ಯದುವೀರ್ ಒಡೆಯರ್ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ | Janata news
ಮೈಸೂರು : ಯದುವಂಶದ 27ನೇ ಮಹಾರಾಜರಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆಯೊಂದು ಸೃಷ್ಟಿಯಾಗಿದ್ದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿ ರೈತರ ಹೋರಾಟದ ಪರವಾಗಿ ಪೋಸ್ಟ್ ಒಂದನ್ನ ಹಾಕಲಾಗಿದೆ.
ಟ್ವೀಟರ್ ಖಾತೆಯಲ್ಲಿ ನಾವು ರೈತರ ಪರವಾಗಿದ್ದೇವೆ. ರೈತರನ್ನು ಬೆಂಬಲಿಸುವುದು ನಮ್ಮ ಆದ್ಯತೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಕೃಷಿ ಸಮಸ್ಯೆಗಳನ್ನ ಬಗೆಹರಿಸಿ ಎಂದು ಟ್ವೀಟ್ ಮಾಡಲಾಗಿದೆ.
ಈ ಟ್ವೀಟ್ ಅನ್ನು ಕೃಷಿ ಕಾಯ್ದೆ ವಿರೋಧಿಗಳು ಶೇರ್ ಮಾಡಿಕೊಂಡು ತಮ್ಮ ಖಾತೆಗೆ ಲಗತ್ತಿಸುತ್ತಿದ್ದಾರೆ. ಕೃಷಿ ಕಾಯ್ದೆ ಪರವಾಗಿ ಇರುವವರು ಯದುವೀರ್ ಅವರ ಈ ನಡೆ ಸರಿಯಿಲ್ಲ ಎನ್ನುತ್ತಿದ್ದಾರೆ. ಹೀಗೆ ಯದುವೀರ್ ಅವರ ಹೆಸರಿನಲ್ಲಿ ಇರುವ ಈ ಪೋಸ್ಟ್ಗೆ ಸಹಸ್ರಾರು ಪರ-ವಿರೋಧ ಕಮೆಂಟ್ಗಳು ಬಂದಿವೆ.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇನ್ಸ್ಟಾಗ್ರಾಂ ಖಾತೆಯಲ್ಲಿ ನಕಲಿ ಟ್ವಿಟರ್ ಖಾತೆಯ ಸ್ಕ್ರೀನ್ಶಾಟ್ ಜೊತೆ ಸ್ಪಷ್ಟನೆ ನೀಡಿರುವ ಯದುವೀರ್, ಇದೊಂದು ಫೇಕ್ ಅಕೌಂಟ್ ಆಗಿದ್ದು ಇದನ್ನ ಯಾರು ನಂಬಬೇಡಿ ಹಾಗೂ ಫಾಲೋಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನ ಯಾರು ಸಹ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ಸೈಬರ್ ಕ್ರೈಂಗೆ ದೂರು ನೀಡಿರುವ ಯದುವೀರ್ಫೇಕ್ ಟ್ವಿಟರ್ ಅಕೌಂಟ್ ಬಗ್ಗೆ ದೂರು ನೀಡಿರುವ ಯದುವೀರ್ ಒಡೆಯರ್. ತಮ್ಮ ಸಿಬ್ಬಂದಿ ಮೂಲಕ ಮೈಸೂರಿನ ಸೈಬರ್ ಕ್ರೈಂ ಪೊಲೀಸರ ಬಳಿ ಪ್ರಕರಣ ದಾಖಲಿಸಿದ್ದಾರೆ.