ಲಂಚ ಆರೋಪ: ದೂರು ದಾಖಲು, ಆಪ್ತ ಸಹಾಯಕ ಯನ್ನು ಹುದ್ದೆಯಿಂದ ತೆಗೆದುಹಾಕಿದ ಸಚಿವ ಆರ್.ಅಶೋಕ್ | Janata news
ಚಿಕ್ಕಮಗಳೂರು : ಕಂದಾಯ ಸಚಿವ ಆರ್. ಅಶೋಕ್ ಅವರ ಆಪ್ತ ಕಾರ್ಯದರ್ಶಿ ಗಂಗಾಧರ್ ಅವರ ವಿರುದ್ಧ ಲಂಚ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಕಂದಾಯ ಸಚಿವ ಆರ್.ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬಾತ ಹಣಕ್ಕಾಗಿ ಬೇಡಿಕೆ ಇಟ್ಟು, ಬೆದರಿಕ ಹಾಕಿದ್ದಾರೆ ಎಂದು ಶೃಂಗೇರಿಯ ಉಪ ನೋಂದಣಾಧಿಕಾರಿ ಎಚ್.ಎಸ್.ಚಲುವರಾಜು ಶೃಂಗೇರಿಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಗಂಗಾಧರ್ ಜತೆಗಿನ ಮೊಬೈಲ್ ಸಂಭಾಷಣೆ ಮತ್ತು ಅವರು ಶೃಂಗೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿನ ಪೊಟೋಗಳನ್ನು ದೂರಿನ ಜತೆಗೆ ಉಪ ನೋಂದಣಾಧಿಕಾರಿ ಎಚ್.ಎಸ್. ಚೆಲುವರಾಜು ಅವರು ಪೊಲೀಸರಿಗೆ ಸಲ್ಲಿಸಿದ್ದಾರೆ
ಜ.24ಕ್ಕೆ ಶೃಂಗೇರಿಗೆ ಸಚಿವ ಅಶೋಕ್ ಭೇಟಿ ನಿಗದಿಯಾಗಿತ್ತು. ಆಗ ನಾನು ಸಚಿವ ಅಶೋಕ್ ಅವರ ಪಿಎ ಗಂಗಾಧರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ ಸಚಿವರು ಬರುವ ವಿಷಯ ತಿಳಿಸಿದ್ದರು. ಶೃಂಗೇರಿಗೆ ಸಂಜೆ ಸಚಿವರು ಬರುತ್ತಾರೆ ಭೇಟಿಯಾಗುವಂತೆ ಸೂಚಿಸಿದರು ಎಂದು ವಿವರಿಸಿದ್ದಾರೆ.
ಅಂದರಂತೆ ಸಚಿವರನ್ನು ಭೇಟಿಯಾಗಲು ಆದಿಚುಂಚನಗರಿ ಸಮುದಾಯ ಭವನಕ್ಕೆ ಸಂಜೆ 6 ಗಂಟೆಗೆ ಹೋದೆ. ಒಂದು ಫೈಲ್ಗೆ ಸಂಬಂಧಿಸಿದಂತೆ ಅವರು ಸಚಿವರ ಆಪ್ತ ಸಹಾಯಕ ಗಂಗಾಧರ ಎಂಬುವವರು ಸಮದಾಯ ಭವನ ಕೊಠಡಿಯೊಳಕ್ಕೆ ಕರೆದೊಯ್ದರು, ಹಣಕ್ಕೆ ಬೇಡಿಕೆ ಇಟ್ಟರು.
ನಾನು ಯಾರಿಗೂ ಈ ರೀತಿ ಹಣ ನೀಡುವ ಅಥವಾ ಯಾರಿಂದಲೂ ಹಣ ಪಡೆಯುವ ಅಭ್ಯಾಸ ಇಟ್ಟುಕೊಂಡಿಲ್ಲ ಎಂದು ಸ್ಥಳದಲ್ಲಿಯೇ ಆತನಿಗೆ ತಿಳಿಸಿ, ಬೇಡಿಕೆಯನ್ನು ತಿರಸ್ಕರಿಸಿದೆ. ಇದಕ್ಕೆ ಒಪ್ಪದ ಆತ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಸದ್ಯ ಅಶೋಕ್ ಅವರು ಹುದ್ದೆಯಿಂದ ತೆಗೆದುಹಾಕಿದ್ದಾರೆ.