ಕೋತಿಗಳಿಗೆ ವಿಷ ಉಣಿಸಿ ಮಾರಣ ಹೋಮ! | Janata news
ಚಿಕ್ಕಬಳ್ಳಾಪುರ : ವಿಷಪೂರಿತ ಆಹಾರ ಕೊಟ್ಟು ಕೋತಿಗಳನ್ನ ದುಷ್ಕರ್ಮಿಗಳು ಕೊಂದು ಹಾಕಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚನ್ನಬೈರೇನಹಳ್ಳಿಯಲ್ಲಿ ನಡೆದಿದೆ.
ಗೌರಿಬಿದನೂರು ತಾಲೂಕಿನ ಕಲ್ಲೂಡಿ ಸೇತುವೆ ಬಳಿ 50 ಕ್ಕೂ ಹೆಚ್ಚು ಮೂಕ ಜೀವಿ ಕೋತಿಗಳನ್ನು ಕೊಂದು ಎಸೆಯುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಲೂಡಿ ಸೇತುವೆ ಬಳಿ ಬೆಳಿಗ್ಗೆ ಟ್ಯಾಕ್ಟರ್ ನಲ್ಲಿ ತಂದು ಸತ್ತ ಕೋತಿಗಳನ್ನು ಎಸೆಯುತ್ತಿದ್ದವರನ್ನು ಗ್ರಾಮಸ್ಥರು, ಟ್ರ್ಯಾಕ್ಟರ್ ಚಾಲಕನನ್ನ ವಶಕ್ಕೆ ಪಡೆದರು. ಈ ವೇಳೆ, ಟ್ರ್ಯಾಕ್ಟರ್ನಲ್ಲಿದ್ದ ನಾಲ್ವರು ಯುವಕರು ಪರಾರಿಯಾದರು.
ಚಾಲಕ ಕೃಷ್ಣಪ್ಪನನ್ನು ಹಿಡಿದು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಾಣಿಪ್ರಿಯರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.