ಯುವಕರ ತಂಡದಿಂದ ಹಲ್ಲೆ: ಯುವಕರಿಬ್ಬರಿಗೆ ಚಾಕು ಇರಿತ, ಓರ್ವ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ | Janata news
ಶಿವಮೊಗ್ಗ : ಐದಾರು ಯುವಕರ ತಂಡದಿಂದ ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯವಾಗಿದ ಘಟನೆ ನಗರದ ಸುಂದರ ಆಶ್ರಯ ಬಾರ್ ಬಳಿ ನಡೆದಿದೆ.
ಕೆ.ಆರ್. ಪುರಂ ನಿವಾಸಿ ಜೀವನ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಿಗೇಹಟ್ಟಿಯ ಕೇಶವ್ ಗಂಭೀರ ಗಾಯಗೊಂಡಿದ್ದಾನೆ.
ಶಿವಮೊಗ್ಗ ನಗರದ ಗಾರ್ಡನ್ ಏರಿಯಾದ ಸುಂದರಾಶ್ರಯ ಲಾಡ್ಜ್ ಬಳಿ ದುಷ್ಕರ್ಮಿಗಳು ಈ ಯವಕರ ಮೇಲೆ ದಾಳಿ ನಡೆಸಿ ಚಾಕುವಿನಿಂದ ಇರಿದಿದ್ದಾರೆ. ದಾಳಿ ನಡೆಸಿ ಘಟನೆ ಬಳಿಕ ಯುವಕರ ಗ್ಯಾಂಗ್ ಎಸ್ಕೇಪ್ ಆಗಿದೆ.
ಸದ್ಯ ಈ ಪ್ರಕರಣ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
English summary :Shivamogga