ಗಂಡನಿಂದಲೇ ತುಂಬು ಗರ್ಭಿಣಿ ಕೊಲೆ! ಕಾರಣ ಏನು ಗೊತ್ತಾ? | Janata news
ಮೈಸೂರು : ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಯನ್ನೇ ಕೊಂದ ಘಟನೆ ಮೈಸೂರಿನ ಜಯನಗರದ ಚಿನ್ನಗಿರಿ ಕೊಪ್ಪಲಿನಲ್ಲಿ ಸಂಭವಿಸಿದೆ.
ರಾಘವೇಂದ್ರನ ಪತ್ನಿ ಕೀರ್ತನಾ(19) ಮೃತ ದುರ್ದೈವಿ. ರಾಘವೇಂದ್ರ, ಸುಂದರಿ ಎಂಬ ಮಹಿಳೆಯೊಂದಿಗೆ 5 ವರ್ಷದಿಂದ ಸಂಬಂಧ ಹೊಂದಿದ್ದ. ಅಲ್ಲದೇ ಕಳೆದ ಒಂದು ವರ್ಷದ ಹಿಂದೆ ಚಾಮರಾಜನಗರ ಮೂಲದ ಕೀರ್ತನಾಳನ್ನು ವಿವಾಹವಾಗಿದ್ದ. ವಿವಾಹದ ನಂತರವೂ ಸಂಬಂಧ ಮುಂದುವರೆಸಿದ್ದ ಎನ್ನಲಾಗಿದೆ.
ಇಂದು ಕೂಡ ಗಲಾಟೆ ನಡೆದು ಗರ್ಭಿಣಿ ಪತ್ನಿ ಕೀರ್ತನಾಳನ್ನ ಹೊಡೆದು, ಬಳಿಕ ನೇಣು ಹಾಕಿದ್ದಾನೆ ಎಂದು ಆರೋಪ ಮಾಡಲಾಗಿದೆ. ಮೃತಳ ಕುಟುಂಬಸ್ಥರು ರಾಘವೇಂದ್ರನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಮೈಸೂರಿನ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.