ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗನನ್ನೇ ಕ್ರೂರವಾಗಿ ಕೊಲೆ ಮಾಡಿದ ತಂದೆ | Janata news
ರಾಯಚೂರು : ತಂದೆಯೇ ಮಗನನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಎಲೆಕೂಡ್ಲಗಿ ಗ್ರಾಮದ ಬಳಿ ನಡೆದಿದೆ.
4 ವರ್ಷದ ಮಹೇಶ ತಂದೆಯಿಂದ ಕೊಲೆಯಾದ ದುರ್ದೈವಿಯಾಗಿದ್ದು, ಇವನ ತಂದೆ ಯಲ್ಲಪ್ಪ ಕೊಲೆ ಮಾಡಿರುವ ಆರೋಪಿ.
ತವರು ಮನೆಗೆ ತೆರಳಿದ್ದ ಪತ್ನಿ ವಾಪಸ್ಸು ಬರದೇ ಇರುವುದಕ್ಕೆ ಪತ್ನಿ ಜೊತೆಗೆ ಜಗಳವಾಡಿದ ಯಲ್ಲಪ್ಪ ಕೋಪದಲ್ಲಿ, ಹೆಂಡತಿಯ ಊರಿಗೆ ಹೋಗಿ ಮಗನನ್ನ ಕಿಡ್ನಾಪ್ ಮಾಡಿಕೊಂಡು ಬಂದಿದ್ದ ಯಲ್ಲಪ್ಪ ತನ್ನ ಮಗುವನ್ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದೆ.
ಸದ್ಯ ಮಗುವನ್ನು ಕತ್ತು ಹಿಸುಕಿ ಜಮೀನಿನಲ್ಲಿ ಎಸೆಯಲಾಗಿದೆ. ಮಗನನ್ನ ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಬಾಲಕನ ತಾಯಿ ಮಹೇಶಮ್ಮ ಸದ್ಯ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಸಿಂಧನೂರ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಕೊಲೆ ಆರೋಪಿ ಯಲ್ಲಪ್ಪನನ್ನು ಬಂಧಿಸಿದ್ದಾರೆ.