ ಸಹಾಯಕನಾಗಿ ಉದ್ಯೋಗ ದೊರೆತಿತ್ತು.
ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದಂತ ಸಂತೋಷ್, ಕಳೆದ ಒಂದು ವರ್ಷದಿಂದ ಕೆಲಸಕ್ಕೆ ಹೋಗದೇ, ಪ್ರತಿದಿನ ಕುಡಿದು ಬಂದು, ಪ್ರೀತಿಸಿ ಮದುವೆಯಾಗಿದ್ದಂತ ಪತ್ನಿಗೆ ಕಿರುಕುಳ ನೀಡುತ್ತಿದ್ದಂತೆ.
ಇದನ್ನು ಹತ್ತಿರದಿಂದ ಗಮನಿಸಿದಂತ ಬಾಮೈದ ಸುದೀನ್ ಕುಮಾರ್ ರಾಜಿ ಸಂಧಾನ ನಡೆಸಿದ್ದಾನೆ. ಬುದ್ಧಿವಾದ ಕೂಡ ಹೇಳಿ ಹೀಗೆಲ್ಲಾ ಮಾಡಬಾರದು ಎಂಬುದಾಗಿ ಹೇಳಿದ್ದಾನೆ. ಎಷ್ಟೇ ಬುದ್ದಿವಾದ ಹೇಳಿದರು ಸಂತೋಷ್ ಮಾತ್ರ ಬದಲಾಗಿಲ್ಲ.
ಇದೇ ಕಾರಣಕ್ಕಾಗಿ ಮನನೊಂದ ಆತ ಸ್ನೇಹಿತ ಅನುಕೂಲ್, ಸುರೇಶ್, ಸತೀಶ್ ಜೊತೆಗೂಡಿ ಮಾತನಾಡುವುದಿದೆ ಬನ್ನಿ ಎಂಬುದಾಗಿ ಜನವರಿ 16ರಂದು ಸಂತೋಷ್ ನನ್ನ ಕರೆಸಿದ್ದಾರೆ. ಈ ವೇಳೆ ಗಲಾಟೆ ಜೋರಾಗಿ, ಸಂತೋಷ್ ನಿಗೆ ಗುಂಡು ಹಾರಿಸಿ, ಹತ್ಯೆ ಮಾಡಿದ್ದಾರೆ.
ಸುದೀನ್ ಕುಮಾರ್, ಅನುಕೂಲ್, ಸುರೇಶ್, ಸತೀಶ್ ನನ್ನು ಹಾಸನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 1 ರಿವಾಲ್ವರ್, 29 ಸಜೀವ ಗುಂಡುಗಳು, ಒಂದು ಡಸ್ಟರ್ ಕಾರನ್ನು ವಶಕ್ಕೆ ಪಡೆಯಲಾಗಿದೆ.