ಕೌಟುಂಬಿಕ ಕಲಹ: ಜಲಾಶಯಕ್ಕೆ ಹಾರಿ ತಾಯಿ ಮಗ ಆತ್ಮಹತ್ಯೆ! | Janata news
ಚಾಮರಾಜನಗರ : ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಜರುಗಿದೆ.
ತಮಿಳುನಾಡು ರಾಜ್ಯದ ಬರಗೂರು ಸಮೀಪದ ಬೆಜ್ಜಲಪಾಳ್ಯ ಗ್ರಾಮದ ಚಿನ್ನಮ್ಮ(35) ಮತ್ತು ಮಹದೇವಸ್ವಾಮಿ(14) ಎಂಬುವವರೇ ಮೃತ ದುರ್ದೈವಿಗಳು.
ಮೃತ ಚಿನ್ನಮ್ಮ ಮತ್ತು ಕುಟುಂಬಸ್ಥರು ಮೂಲತಃ ತಮಿಳುನಾಡಿನವರಾಗಿದ್ದರು. ತಾಲೂಕಿನ ಹೂಗ್ಯಂ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೋರ್ವರ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡಿ ಜೀವನ ಸಾಗಿಸುತ್ತಿದ್ದರು.
ಕುಟುಂಬದಲ್ಲಿ ಆಗಾಗ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ. ಬುಧವಾರ ರಾತ್ರಿ ಕುಟುಂಬ ಕಲಹದಿಂದ ಬೇಸತ್ತು ಹೂಗ್ಯ ಗ್ರಾಮದ ಸಮೀಪ ಇರುವ ಮಿಣ್ಣತ್ತಲ್ ಜಲಾಶಯಕ್ಕೆ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಗ್ರಾಮಸ್ಥರು ನೀರಿನಲ್ಲಿ ತೇಲುತ್ತಿರುವ ಶವಗಳನ್ನು ನೋಡಿ ರಾಮಪುರ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ.
ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.