ಶುಲ್ಕ ಕಟ್ಟುವ ವಿಚಾರ: ಖಾಸಗಿ ಶಾಲೆಯವರಿಂದ ವಿದ್ಯಾರ್ಥಿ ಹಾಗೂ ಪೋಷಕರ ಮೇಲೆ ಹಲ್ಲೆ ಆರೋಪ | Janata news
ರಾಯಚೂರು : ಶಾಲೆಯ ಶುಲ್ಕ ಕಟ್ಟುವ ವಿಚಾರಕ್ಕೆ ಖಾಸಗಿ ಶಾಲೆಯ ಸಂಸ್ಥೆ ನಿರ್ದೇಶಕ ಹಾಗೂ ಮುಖ್ಯಸ್ಥೆ ವಿದ್ಯಾರ್ಥಿ ಮತ್ತು ಆತನ ಪೋಷಕರ ಮೇಲೆ ಹಲ್ಲೆ ಮಾಡಿರುವ ಆರೋಪ ಜಿಲ್ಲೆಯ ಸಿಂಧನೂರು ಪಟ್ಟಣ ಠಾಣೆ ಬಳಿ ಕೇಳಿ ಬಂದಿದೆ.
ಮಾಂಟೆಸ್ಸರಿ ಶಾಲೆಯಲ್ಲಿ ಬಾಲಕ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಇದೇ 2021 ಜ.25 ರಂದು ವಿದ್ಯಾರ್ಥಿಯನ್ನು ಶಾಲೆಗೆ ಕಳುಹಿಸುವ ವಿಚಾರಕ್ಕೆ ಮೌನೇಶ ದೊರೆ, ಸುರೇಶ ಕಟ್ಟಿಮನಿ, ಸಿಂಧನೂರು ಬಿಇಒರೊಂದಿಗೆ ಮಾತನಾಡಿದ ಬಳಿಕ ಶಾಲೆಗೆ ಕಳುಹಿಸಲಾಗಿದೆ.
ಈ ಸಂಬಂಧ ವಿದ್ಯಾರ್ಥಿಯ ಪೋಷಕರು 2021 ಫೆ.2ರಂದು ಶಾಲೆ ಶುಲ್ಕ ವಿಚಾರಕ್ಕೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಠಾಣೆಗೆ ವಿದ್ಯಾರ್ಥಿ ಹಾಗೂ ಆತನ ಪೋಷಕರನ್ನ ವಿಚಾರಣೆಗೆ ಕಳುಹಿಸಲಾಗಿದೆ. ಜತೆಗೆ ಮಾಂಟೆಸ್ಸರಿ ಶಾಲೆಯ ಕಾಮೆಪಲ್ಲಿ ಸತೀಶ್ ಕುಮಾರ್ ಮತ್ತು ಮುಖ್ಯಸ್ಥೆ ಜ್ಯೋತಿ ವೆಂಕಟರತ್ನರನ್ನ ಕರೆಯಿಸಲಾಗಿದೆ.
ವಿಚಾರಣೆಗೆಂದು ಪೊಲೀಸರು ಶಾಲಾ ಮುಖ್ಯಸ್ಥ ಮತ್ತು ಪೋಷಕರನ್ನು ಕರೆಸಿದ ವೇಳೆ ಸರ್ಕಲ್ ಇನ್ಸ್ಫೆಕ್ಟರ್ ಮುಂದೆಯೇ ಮುಖ್ಯಸ್ಥ ಸತೀಶ್ಕುಮಾರ್, ಸಂಪತ್ ತಾಯಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಘಟನೆ ಸಂಬಂಧ ವಿದ್ಯಾರ್ಥಿಯ ತಾಯಿ ನಾಗವಿದ್ಯಾ ಮಾಂಟೆಸ್ಸರಿ ಶಾಲೆಯ ಆಡಳಿತ ಮಂಡಳಿಯ ಕಾಮೆಪಲ್ಲಿ ಸತೀಶ್ ಕುಮಾರ್, ಶಾಲೆ ಮುಖ್ಯಸ್ಥೆ ವೆಂಕಟರತ್ನ ವಿರುದ್ಧ ದೂರು ನೀಡಿದ್ದಾರೆ. ಇದರನ್ವಯ ಆರೋಪಿಗಳ ವಿರುದ್ಧ ಕಲಂ 143, 147, 324, 504, 325,354, 504 ಸಹಿತ 149 ಐಪಿಸಿ ಐಡಿಯಲ್ಲಿ ಸಿಂಧನೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.