ರೈಲ್ವೇಗೆ ಮಾತ್ರವಲ್ಲದೇ, ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೂ ಪೂರೈಕೆ ಮಾಡಲಾಗುತಿತ್ತು, ಸಮಗ್ರ ತನಿಖೆಯಿಂದ ಸತ್ಯ ಹೊರಬರಲಿದೆ: ಬಿ.ವೈ.ರಾಘವೇಂದ್ರ | Janata news
ಶಿವಮೊಗ್ಗ : ಬೆಳಗ್ಗೆ ಬಿ. ವೈ. ರಾಘವೇಂದ್ರ ಶಿವಮೊಗ್ಗ ಸಮೀಪದ ಕಲ್ಲು ಕ್ರಷರ್ನಲ್ಲಿ ಭಾರೀ ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಭೇಟಿ ನೀಡಿದರು. ಸಮಗ್ರ ತನಿಖೆಯಿಂದ ಸತ್ಯಾಸತ್ಯತೆಗಳು ಹೊರಬರಬೇಕಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ.
ಸ್ಫೋಟದ ಶಬ್ಧಕ್ಕೆ ಇಡೀ ಜಿಲ್ಲೆಯ ಜನ ರಾತ್ರಿ ಮನೆ ಬಿಟ್ಟು ಹೊರ ಬಂದಿದ್ದರು. ಸ್ಫೋಟದ ತೀವ್ರತೆಗೆ ಭೂಮಿ ಅಲುಗಾಡಿದ ಭಾಸವಾಗಿತ್ತು. ಸ್ಫೋಟ ಸಂಭವಿಸಿ ದುರ್ಘಟನೆ ಸಂಭವಿಸಿದೆ. ಪ್ರಸ್ತುತ ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿಗಾಗಿ ಕಾಯುತ್ತಿದ್ದೇವೆ.
ಈ ಪ್ರದೇಶದಲ್ಲಿ 40-50 ಕ್ರಷರ್ಗಳಿವೆ. ಜಿಲ್ಲಾಡಳಿತದಿಂದ ಅವರು ಲೈಸೆನ್ಸ್ ಪಡೆದಿದ್ದಾರೆ. ಜಲ್ಲಿಗಳನ್ನು ರೈಲ್ವೆಗೆ ಮಾತ್ರ ಪೂರೈಕೆ ಮಾಡುವುದಿಲ್ಲ. ಮನೆ ನಿರ್ಮಾಣ, ಸಾರ್ವಜನಿಕ ಕೆಲಸಗಳಿಗೂ ಪೂರೈಕೆ ಮಾಡಲಾಗುತ್ತದೆ ಜಿಲ್ಲಾಡಳಿತದಿಂದ ಅವರು ಲೈಸೆನ್ಸ್ ಪಡೆದಿದ್ದಾರೆ. ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.