ರಾಜ್ಯ ಸಾರಿಗೆ ಸಂಸ್ಥೆ ನೌಕರ ವೇತನ ಇಲ್ಲದೆ ಕಿಡ್ನಿ ಮಾರಾಟಕ್ಕಿಟ್ಟ ! | Janata news
ಕೊಪ್ಪಳ : ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ ಕಮ್ ನಿರ್ವಾಹಕ ಸೇವೆಯಲ್ಲಿರುವ ಜಿಲ್ಲೆಯ ಹನಮಂತ ಕಾಲೇಗಾರ ಅವರು, ವೇತನ ಇಲ್ಲದೆ ಕಿಡ್ನಿ ಮಾರಾಟಕ್ಕಿಡುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
ಹೌದು. ಕೊಪ್ಪಳ ಜಿಲ್ಲೆ ಗಂಗಾವತಿ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಕುಷ್ಟಗಿ ಮೂಲದ ಹನುಮಂತಪ್ಪ ತಮ್ಮ ಫೇಸ್ಬುಕ್ ಪೇಜ್ನಲ್ಲಿ ನೋವು ತೋಡಿಕೊಂಡಿದ್ದಾರೆ.
ಕುಷ್ಟಗಿ ನಿವಾಸಿಯಾಗಿರುವ ಹನಮಂತ ಕಾಲೇಗಾರ ಗಂಗಾವತಿ ಬಸ್ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಪೂರ್ಣ ವೇತನ ಪಾವತಿಸದೇ ಎಲ್ಲವೂ ಕಡಿತಗೊಂಡು ಕಡಿಮೆ ವೇತನ ಪಾವತಿಯಾಗಿದೆ. ನಾನು ಒಬ್ಬ ಸಾರಿಗೆ ನೌಕರ. ಮನೆ ಬಾಡಿಗೆ ಕಟ್ಟಲು ಮತ್ತು ರೇಷನ್ ತರುವುದಕ್ಕೂ ಸಹ ನನ್ನ ಬಳಿ ಹಣವಿಲ್ಲ. ನನ್ನ ಕಿಡ್ನಿ ಮಾರಾಟಕ್ಕಿವೆ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರೊಂದಿಗೆ ಫೋನ್ ನಂಬರ್ ಸಹ ಬರೆದಿದ್ದಾರೆ.
ಇದರಿಂದ ಮನನೊಂದಿರುವ ಹನಮಂತ ಕಾಲೇಗಾರ ಅವರು ಸಾಮಾಜಿಕ ಜಾಲತಾಣದಲ್ಲಿ ಈ ವೇತನದಲ್ಲಿ ಬಾಡಿಗೆ ಮನೆ, ರೇಷನ್ ಗೆ ಹಣ ಸಾಕಾಗುವುದಿಲ್ಲ. ನನ್ನ ಕಿಡ್ನಿ ಮಾರಾಟಕ್ಕಿದೆ ಎಂದು ಸ್ಟೇಟಸ್ ಹಾಕಿದ್ದಾರೆ.